The most-visited ಕನ್ನಡ Wikipedia articles, updated daily. Learn more...
ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.
ಕ್ರಿಕೆಟ್ ಎಂಬುದು ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಯು ಸಮುದ್ರದಾಚೆಗಿನ ದೇಶಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು.ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಆಟದ ನಿಯಮಾವಳಿಗಳು ಕ್ರಿಕೆಟ್ನ ಕಾನೂನುಗಳು ಎಂದು ಪರಿಚಿತವಾಗಿವೆ.
ರಷ್ಯಾ (ರಷ್ಯನ್: Россия), ಅಧಿಕೃತವಾಗಿ ರಸಿಸ್ಕಾಯಾ ಫೇಡರಾಟ್ಸಿಯ (ರಷ್ಯನ್: Российская Федерация - ರಷ್ಯಾದ ಒಕ್ಕೂಟ), ಉತ್ತರ ಯುರೇಷಿಯಾ (ಯುರೋಪ್ ಹಾಗೂ ಏಷ್ಯಾ ಒಟ್ಟಿಗೆ)ದಲ್ಲಿರುವ ಒಂದು ದೇಶ. ಇದೊಂದು 83 ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್ಯಾ ತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ (ವಾಯುವ್ಯದಿಂದ ಆಗ್ನೇಯದವರೆಗೆ) : ನಾರ್ವೆ, ಫಿನ್ಲ್ಯಾಂಡ್, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ (ಕಲಿನಿನ್ಗ್ರಾಡ್ ಓಬ್ಲಸ್ಟ್ ಮೂಲಕ), ಪೋಲೆಂಡ್ (ಕಲಿನಿನ್ಗ್ರಾಡ್ ಓಬ್ಲಸ್ಟ್ ಮೂಲಕ), ಬೆಲಾರೂಸ್, ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಕಜಕ್ಸ್ತಾನ್, ಚೀನಾ, ಮಂಗೋಲಿಯಾ ಮತ್ತು ಉತ್ತರ ಕೊರಿಯಾ.
ದೆಹಲಿ , ಸ್ಥಳೀಯವಾಗಿ ದಿಲ್ಲಿ ಎಂದೇ ಹೆಸರಾಗಿರುವ ಹಿಂದಿ:दिल्ली ಪಂಜಾಬಿ:ਦਿੱਲੀ ಉರ್ದು: دلّی dillī ಮತ್ತು ಅಧಿಕೃತವಾಗಿ ನ್ಯಾಷನಲ್ಉರ್ದು: دلّی ಕ್ಯಾಪಿಟಲ್ ಟೆರಿಟರಿ ಆಫ್ ಡೆಲ್ಲಿ (ಎನ್.ಸಿ.ಟಿ) ಎಂದು ಕರೆಯಲ್ಪಡುವ ರಾಷ್ಟ್ರೀಯ ರಾಜಧಾನಿ ನಗರವು ಪ್ರಾದೇಶಿಕವಾಗಿ ಭಾರತದಲ್ಲೇ ಅತಿ ದೊಡ್ಡ ಮಹಾನಗರ ಮತ್ತು ಜನಸಂಖ್ಯೆಯಲ್ಲಿ ಎರಡನೇ ಅತಿ ದೊಡ್ಡ ಮಹಾನಗರವಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ೧೨.೨೫ ದಶಲಕ್ಷಕ್ಕೂ ಮಿಕ್ಕಿ ನಿವಾಸಿಗಳು ಮತ್ತು ೧೫.೯ ದಶಲಕ್ಷ ನಗರವಾಸಿಗಳನ್ನು ಹೊಂದಿರುವ ದೆಹಲಿ ಜನಸಂಖ್ಯೆಯಲ್ಲಿ ಜಗತ್ತಿನಲ್ಲೇ ಎಂಟನೇ ದೊಡ್ಡ ನಗರವಾಗಿದೆ. (ಇದರಲ್ಲಿ ನೋಯ್ಡಾ, ಗುರ್ಗಾಂವ್, ಫರಿದಾಬಾದ್ ಮತ್ತು ಘಜೀಯಾಬಾದ್ ಸೇರಿವೆ).
ಅಲೆಕ್ಸಾಂಡರ್ ಗ್ರಹಾಂ ಬೆಲ್ (ಮಾರ್ಚ್ ೩, ೧೮೪೭ – ಆಗಸ್ಟ್ ೨, ೧೯೨೨) ಒಬ್ಬ ಉತ್ಕೃಷ್ಟ ವಿಜ್ಞಾನಿ, ಆವಿಷ್ಕಾರಕ, ಎಂಜಿನಿಯರ್ ಮತ್ತು ಹೊಸತನದ ಪ್ರವರ್ತಕನಾಗಿದ್ದ. ಮೊದಲ ಕಾರ್ಯೋಪಯೋಗಿ ದೂರವಾಣಿಯನ್ನು ಸೃಷ್ಟಿಸಿದ ಕೀರ್ತಿ ಇವನಿಗೆ ದೊರಕಿದೆ. ಬೆಲ್ನ ತಂದೆ, ತಾತ, ಮತ್ತು ಸೋದರ ಇವರೆಲ್ಲರೂ ವಾಗ್ವೈಖರಿ ಮತ್ತು ವಾಕ್ ಶಕ್ತಿಗೆ ಸಂಬಂಧಿಸಿದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು, ಮತ್ತು ಅವನ ತಾಯಿ ಹಾಗೂ ಹೆಂಡತಿ ಕಿವುಡರಾಗಿದ್ದುದು ಬೆಲ್ನ ಜೀವಮಾನದ ಕಾರ್ಯದ ಮೇಲೆ ಆಳವಾದ ಪ್ರಭಾವವನ್ನು ಬೀರಿತ್ತು.
ಅಕೇಶಿಯ (pronounced /əˈkeɪʃə/) ಫ್ಯಾಬಸಿಯೆ ಕುಟುಂಬಕ್ಕೆ ಸೇರಿದ ಮಿಮೋಸೋಯ್ಡಿ ಉಪಪ್ರಭೇದ ಪೊದೆಗಳು ಹಾಗು ಮರಗಳ ಕುಲಕ್ಕೆ ಸೇರಿದೆ. ಇದರ ಅಸ್ತಿತ್ವವನ್ನು ಸ್ವೀಡಿಶ್ನ ಸಸ್ಯವಿಜ್ಞಾನಿ ಕಾರ್ಲ್ ಲಿನ್ನಯಯುಸ್ 1773ರಲ್ಲಿ ಮೊದಲ ಬಾರಿಗೆ ಆಫ್ರಿಕಾದಲ್ಲಿ ಪತ್ತೆ ಮಾಡಿದರು. ಆಸ್ಟ್ರೇಲಿಯನ್ ಪ್ರಭೇಧವಲ್ಲದ ಹಲವು ಮರಗಳು ಮುಳ್ಳಿನಿಂದ ಕೂಡಿರುತ್ತವೆ, ಆದರೆ ಬಹುತೇಕ ಆಸ್ಟ್ರೇಲಿಯನ್ ಅಕೇಶಿಯಗಳಲ್ಲಿ ಮುಳ್ಳುಗಳಿರುವುದಿಲ್ಲ.
ಎಡಿನ್ಬರ್ಗ್ (pronounced /ˈɛdɪnb(ʌ)ɹə/ ( listen), ED-in-brə ಅಥವಾ ED-in-bə-rə; (ಸ್ಕಾಟಿಷ್ ಭಾಷೆಯಲ್ಲಿ : ಈಡನ್ಬರ್ಗ್/ಎಡಿನ್ಬರ್ಗ್/ಎಂಬ್ರಾ/ಎಂಬುರ್ರೀ) ನಗರವು (ಗೇಲಿಕ್ ಭಾಷಿಕ: ಡುನ್ ಐಡೆಯಾನ್ನ್) ಸ್ಕಾಟ್ಲೆಂಡ್ನ ರಾಜಧಾನಿಯಾಗಿದೆ. ಯುನೈಟೆಡ್ ಕಿಂಗ್ಡಮ್ನಲ್ಲಿ ಏಳನೇ ಬಹು ಜನಭರಿತ ನಗರವಾಗಿದ್ದು ಸ್ಕಾಟ್ಲೆಂಡ್ನ ಎರಡನೇ ಬೃಹತ್ ಮಹಾನಗರವಾಗಿದೆ. ಸ್ಕಾಟ್ಲೆಂಡ್'ನ 32 ಸ್ಥಳೀಯ ಸರಕಾರಿ ಪೌರಸಮಿತೀಯ ಪ್ರದೇಶಗಳಲ್ಲಿ ಎಡಿನ್ಬರ್ಗ್ ಮಹಾನಗರ ಪೌರಸಮಿತಿ ಪ್ರದೇಶವು ಒಂದಾಗಿದೆ.
ಈ ಲೇಖನವು ಒಂದು ಹಿಂದೂ ಧರ್ಮಶಾಸ್ತ್ರ ಸಿದ್ಧಾಂತದ ಬಗ್ಗೆ ಸಂಬಂಧಿಸಿದ ವಿಷಯವಾಗಿದೆ: ದೇವರ ಮೂಲ ಅಥವಾ ನಿಖರವಾದ ಪುರಾವೆಯೊಂದಿಗಿನ ಸ್ಪಷ್ಟೀಕರಣ. ಬೇರೆ ಅರ್ಥಗಳಲ್ಲಿ ಹೇಳುವುದಾದರೆ, ಕೃಷ್ಣ (ಅಸ್ಪಷ್ಟತೆಯ ನಿವಾರಣೆ) ಮತ್ತು ಭಗವಾನ್(ಅಸ್ಪಷ್ಟತಾನಿವಾರಣೆ). ಸ್ವಯಂ ಭಗವಾನ್ (IAST svayam bhagavān ), "ದಿ ಲಾರ್ಡ್ " ಅಥವಾ ದೇವರೇ ಸ್ವತಃ , ಇದು ಒಂದು ಸಂಸ್ಕೃತ ಧರ್ಮಶಾಸ್ತ್ರ ಸಿದ್ಧಾಂತದ ಪದವಾಗಿದೆ.
ತಂಬಾಕು ಉರಿಸಿ ಅದರ ಹೊಗೆಯ ರುಚಿ ತೆಗೆದುಕೊಳ್ಳುವ ಅಥವಾ ಉಸಿರಿನ ಮೂಲಕ ಒಳತೆಗೆದುಕೊಳ್ಳುವುದನ್ನು ತಂಬಾಕು ಸೇವನೆ ಯೆಂದು ಕರೆಯಲಾಗುತ್ತದೆ. ಈ ಅಭ್ಯಾಸವು ಕ್ರಿ.ಪೂ 5000–3000ದಷ್ಟು ಹಿಂದೆಯೇ ರೂಢಿಯಲ್ಲಿತ್ತು BC. ಹಲವಾರು ನಾಗರೀಕತೆಗಳ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಧೂಪವುರಿಸುತ್ತಿದ್ದು, ಇದು ಮುಂದೆ ಉಪಭೋಗದ ಅಥವಾ ಸಾಮಾಜಿಕ ಸಾಧನವಾಗಿ ಬಳಕೆಯಾಗತೊಡಗಿತು. ಪ್ರಾಚೀನ ವಿಶ್ವದಲ್ಲಿ ತಂಬಾಕನ್ನು 1500ರ ಅಂತ್ಯಭಾಗದ ವೇಳೆಗೆ ಪರಿಚಯಿಸಲಾಯಿತು ಮತ್ತು ಇದು ವ್ಯಾಪಾರ ಮಾರ್ಗಗಳ ಮುಖಾಂತರ ಬೇರೆ ಸ್ಥಳಗಳನ್ನು ತಲುಪತೊಡಗಿತು.
ಪ್ರಾಚೀನ ಈಜಿಪ್ಟ್ ಪೌರಾತ್ಯ ಉತ್ತರ ಆಫ್ರಿಕಾದ ನೈಲ್ ನದಿ ದಂಡೆಯುದ್ದಕ್ಕೂ ಚಾಚಿಕೊಂಡಿದ್ದ ಒಂದು ಪುರಾತನ ನಾಗರಿಕತೆ, ಈ ಪ್ರದೇಶದಲ್ಲಿ ಈಗ ಆಧುನಿಕ ಈಜಿಪ್ಟ್ ಇದೆ. ಈ ನಾಗರಿಕತೆಯು ಸುಮಾರು ಕ್ರಿ.ಪೂ 3150ರ ಸಂದರ್ಭದಲ್ಲಿ ಒಳನಾಡು ಮತ್ತು ಕೆಳ ಈಜಿಪ್ಟಿನ ರಾಜಕೀಯ ಸಂಘಟನೆಯೊಂದಿಗೆ ಮೊದಲ ಫೇರೋನಡಿಯಲ್ಲಿ ಏಕೀಭವಗೊಂಡು, ನಂತರದ ಸುಮಾರು ಮೂರು ಸಹಸ್ರವರ್ಷಗಳಷ್ಟು ಕಾಲ ಬೆಳವಣಿಗೆ ಹೊಂದಿತು. ಇದರ ಇತಿಹಾಸವು ಸುಭದ್ರ ರಾಜ್ಯ ಗಳ ಸಂದರ್ಭದಲ್ಲಿ ಉತ್ತಮವಾಗಿತ್ತು, ನಂತರ ಈ ರಾಜ್ಯಗಳು 'ಮಧ್ಯಕಾಲೀನ ಯುಗ' ಎಂದು ಕರೆಯುವ ಪರಸ್ಪರ ಅಭದ್ರತೆಯ ಅವಧಿಯಲ್ಲಿ ಬೇರ್ಪಟ್ಟವು.
ಜೀವಿಗಳು ಶವವಾಗಿದ್ದರೂ ಅಥವಾ ಬದುಕಿದ್ದರೂ ವ್ಯತ್ಯಾಸವೇ ಇಲ್ಲದಂತೆ ಅವುಗಳ ಜೀವಾಳ(ಸಾಮಾನ್ಯವಾಗಿ ರಕ್ತದ ರೂಪದಲ್ಲಿ)ವನ್ನು ಕುಡಿದು ಜೀವಿಸುವ ಪೌರಾಣಿಕ ಇಲ್ಲವೇ ದಂತಕಥೆಯ ಕಲ್ಪನೆಗಳೇ ರಕ್ತಪಿಶಾಚಿಗ ಳಾಗಿವೆ. ದಂತಕಥೆಗಳ ಪ್ರಕಾರ, ರಕ್ತಪಿಶಾಚಿಗಳು ಆಗ್ಗಾಗ್ಗೆ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತವಲ್ಲದೇ ತಾವು ಬದುಕಿದ್ದಾಗ ಇದ್ದ ಸ್ಥಳದ ನೆರೆಹೊರೆಯಲ್ಲಿ ಉಪದ್ರವ ಕೊಡುವುದು ಇಲ್ಲವೇ ಸಾವುನೋವು ಉಂಟುಮಾಡುತ್ತಿರುತ್ತವೆ. ಶವಹೊದಿಕೆಗಳನ್ನು ಹೊದೆಯುವ ಅವು ಊದಿಕೊಂಡಿರುತ್ತವೆ ಹಾಗೂ ಕೆಂಪು ಕಳೆಯ ಅಥವಾ ಗಾಢ ಮುಖಚರ್ಯೆಯನ್ನು ಹೊಂದಿರುತ್ತವೆ ಎಂದು ಹೇಳಲಾಗುತ್ತದೆ.
ದಿ ಕಿಂಗ್ಸ್ ಸ್ಪೀಚ್ ೨೦೧೦ರ ಬ್ರಿಟಿಷ್ ಐತಿಹಾಸಿಕ ರೂಪಕದ ಚಲನಚಿತ್ರವಾಗಿದ್ದು, ಟಾಮ್ ಹೂಪರ್ ನಿರ್ದೇಶಿಸಿದ್ದಾರೆ ಮತ್ತು ಡೇವಿಡ್ ಸೈಡ್ಲರ್ ಚಿತ್ರಕಥೆ ಬರೆದಿದ್ದಾರೆ. ಕಾಲಿನ್ ಫಿರ್ತ್ ಕಿಂಗ್ ಜಾರ್ಜ್ VIಪಾತ್ರಧಾರಿಯಾಗಿದ್ದು, ತನ್ನ ಉಗ್ಗಿನ ದೋಷವನ್ನು ನಿವಾರಿಸಲು ಆಸ್ಟ್ರೇಲಿಯದ ವಾಕ್ ಚಿಕಿತ್ಸಕ ಲಯೋನೆಲ್ ಲಾಗ್ ಅವರನ್ನು ಭೇಟಿಯಾಗುತ್ತಾರೆ. ಈ ಪಾತ್ರವನ್ನು ಜೆಫ್ರಿ ರಷ್ ನಿರ್ವಹಿಸಿದ್ದಾರೆ.
ಟೂಲ್ ಎಂಬುದು, 1990ರಲ್ಲಿ ರಚನೆಯಾದ, ಅಮೆರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೊರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ಮೂಲದ ರಾಕ್ ಶೈಲಿ ಸಂಗೀತ ವಾದ್ಯತಂಡ. ಆರಂಭದಿಂದಲೂ ತಂಡದ ಸದಸ್ಯರ ಪಟ್ಟಿಯಲ್ಲಿ ಡ್ರಮ್ ವಾದಕ ಡ್ಯಾನಿ ಕ್ಯಾರಿ, ಗಿಟಾರ್ ವಾದಕ ಆಡಮ್ ಜೋನ್ಸ್ ಹಾಗೂ ಗಾಯಕ ಮೇಯ್ನಾರ್ಡ್ ಜೇಮ್ಸ್ ಕೀನನ್ ಸೇರಿದ್ದಾರೆ. ಇಸವಿ 1995ರಲ್ಲಿ, ಮೂಲ ಬಾಸ್ ಗಿಟಾರ್ ವಾದಕ ಪಾಲ್ ಡಿ'ಆಮೊರ್ರ ಸ್ಥಾನದಲ್ಲಿ ಸೇರಿದ ಜಸ್ಟಿನ್ ಛಾನ್ಸೆಲರ್ ಇಂದಿಗೂ ಸಹ ಬಾಸ್ ಗಿಟಾರ್ ವಾದಕರಾಗಿದ್ದಾರೆ.
ಯೋಗ (ಸಂಸ್ಕೃತ, ಪಾಲಿ: योग yóga ) ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಹಿಂದೂ ತತ್ವಶಾಸ್ತ್ರದ ಆರು ಸಂಪ್ರದಾಯಬದ್ಧ(ಆಸ್ತಿಕ) ಶಾಖೆ/ಪಂಥಗಳಲ್ಲಿ ಒಂದಕ್ಕೆ ಈ ಪದವನ್ನು ಬಳಸುತ್ತಾರಲ್ಲದೆ, ಆ ಪಂಥವು ತನ್ನ ಆಚರಣೆಗಳಿಂದ ತಲುಪಲು ಬಯಸುವ ಗುರಿಗೂ ಇದೇ ಪದವನ್ನು ಬಳಸುತ್ತಾರೆ.
ಚಾರ್ಲ್ಸ್ ಜಾನ್ ಹಫಾಮ್ ಡಿಕನ್ಸ್ , FRSA (pronounced /ˈtʃɑrlz ˈdɪkɪnz/; 7 ಫೆಬ್ರವರಿ 1812–9 ಜೂನ್ 1870), ಕಾವ್ಯನಾಮ "ಬೋಝ್", ವಿಕ್ಟೋರಿಯಾ ಯುಗದ ಅತ್ಯಂತ ಜನಪ್ರಿಯ ಇಂಗ್ಲಿಷ್ ಕಾದಂಬರಿಕಾರನಾಗಿದ್ದ ಮತ್ತು ಸಾರ್ವಕಾಲಿಕವಾಗಿರುವ ಅತ್ಯಂತ ಜನಪ್ರಿಯರ ಪೈಕಿ ಒಬ್ಬನಾಗಿದ್ದ. ಸಾಮಾಜಿಕ ಸುಧಾರಣೆಯ ವಸ್ತುವು ಆತನ ಕೃತಿಯಾದ್ಯಂತ ಪ್ರವಹಿಸುವುದರೊಂದಿಗೆ, ಸಾಹಿತ್ಯದ ಅತ್ಯಂತ ಸಾಂಪ್ರದಾಯಿಕ ಮಾದರಿ ಪಾತ್ರಗಳ ಪೈಕಿ ಕೆಲವೊಂದನ್ನು ಆತ ಸೃಷ್ಟಿಸಿದ. ಆತನ ಕಾದಂಬರಿಗಳು ಹಾಗೂ ಕಿರುಗತೆಗಳ ಜನಪ್ರಿಯತೆ ಎಷ್ಟಿದೆಯೆಂದರೆ, ಅವುಗಳ ಮುದ್ರಿತಪ್ರತಿ ಅಲಭ್ಯವಾಗಿದೆ ಎಂಬ ಪರಿಸ್ಥಿತಿ ಎಂದಿಗೂ ನಿರ್ಮಾಣಗೊಂಡಿದ್ದೇ ಇಲ್ಲ.
ಆಂಡ್ರ್ಯೂ ಜಾನ್ ಸ್ಟ್ರೌಸ್ , MBE (ಜನನ: 1977ರ ಮಾರ್ಚ್ 2ರಂದು) ಓರ್ವ ಇಂಗ್ಲಿಷ್ ಕ್ರಿಕೆಟಿಗನಾಗಿದ್ದು, ಈತ ಮಿಡ್ಲ್ಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ಗಾಗಿ ಕೌಂಟಿ ಕ್ರಿಕೆಟ್ ಆಡುತ್ತಾನೆ ಮತ್ತು ಇವನು ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕನಾಗಿದ್ದಾನೆ. ಎಡಗೈನಲ್ಲಿ ಸರಾಗವಾಗಿ ಆಡುವ ಓರ್ವ ಆರಂಭಿಕ ಬ್ಯಾಟುಗಾರನಾಗಿರುವ ಸ್ಟ್ರೌಸ್, ಬ್ಯಾಕ್ ಫೂಟ್ ಆಚೆಗೆ ಓಟವನ್ನು ಗಳಿಸುವ ಕಡೆಗೆ ಹೆಚ್ಚು ಒತ್ತಾಸೆ ನೀಡುತ್ತಾನೆ ಮತ್ತು ಬಹುತೇಕವಾಗಿ ಕಟ್ ಹಾಗೂ ಪುಲ್ ಹೊಡೆತಗಳನ್ನು ಆಡುತ್ತಾನೆ. ಸ್ಲಿಪ್ ಅಥವಾ ಕವರ್ಸ್ನಲ್ಲಿನ ತನ್ನ ಕ್ಷೇತ್ರರಕ್ಷಣಾ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆಯೂ ಸ್ಟ್ರೌಸ್ ಹೆಸರುವಾಸಿಯಾಗಿದ್ದಾನೆ.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದೂ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟೃವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ,ನೈರುತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಪ್ರವಾಸೋದ್ಯಮ ಅಥವಾ ಯೋಜಿತ ಪ್ರವಾಸವು ಮನರಂಜನೆ, ವಿರಾಮ ಅಥವಾ ವ್ಯಾಪಾರದ ಉದ್ದೇಶಗಳಿಗಾಗಿ ಮಾಡುವ ಪ್ರಯಾಣವಾಗಿದೆ. ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಪ್ರವಾಸಿಗರು ಎಂಬ ಪದವನ್ನು, "ವಿರಾಮ, ವ್ಯವಹಾರ ಮತ್ತು ಇತರ ಉದ್ದೇಶಗಳಿಗಾಗಿ ತನ್ನ ಎಂದಿನ ಪರಿಸರದಿಂದ ಹೊರಗಿನ ಸ್ಥಳಗಳಿಗೆ ಪ್ರಯಾಣಿಸಿ, ಅಲ್ಲಿ ಇಪ್ಪತ್ನಾಲ್ಕು (24) ಗಂಟೆಗಳಿಗಿಂತ ಹೆಚ್ಚು ಅವಧಿಗೆ ಉಳಿಯುವ ಮತ್ತು ಒಂದು ಸತತ ವರ್ಷಕ್ಕಿಂತ ಹೆಚ್ಚಾಗಿ ಉಳಿಯದ ಹಾಗೂ ತಾವು ಭೇಟಿ ನೀಡಿದ ಪ್ರದೇಶಗಳಲ್ಲಿ ಸಂಭಾವನೆ ಗಳಿಸುವ ಅಥವಾ ಪ್ರತಿಫಲ ಅಪೇಕ್ಷಿಸುವ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳದ ವ್ಯಕ್ತಿಗಳು" ಎಂಬುದಾಗಿ ವ್ಯಾಖ್ಯಾನಿಸಿದೆ. ಪ್ರವಾಸೋದ್ಯಮವು ವಿಶ್ವವ್ಯಾಪಕವಾಗಿ ಜನಪ್ರಿಯವಾಗಿರುವ ಒಂದು ವಿರಾಮದ ಚಟುವಟಿಕೆಯಾಗಿ ಮಾರ್ಪಟ್ಟಿದೆ.
ಅಂಕಗಣಿತ(Aritmetic)ವು ಸಂಖ್ಯೆಗಳ ಕೆಲವು ಪರಿಕ್ರಿಯೆ(Operations)ಗಳ ಲಕ್ಷಣಗಳನ್ನು ತಿಳಿಸುವ ಗಣಿತದ ಒಂದು ವಿಭಾಗ.ಇದು ನಮಗೆ 'ಎಷ್ಟು?', 'ಎಷ್ಟು ದೂರ?', 'ಎಷ್ಟು ಉದ್ದ?' ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತದೆ.ಅಂಕಗಣಿತವನ್ನು ಕೆಲವೊಮ್ಮೆ ಸಂಖ್ಯೆಗಳ ವಿಜ್ಞಾನ ಎಂದೂ ಕರೆಯುತ್ತಾರೆ. ನಾಗರಿಕತೆಯ ಬೆಳೆವಣಿಗೆಗೆ ಅನಾದಿಕಾಲದಿಂದಲೂ ಅಂಕಗಣಿತ ಅತ್ಯಾವಶ್ಯಕವಾಗಿದ್ದಿತೆಂಬುದು ¸ಸ್ಪಷ್ಟವಾಗಿಯೇ ಇದೆ. ಎಲ್ಲಾ ಜನಾಂಗಗಳ ಪೂವಿರ್ಕರು ಇದಕ್ಕಾಗಿ ಬಹಳ ಶ್ರಮಿಸಿರಬೇಕು.
ಒಂದು ಅಂತರಾಷ್ಟ್ರೀಯ ಆಚರಣೆ, ಅಂತರಾಷ್ಟ್ರೀಯ ವಾರ್ಷಿಕೋತ್ಸವ ಅಥವಾ ಅಂತರಾಷ್ಟ್ರೀಯ ಸಮರ್ಪಣೆಯು, ಅಂತರಾಷ್ತ್ರೀಯ ಹಿತಾಸಕ್ತಿ ಮತ್ತು ಕಳಕಳಿ ಯನ್ನು ಪ್ರಕಟಿಸಲು ಒಂದು ನಿರ್ದಿಷ್ಟ ಸತು ಸಮಯವನ್ನು ಮುಡುಪಾಗಿಟ್ಟು, ಆ ಸಮಯದಲ್ಲಿ ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಗಮನಿಸಿ, ಪಾಲಿಸಿ, ನೆಡೆಸಿಕೊಂಡು ಬರುವ ಬಗ್ಗೆ ಯೋಚಿಸಿ, ಅಚರಿಸುವುದಾಗಿದೆ. ಇಂತಹ ಬಹುತೇಕ ದಿನಗಳನ್ನು ಸಂಯುಕ್ತ ರಾಷ್ಟ್ರ ಸಂಸ್ಥೆ UN, ವಿಶ್ವ ಆರೋಗ್ಯ ಸಂಘಟನೆ WHO, ವಿಶ್ವ ಆರ್ಥಿಕ ಮತ್ತು ಸಾಮಾಜಿಕ ಸಮಿತಿ ECOSOC, United Nations Educational, Scientific and Cultural Organization (UNESCO), ಮತ್ತು ಇತರ ಸಂಯುಕ್ತ ರಾಷ್ಟ್ರದ ಭಾಗಗಳಾದ International Telecommunication Union (ITU), Food and Agriculture Organization of the United Nations (FAO), World Intellectual Property Organization (WIPO), United Nations Environment Programme (UNEP), International Maritime Organization (IMO) and the International Civil Aviation Organization (ICAO) ಗಳು ಪ್ರಾರಂಭಿಸಿ ಪ್ರತಿಪಾಲಿಸುತ್ತವೆ .
ಈಸೋಪನ ನೀತಿಕಥೆಗಳು ಅಥವಾ ಈಸೋಪಿಕಾ ಎಂಬುದು ೬೨೦ರಿಂದ ೫೬೦ BCEಯ ಅವಧಿಯಲ್ಲಿ ಪ್ರಾಚೀನ ಗ್ರೀಸ್ನಲ್ಲಿ ಜೀವಿಸಿದ್ದ ಓರ್ವ ಗುಲಾಮ ಹಾಗೂ ಕಥಾ ನಿರೂಪಕನಾಗಿದ್ದ ಈಸೋಪನು ಹೇಳಿದ್ದೆಂದು ಭಾವಿಸಲಾದ ನೀತಿಕಥೆಗಳ ಸಂಗ್ರಹವಾಗಿದೆ. ಆತನ ನೀತಿಕಥೆಗಳಲ್ಲಿ ಬಹುತೇಕವು ವಿಶ್ವದಲ್ಲೇ ಅತ್ಯಂತ ಜನಜನಿತವಾದವುಗಳಲ್ಲಿ ಸೇರಿವೆ. ಈ ನೀತಿಕಥೆಗಳು ಇಂದಿಗೂ ಮಕ್ಕಳ ನೈತಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಜನಪ್ರಿಯ ಆಯ್ಕೆಯಾಗಿದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಆಪ್ಟಿಕಲ್ ಫೈಬರ್ (ದ್ಯುತಿ ಎಳೆಗಳು) ಎನ್ನುವುದು ಗಾಜಿನ ಅಥವಾ ಪ್ಲಾಸ್ಟಿಕ್ನಿಂದ ಮಾಡಿದ, ತನ್ನ ಉದ್ದಕ್ಕೂ ಬೆಳಕನ್ನು ಒಯ್ಯಬಲ್ಲ ಒಂದು ತಂತು. ಫೈಬರ್ ಆಪ್ಟಿಕ್ಸ್ ಎನ್ನುವುದು ಆಪ್ಟಿಕಲ್ ಫೈಬರ್ಗಳ ವಿನ್ಯಾಸ ಮತ್ತು ಉಪಯೋಗಗಳಿಗೆ ಸಂಬಂಧಿಸಿದ ಅನ್ವಯಿತ ವಿಜ್ಞಾನ ಮತ್ತು ಇಂಜಿನಿಯರಿಂಗ್ನ ವಿಸ್ತರಣೆ. ಆಪ್ಟಿಕಲ್ ಫೈಬರ್ಗಳನ್ನು ಫೈಬರ್-ಆಪ್ಟಿಕ್ ಸಂವಹನಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಆಕ್ಸಿಟೊಸಿನ್ (pronounced /ˌɒksɨˈtoʊsɪn/) (ಪಿಟೋಸಿನ್ , ಸೈನ್ಟೋಸಿನಾನ್ ಎಂದು ಮಾರಾಟಮಾಡಲಾಗುತ್ತದೆ) ಸಸ್ತನಿಯ ಒಂದು ಹಾರ್ಮೊನಾಗಿದ್ದು, ಇದು ಪ್ರಾಥಮಿಕವಾಗಿ ಮೆದುಳುನಲ್ಲಿ ಒಂದು ನರ ವಾಹಕದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದು ಅಲ್ಫಾ-ಹೈಪೊಫಮೈನ್ (α–ಹೈಪೊಫಮೈನ್) ಎಂದು ಸಹ ಪರಿಚಿತವಾಗಿದ್ದು, 1953ರಲ್ಲಿ ವಿನ್ಸೆಂಟ್ ಡು ವಿಗ್ನೆಔಡ್ ಎಟ್ ಅಲ್. ನ ಮೂಲಕ ಜೀವರಸಾಯಿನಿಕವಾಗಿ ಅನುಕ್ರಮಗೊಂಡಿರುವ ಮತ್ತು ಸಂಯೋಜಿಸಿರುವ ಮೊಟ್ಟ ಮೊದಲ ಪಾಲಿಪೆಪ್ಟೈಡ್ ಹಾರ್ಮೊನು ಆಗಿರುವ ಮನ್ನಣೆಯನ್ನು ಆಕ್ಸಿಟೋಸಿನ್ ಹೊಂದಿದೆ.
ಟಿಮೊತಿ ಝಕೆರಿ ಮೊಸ್ಲಿ (ಜನನ ಮಾರ್ಚ್ ೧೦, ೧೯೭೧)ಈ ಹೆಸರಿಗಿಂತ ಹೆಚ್ಚಾಗಿ ಆತ ತನ್ನ ರಂಗಮಂಚದ ಮೇಲಿನ ಪ್ರದರ್ಶನದಿಂದಾಗಿ ಟಿಂಬಲೆಂಡ್ ಎಂದೇ ಹೆಸರುವಾಸಿ.ಅಮೆರಿಕನ್ ಆಗಿರುವ ಆತ ಗ್ರಾಮ್ಮಿ ಪ್ರಶಸ್ತಿ ಪಡೆದ ದಾಖಲೆ ನಿರ್ಮಿಸಿದ ನಿರ್ಮಾಪಕ,ಹಾಡುಗಾರ-ಗೀತರಚನೆಗಾರ,ನಟ,ಸಂಗೀತಗಾರ ಮತ್ತು ರಾಪ್ ಸಂಗೀತ ಕಲಾವಿದನಾಗಿ ಪರಿಚಿತನಾಗಿದ್ದಾನೆ. ಆತ,ಖ್ಯಾತ ರಾಪ್ ಸಂಗೀತಗಾರ ಸೆಬಾಸ್ಟಿಯನ್ ನ್ ನ ಹಿರಿಯ ಸಹೋದರನಾಗಿದ್ದಾನೆ. ಟಿಂಬಲೆಂಡ್ ನ ಮೊದಲ ಪೂರ್ಣಾವಧಿಯ ನಿರ್ಮಾಣವೆಂದರೆ ೧೯೯೬ ರಲ್ಲಿ ಬಂದ ಜಿನುವೈನ್ ...ದಿ ಬ್ಯಾಚಲರ್ ಇದು R&Bನ ಸಲುವಾಗಿ ಹಾಡುಗಾರ ಜಿನುವೈನ್ ಗೆ ಅರ್ಪಿಸಲಾಗಿತ್ತು.
ಅಮಿತಾಭ್ ಬಚ್ಚನ್ (ಹಿಂದಿ:अमिताभ बच्चन, pronounced [əmɪˈtaːbʱ ˈbətːʃən], ಅಕ್ಟೋಬರ್ 11, 1942ರಂದು ಅಮಿತಾಭ್ ಹರಿವಂಶ್ ಬಚ್ಚನ್ ಜನನ), ಭಾರತದ ಒಬ್ಬ ಚಲನಚಿತ್ರ ನಟ. ಅವರನ್ನು ಬಿಗ್ B ಮತ್ತು ಷಹೇನ್ಷಾ ಎಂದೂ ಕರೆಯಲಾಗುತ್ತಿದೆ. 1970ರ ದಶಕದಲ್ಲಿ ಆರಂಭದಲ್ಲಿ "ಆಂಗ್ರಿ ಯಂಗ್ ಮ್ಯಾನ್" ಇಮೇಜ್ನೊಂದಿಗೆ ಅಮಿತಾಭ್ ಬಚ್ಚನ್ ಬಾಲಿವುಡ್ ಚಲನಚಿತ್ರದಲ್ಲಿ ಮೊದಲು ಜನಪ್ರಿಯತೆಗೆ ಬಂದರು, ಆ ಬಳಿಕ ಅವರು ಭಾರತೀಯ ಚಲನಚಿತ್ರ ಇತಿಹಾಸದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದರು.
ತಂತ್ರ ಸಂಸ್ಕೃತ:तन्त्र; ನಿರಂತರತೆ ಯನ್ನು ಸೂಚಿಸುವ ಜಾಲ; ಆಂಗ್ಲದಲ್ಲಿ ತಾಂತ್ರಿಸಿಸಂ ಅಥವಾ ತಂತ್ರಿಸಂ ಅಥವಾ ತಂತ್ರಂ ಸಂಸ್ಕೃತ:तन्त्र ಎಂದು ಕರೆಯಲ್ಪಡುವ ತಂತ್ರವು ಒಂದು ತತ್ವಶಾಸ್ತ್ರವಾಗಿದ್ದು, ಇದರಲ್ಲಿ ಶಕ್ತಿಯು ಮುಖ್ಯದೇವತೆಯಾಗಿ ಪೂಜಿಸಲ್ಪಡುವುದಾಗಿದ್ದು ಇಡೀ ಜಗತ್ತು ಶಕ್ತಿ ಮತ್ತು ಶಿವ ನ ದಿವ್ಯಲೀಲೆಗೆ ಒಳಪಟ್ಟದ್ದೆಂದು ಸಾರುತ್ತದೆ; ಸಾಮಾನ್ಯವಾಗಿ ಶಕ್ತಿಪೂಜೆಗೆ ಸಂಬಂಧಿತವಾದ ಯಾವುದೇ ಧಾರ್ಮಿಕಗ್ರಂಥ("ತಂತ್ರಗಳು" ಎಂದು ಕರೆಯಲ್ಪಡುವ)ವನ್ನೂ ಸಹ ತಂತ್ರ ಎಂಬ ಪದದಿಂದಲೇ ಗುರುತಿಸಲಾಗುತ್ತದೆ. ತಂತ್ರವು ಮೂಲತಃ ಆಧ್ಯಾತ್ಮಿಕ ವಿಧಿವಿಧಾನಗಳು ಮತ್ತು ಪೂಜಾ ಆಚರಣೆಯ ಕ್ರಮಗಳನ್ನು ಅರುಹುತ್ತಾ ಮೌಢ್ಯ ಮತ್ತು ಪುನರ್ಜನ್ಮದಿಂದ ಮುಕ್ತಿ ಪಡೆಯಲು ಸಹಾಯಕವಾಗುತ್ತದೆ. ತಂತ್ರಿಸಂ ಹಿಂದೂ, ಸಿಖ್, ಬಾನ್, ಬೌದ್ಧ, ಮತ್ತು ಜೈನ ಮತಗಳ ಾಚರಣೆಗಳ ಮೇಲೆ ಪ್ರಭಾವ ಬೀರಿದೆ.
ಮಧ್ಯ ಏಷ್ಯಾದಿಂದ ಬಂದ ಮುಸ್ಲಿಂಜಯಶಾಲಿ, ಜಹೀರ್ ಉದ್ -ದಿನ್ ಮಹಮ್ಮದ್ ಬಾಬರ್ (February 23 [O.S. February 14] 1483 — January 5 [O.S. December 26, 1530] 1531) ಹಲವಾರು ಸತತ ಸೋಲಿನಿಂದ ,ಎದೆಗುಂದದೆ ಅಂತಿಮವಾಗಿ ಭಾರತದಲ್ಲಿ ಮುಘಲ್ ಸಾಮ್ರಾಜ್ಯ ಸ್ಥಾಪಿಸಿದನು . ತನ್ನ ತಂದೆಯ ಮೂಲಕ ತೈಮೂರುವಂಶದ ನೇರಸ್ಥಾನಾಗಿ , ಗೆನ್ಗೀಸ್ ಖಾನ್ ನ ವಂಶಸ್ಥನಾದದ್ದು , ತಾಯಿಯ ಮೂಲಕ . ಬಾಬರ್ ತನ್ನ ವಂಶ ಪರಂಪರೆಯನ್ನು ಟಿಮುರಿಡ್ ಮತ್ತು ಚಾಘತಯ್ -ಟರ್ಕಿಕ್ ಎಂದು ಗುರುತಿಸಿಕೊಂಡಿದ್ದು,ತನ್ನ ಹುಟ್ಟು ,ವಾತಾವರಣ, ತರಭೇತಿ ಮತ್ತು ಸಂಸ್ಕೃತಿಗಳು ಪೆರ್ಸಿಯನ್ ಸಂಸ್ಕೃತಿ ಯಿಂದ ಬಂದವುಗಳೆಂದು,ಆದುದರಿಂದ ತನ್ನ ವಂಶದವರಿಂದ ಬಂದ ಇವುಗಳನ್ನು ತನ್ನ ಜವಾಬ್ದಾರಿಯಿಂದ ಪೋಷಿಸಬೇಕೆಂದು, ಪೆರ್ಸಿಯನ್ ಸಂಸ್ಕೃತಿಯ ಪ್ರಭಾವ ವನ್ನು ಭಾರತದ ಉಪಖಂಡ ದಲ್ಲಿ ವಿಸ್ತರಿಸಿ , ಬುದ್ಧಿವಂತಿಕೆಯ ಸಾಹಿತ್ಯ , ಕಲೆ , ಮತ್ತು ಚಾರಿತ್ರಿಕ ಫಲಿತಾಂಶದ ಮೂಲಕ ಪರಿಚಯಿಸಲು ಉದ್ಯುಕ್ತನಾದನು.
1970, ಏಪ್ರಿಲ್ 29, ರಂದು ಜನಿಸಿದ ; ಆಂಡ್ರೆ ಕಿರ್ಕ್ ಅಗಾಸ್ಸಿ pronounced /ˈɑːndreɪ ˈæɡəsi/ಅಮೇರಿಕಾದ ಒಬ್ಬ ನಿವೃತ್ತಿ ಹೊಂದಿದ ಹಾಗೂ ಹಿಂದಿನ ವಿಶ್ವದಲ್ಲೇ ಒಂದನೇ ಶ್ರೇಯಾಂಕದ ವೃತ್ತಿಪರ ಟೆನ್ನಿಸ್ ಆಟಗಾರ. ಸಾಮಾನ್ಯವಾಗಿ ವಿಮರ್ಶಕರು ಹಾಗೂ ಸಹ ಆಟಗಾರರಿಂದ ಸರ್ವಕಾಲೀನ ಅತ್ಯಂತ ಮಹಾನ್ ಟೆನ್ನಿಸ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ, ಅಗಾಸ್ಸಿ ಪಂದ್ಯದ ಇತಿಹಾಸದಲ್ಲೇ ಅತ್ಯದ್ಭುತ ಸರ್ವೀಸ್ ಹಿಂದಿರುಗಿವವನು ಎಂದು ಕರೆಯಲ್ಪಟ್ಟಿದ್ದಾರೆ. ಸಿಂಗಲ್ಸ್ ಟೆನ್ನಿಸ್ ನಲ್ಲಿ, ಅಗಾಸ್ಸಿ ಇತಿಹಾಸದಲ್ಲೇ ಕೆರಿಯರ್ ಗೋಲ್ಡನ್ ಸ್ಲ್ಯಾಮ್ ಸಾಧಿಸಿದ ಏಕೈಕ ಪುರುಷ ಆಟಗಾರ, ಮತ್ತು ರಾಡ್ ಲೆವರ್, ಡಾನ್ ಬಡ್ಜ್, ಫ್ರೆಡ್ ಪೆರ್ರಿ, ರಾಯ್ ಎಮರ್ ಸನ್, ಹಾಗೂ ರೋಜರ್ ಫೆಡರರ್ ಜೊತೆ ಕೆರಿಯರ್ ಗ್ರಾಂಡ್ ಸ್ಲ್ಯಾಮ್ ಸಾಧಿಸಿದ ಆರು ಜನರಲ್ಲಿ ಒಬ್ಬರು - ಓಪನ್ ಎರಾ ಪ್ರಾರಂಭವಾದಾಗಿನಿಂದ ಮೂರು ಜನರಲ್ಲಿ (ಲೆವರ್ ಮತ್ತು ಫೆಡರರ್ ಜೊತೆ) ಒಬ್ಬರು.
ಆತ್ಮರತಿ ಎಂದರೆ ವ್ಯಕ್ತಿಗತ ಪ್ರಶಂಸೆ ಯೊಂದಿಗಿನ ದುರಭಿಮಾನ, ಒಣಜಂಬ, ಅತೃಪ್ತ ಮನೋಭಾವ, ಅಥವಾ ಸರಳವಾಗಿ ಹೇಳುವುದೆಂದರೆ ಸ್ವಾರ್ಥಪ್ರವೃತ್ತಿ. ಈ ತತ್ವ ಅಥವಾ ಪ್ರವೃತ್ತಿಯನ್ನು ಒಂದು ಸಾಮಾಜಿಕ ಸಮೂಹಕ್ಕೆ ಹೋಲಿಸಿದಾಗ ಅದನ್ನು ಗಣ್ಯಪ್ರಜ್ಞೆ ಅಥವಾ ಇನ್ನುಳಿದವರಿಗಿಂತ ನಾವು ಶೇಷ್ಠರು ಎಂಬ ಮನೋಭಾವವಾಗಿ ಪರಿಣಮಿಸುತ್ತದೆ. ಈ ಹೆಸರು "ಆತ್ಮರತಿ"ಶಬ್ದವನ್ನು ಪ್ರಸಿದ್ದ ಮನೋವಿಜ್ಞಾನಿ ಫ್ರಾಯ್ಡ್ ಎಂಬಾತ ನಾರ್ಸಿಸಸ್ ಎಂಬ ವ್ಯಕ್ತಿತನವನ್ನು ಉಲ್ಲೇಖಿಸಿ ಉದ್ಘರಿಸಿದ್ದಾನೆ.ಗ್ರೀಕ್ ಪುರಾಣದಲ್ಲಿ ಬರುವ ಈತ ವಿಕೃತ ಸ್ವಭಾವದ ಸ್ವಯಂ-ರತಿಯಲ್ಲಿ ತೊಡಗಿದ ಯುವಕನ ಕತೆಯಾಗಿದೆ.ಆತ ಕೊಳದ ನೀರಿನಲ್ಲಿನ ತನ್ನದೇ ಆದ ಪ್ರತಿಬಿಂಬದೊಂದಿಗೆ ಪ್ರೇಮ ಮಾಡುವ ಅಸಹಜ ಕ್ರಿಯೆಯಲ್ಲಿ ತೊಡುಗುತ್ತಾನೆ.
ಟೇಕ್ವಾಂಡೋ (태권도; 跆拳道; Korean pronunciation: [tʰɛkwʌndo]) ಎಂಬುದು ಕೊರಿಯಾದ ಕದನ/ಸಮರ ಕಲೆ ಹಾಗೂ ದಕ್ಷಿಣ ಕೊರಿಯಾದ ರಾಷ್ಟ್ರೀಯ ಕ್ರೀಡೆಯಾಗಿದೆ. ಕೊರಿಯನ್ ಭಾಷೆಯಲ್ಲಿ, ಟೇ (태, 跆) ಎಂದರೆ "ಹೊಡೆಯುವಿಕೆ ಅಥವಾ ಕಾಲಿನಿಂದ ಒದ್ದು ಮುರಿಯುವಿಕೆ"; ಕ್ವಾನ್ (권, 拳) ಎಂದರೆ "ಹೊಡೆಯುವಿಕೆ ಅಥವಾ ಮುಷ್ಠಿಯಿಂದ ಗುದ್ದಿ ಮುರಿಯುವಿಕೆ"; ಹಾಗೂ ಡೋ (도, 道) ಎಂದರೆ "ಕ್ರಮ," "ವಿಧಾನ," ಅಥವಾ "ಕಲೆ" ಎಂದು ಅರ್ಥ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಗೊರೂರು ರಾಮಸ್ವಾಮಿ ಅಯ್ಯಂಗಾರ್(ಜುಲೈ ೪, ೧೯೦೪ - ಸೆಪ್ಟೆಂಬರ್ ೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಆರ್.ಕೆ.ನಾರಾಯಣ್ ಓದುಗರಿಗೆ ಮಾಲ್ಗುಡಿಯನ್ನು ಪರಿಚಯಿಸುವುದಕ್ಕೆ ಮುನ್ನವೇ ತಮ್ಮ ಕೃತಿಗಳ ಮೂಲಕ ರಾಮಸ್ವಾಮಿ ಅಯ್ಯಂಗಾರ್ ಅವರು ಗೊರೂರು ಗ್ರಾಮವನ್ನು ಪರಿಚಯಿಸಿದ್ದರು. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ.
ಒಂದು ರಾಕೆಟ್ ಅಥವಾ ಆಕಾಶ ಬಾಣ ಇಲ್ಲವೆ ರಾಕೆಟ್ ವಾಹನ ಎಂದರೆ ಕ್ಷಿಪಣಿ,ಅಂತರಿಕ್ಷ ವಾಹನ ಅಥವಾ ವಾಯುನೌಕೆ ಇಲ್ಲವೆ ರಾಕೆಟ್ ಎಂಜಿನ್ ನಿಂದ ಶಕ್ತಿ ಪಡೆಯುವ ಇನ್ನಿತರ ವಾಹನಗಳು ಎನ್ನಲಾಗುತ್ತದೆ. ಎಲ್ಲಾ ಆಕಾಶ ಬಾಣಗಳಲ್ಲಿನ ಅಲಗುಳ್ಳ ತಿರುಗಣಿ ಗಳು ಅದರ ಒಳಗಿನ ಅಂತರದಹನ ಒತ್ತಡವನ್ನು ಹೊರಹಾಕಲು ಅಳವಡಿಸಲಾಗಿರುತ್ತದೆ. ರಾಕೆಟ್ ಎಂಜಿನ್ ಗಳು ಯಾವಾಗಲೂ ಕ್ರಿಯೆ ಮತ್ತು ಪ್ರತಿಕ್ರಿಯೆ ಮೂಲಕ ಕಾರ್ಯನಿರ್ವಹಿಸುತ್ತವೆ.
ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು.
ಆಕ್ಲೆಂಡ್ ಮಹಾನಗರದ ಪ್ರದೇಶ ವು (ಸಾಮಾನ್ಯವಾಗಿ ...pronounced /ˈɔːklənd/), ನ್ಯೂಜಿಲೆಂಡ್ನ ನಾರ್ತ್ ಐಲೆಂಡ್ನಲ್ಲಿರುವ ಅತ್ಯಂತ ದೊಡ್ಡ ಮತ್ತು ಅತ್ಯಂತ ಜನನಿಬಿಡವಾದ, ದೇಶದಲ್ಲಿನ ನಗರ ಪ್ರದೇಶವಾಗಿದ್ದು, ೧.೪ ದಶಲಕ್ಷ ನಿವಾಸಿಗಳಷ್ಟು ಪ್ರಮಾಣಕ್ಕೆ ಸಮೀಪಿಸುತ್ತಿರುವ ಒಂದು ಜನಸಂಖ್ಯೆಯೊಂದಿಗೆ, ಅದು ದೇಶದ ಜನಸಂಖ್ಯೆಯ ...ನಷ್ಟು ಪ್ರತಿಶತ ಪ್ರಮಾಣವನ್ನು ಹೊಂದಿದಂತಾಗಿದೆ.ನಷ್ಟು ಪ್ರತಿಶತ ಪ್ರಮಾಣವನ್ನು ಹೊಂದಿದಂತಾಗಿದೆ. ಜನಸಂಖ್ಯಾಶಾಸ್ತ್ರದ ಪ್ರವೃತ್ತಿಗಳು ಸೂಚಿಸುವ ಪ್ರಕಾರ, ದೇಶದ ಉಳಿದ ಭಾಗಗಳಿಗಿಂತ ವೇಗವಾಗಿ ಬೆಳೆಯುವುದನ್ನು ಇದು ಮುಂದುವರಿಸಲಿದೆ. ಹೆಚ್ಚುತ್ತಲೇ ಇರುವ ವಿಶ್ವದ ಎಲ್ಲಾ ಭಾಗಗಳಿಗೆ ಸೇರಿದ ಜನರನ್ನೊಳಗೊಂಡಿರುವ ಆಕ್ಲೆಂಡ್, ವಿಶ್ವದಲ್ಲಿನ ಯಾವುದೇ ನಗರದ ಪೈಕಿ ಪಾಲಿನೀಷಿಯಾದವರ ಅತ್ಯಂತ ದೊಡ್ಡ ಜನಸಂಖ್ಯೆಯನ್ನು ಹೊಂದಿದೆ ಮತ್ತು ಕಳೆದ ಎರಡು ದಶಕಗಳಲ್ಲಿ ಏಷ್ಯಾದ ಜನಾಂಗೀಯತೆಗೆ ಸೇರಿದ ಅನೇಕ ಜನರು ಅಲ್ಲಿಗೆ ಬಂದು ಸೇರಿಕೊಂಡಿರುವುದನ್ನು ಅದು ಕಂಡಿದೆ.
ಸ್ಪೇನ್ ಅಥವ ಸ್ಪೇನ್ ಸಂಸ್ಥಾನ (ಸ್ಪ್ಯಾನಿಷ್:Reino de España), ಆಗ್ನೇಯ ಯುರೋಪಿನ ಐಬೀರಿಯನ್ ದ್ವೀಪಕಲ್ಪದಲ್ಲಿರುವ ಒಂದು ದೇಶ. ಇದರ ದಕ್ಷಿಣ ಮತ್ತು ಪೂರ್ವದಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು ಜಿಬ್ರಾಲ್ಟರ್; ಉತ್ತರದಲ್ಲಿ ಫ್ರಾನ್ಸ್, ಅಂಡೊರ ಮತ್ತು ಬಿಸ್ಕೆ ಕೊಲ್ಲಿ; ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರ ಮತ್ತು ಪೋರ್ಚುಗಲ್ ಇವೆ. ಮೆಡಿಟರೇನಿಯನ್ನಲ್ಲಿರುವ ಬಲೇರಿಕ್ ದ್ವೀಪ, ಅಟ್ಲಾಂಟಿಕ್ ಮಹಾಸಗರದಲ್ಲಿರುವ ಕೆನರಿ ದ್ವೀಪ ಮತ್ತು ಉತ್ತರ ಆಫ್ರಿಕದಲ್ಲಿ ಮೊರೊಕ್ಕೊ ನಗರದ ಗಡಿಯಲ್ಲಿರುವ ಸಿಯುಟ ಹಾಗು ಮೆಲಿಲ್ಲ ನಗರಗಳು ಸ್ಪೇನ್ ದೇಶಕ್ಕೆ ಸೇರಿವೆ.
ಆಂಧ್ರ ಪ್ರದೇಶ (ತೆಲುಗು:ఆంధ్ర ప్రదేశ్) ( pronunciation , ಭಾಷಾಂತರ: ಆಂಧ್ರದ ಪ್ರಾಂತ್ಯ ), ಸಂಕ್ಷಿಪ್ತವಾಗಿ A.P. ಎಂದು ಕರೆಯಲ್ಪಡುವ ರಾಜ್ಯವಾಗಿದ್ದು ಇದುಭಾರತದ ಆಗ್ನೇಯ ಕರಾವಳಿ ಭಾಗದಲ್ಲಿದೆ. ಭಾರತದಲ್ಲಿ ಇದು ವಿಸ್ತೀರ್ಣದಲ್ಲಿ ನಾಲ್ಕನೇ ಅತಿದೊಡ್ಡ ರಾಜ್ಯವಾಗಿದೆ ಮತ್ತು ಜನಸಂಖ್ಯೆಯಲ್ಲಿ ಐದನೇ ಅತಿ ದೊಡ್ಡ ರಾಜ್ಯವಾಗಿದೆ. ಇದರ ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರ ಹೈದರಾಬಾದ್.
ಜಲಿಯನ್ವಾಲಾ ಬಾಗ್ ಹತ್ಯಾಹಾಂಡ (ಅಥವಾ ಅಮೃತಸರ ಹತ್ಯಾಹಾಂಡ) - ಅಮೃತಸರದಲ್ಲಿರುವ ಜಲಿಯನ್ವಾಲಾ ಬಾಗ್ ಉದ್ಯಾನದಲ್ಲಿ ಏಪ್ರಿಲ್ ೧೩, ೧೯೧೯ರಂದು ಬ್ರಿಟೀಷ್ ಭಾರತ ಸೇನೆಯಿಂದ ಅಲ್ಲಿ ನೆರೆದಿದ್ದ ಗಂಡಸರು, ಹೆಂಗಸರು, ಮಕ್ಕಳೆಲ್ಲರ ಮೇಲೆ ನಡೆಸಿದ ಗುಂಡಿನ ದಾಳಿಯ ಪರಿಣಾಮವಾಗಿ ನಡೆದ ಮಾರಣಹೋಮ. ಅಧಿಕೃತ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ೩೭೯. ಖಾಸಗಿ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ಸಾವಿರಕ್ಕೂ ಹೆಚ್ಚು ಹಾಗು ಗಾಯಗೊಂಡವರ ಸಂಖ್ಯೆ ೧೨೦೦ಕ್ಕೂ ಹೆಚ್ಚು., ಮತ್ತು ಸಿವಿಲ್ ಶಸ್ತ್ರಚಿಕಿತ್ಸಾ ತಜ್ಞ ಡಾ.ಸ್ಮಿತ್ ನೀಡಿದ ಮಾಹಿತಿಯ ಪ್ರಕಾರ, ಸಾವಿಗೀಡಾದವರು ೧೮೦೦ಕ್ಕೂ ಹೆಚ್ಚು.
ಸುನೀಲ್ ಮನೋಹರ್ ಗವಾಸ್ಕರ್ (ಜನನ:೧೯೪೯ ಜುಲೈ ೧೦ ರಲ್ಲಿ ಮುಂಬಯಿ, ಮಹಾರಾಷ್ಟ್ರ), ೧೯೭೦ ಮತ್ತು ೧೯೮೦ ರ ಅವಧಿಯಲ್ಲಿ ಮುಂಬಯಿ ಮತ್ತು ಭಾರತವನ್ನು ಪ್ರತಿನಿಧಿಸಿದ್ದಕ್ರಿಕೆಟ್ ಆಟಗಾರ.. ಕ್ರಿಕೆಟ್ ಟೆಸ್ಟ್ ಪಂದ್ಯದ ಇತಿಹಾಸದಲ್ಲಿ ಅತ್ಯುತ್ತಮ ಆರಂಭ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದಾರೆ. ಅತ್ಯಂತ ಹೆಚ್ಚು ರನ್ಗಳು ಮತ್ತು ಅತ್ಯಂತ ಹೆಚ್ಚು ಶತಕಗಳ ಗಳಿಕೆಯಲ್ಲಿ ಪ್ರಪಂಚದಾಖಲೆಗಳನ್ನು ತಮ್ಮ ಕಾಲದಲ್ಲಿ ಹೊಂದಿದ್ದು,ಅವರ ಹೆಚ್ಚು ಶತಕಗಳ ಅಂದರೆ ೩೪ ಶತಕಗಳ ದಾಖಲೆ ಸಚಿನ್ ತೆಂಡೂಲ್ಕರ್ರವರಿಂದ ೨೦೦೫ ರಲ್ಲಿ ಮುರಿಯಲ್ಪಟ್ಟಿತು ಗವಾಸ್ಕರ್ ವೇಗದ ಬೌಲಿಂಗ್ ಎದುರಿಸುವ ನೈಪುಣ್ಯಕ್ಕಾಗಿ ಎಲ್ಲರಿಂದ ಪ್ರಶಂಸೆಗೊಳಗಾಗಿದ್ದರು.ನಿರ್ದಿಷ್ಟವಾಗಿ ವೆಸ್ಟ್ ಇಂಡೀಸ್ ವಿರುದ್ಧ ಅವರು ಹೊಂದಿದ್ದ ಸರಾಸರಿ ೬೫.೪೫ ರನ್ ಧಾರಣೆ ಗಮನೀಯ.
ತೈ ಚಿ ಚುಆನ್' (simplified Chinese: 太极拳; traditional Chinese: 太極拳; pinyin: tàijíquán; Wade–Giles: t'ai4 chi2 ch'üan2) (ಪದವನ್ನು "ಪರಮ ಸರ್ವೋತ್ಕೃಷ್ಟ ಮುಷ್ಟಿ" ಎಂದು ಅಕ್ಷರಶಃ ಭಾಷಾಂತರಿಸಬಹುದು) ಎಂಬುದು ಒಂದು ಆಂತರಿಕ ಚೈನೀಸ್ ಕದನ ಕಲೆ. ಇದನ್ನು ರಕ್ಷಣಾ ತರಬೇತಿ ಹಾಗು ಆರೋಗ್ಯದ ಅನುಕೂಲಗಳು ಎರಡೂ ಕಾರಣಕ್ಕೆ ಅಭ್ಯಾಸ ಮಾಡಲಾಗುತ್ತದೆ. ಇದನ್ನು ವಿಶೇಷವಾಗಿ ಹಲವು ವಿಧದ ಇತರ ವೈಯಕ್ತಿಕ ಕಾರಣಗಳಿಗಾಗಿಯೂ ಸಹ ಅಭ್ಯಾಸ ಮಾಡಲಾಗುತ್ತದೆ: ಇದು ಕ್ಲಿಷ್ಟ ಹಾಗು ಮೃದು ಕದನ ಕಲಾ ತಂತ್ರ, ಪ್ರದರ್ಶನ ಸ್ಪರ್ಧೆಗಳು, ಹಾಗು ದೀರ್ಘಾಯುಷ್ಯ.
ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೮ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ.
ಹಿಂದೂಗಳು ಒಳ್ಳೆ ಕರ್ಮ, ಭಕ್ತಿ, ಅಥವಾ ಜ್ಞಾನವನ್ನು ಆಚರಿಸಿ ಮೋಕ್ಷವನ್ನು ಪಡೆಯಬಹುದು (ಬ್ರಹ್ಮನ್ನೊಂದಿಗೆ ವಿಲೀನ) ಎಂದು ನಂಬುವ ಜನ. ವೈಷ್ಣವ ಪಂಥ, ಶೈವ ಪಂಥ, ಶಾಕ್ತ ಪಂಥ ಮತ್ತು ಸ್ಮಾರ್ತ ಸಂಪ್ರದಾಯ ಹಿಂದೂ ಧರ್ಮದ ಮುಖ್ಯ ಪಂಥಗಳು. ಈ ನಾಲ್ಕು ಪಂಥಗಳು ಕ್ರಿಯಾವಿಧಿಗಳು, ನಂಬಿಕೆಗಳು, ಮತ್ತು ಸಂಪ್ರದಾಯಗಳನ್ನು ಹಂಚಿಕೊಳ್ಳಬಹುದು, ಆದರೆ ಪ್ರತಿ ಪಂಥವು ಜೀವನದ ಪರಮ ಗುರಿಯಾದ ಆತ್ಮಜ್ಞಾನವನ್ನು (ಆತ್ಮ ಸಾಕ್ಷಾತ್ಕಾರ) ಹೇಗೆ ಸಾಧಿಸಬೇಕು ಎಂಬುದಕ್ಕೆ ಒಂದು ಬೇರೆ ಜೀವನಕ್ರಮವನ್ನು ಹೊಂದಿದೆ.
ಅಮೆರಿಕ ಸಂಯುಕ್ತ ಸಂಸ್ಥಾನ ವು (ಸಾಮಾನ್ಯವಾಗಿ ಸಂಯುಕ್ತ ಸಂಸ್ಥಾನ , ಯುಎಸ್ , ಯುಎಸ್ಎ ಅಥವಾ ಅಮೆರಿಕಾ ಎಂದು ಕರೆಯಲ್ಪಡುವ) ಐವತ್ತು ರಾಜ್ಯಗಳು ಮತ್ತು ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ ಡಿಸ್ಟ್ರಿಕ್ಟ್ಯನ್ನೊಳಗೊಂಡ ಒಂದು ಸ್ವಾಯತ್ತ ಸಾಂವಿಧಾನಿಕ ಗಣರಾಜ್ಯ. ಬಹುತೇಕ ಕೇಂದ್ರ ಭಾಗದ ಉತ್ತರ ಅಮೆರಿಕಾದಲ್ಲಿ ಸ್ಥಿತವಾಗಿರುವ ಈ ದೇಶದ ಒತ್ತೊತ್ತಾಗಿರುವ 48 ರಾಜ್ಯಗಳು ಹಾಗೂ ಪ್ರಧಾನ ಡಿಸ್ಟ್ರಿಕ್ಟ್ ವಾಷಿಂಗ್ಟನ್ ಡಿಸಿ, ಪೆಸಿಫಿಕ್ ಹಾಗೂ ಅಟ್ಲಾಂಟಿಕ್ ಸಮುದ್ರಗಳ ನಡುವೆ ನೆಲೆಗೊಂಡಿದ್ದು, ಉತ್ತರದಲ್ಲಿ ಕೆನಡಾ ಹಾಗೂ ದಕ್ಷಿಣದಲ್ಲಿ ಮೆಕ್ಸಿಕೋಗಳನ್ನು ಗಡಿಗಳಾಗಿ ಹೊಂದಿದೆ. ಅಲಾಸ್ಕಾ ರಾಜ್ಯವು ವಾಯುವ್ಯ ಭಾಗದಲ್ಲಿದ್ದು, ಕೆನಡಾವನ್ನು ಉತ್ತರ ದಿಕ್ಕಿನಲ್ಲೂ ಬೇರಿಂಗ್ ಜಲಸಂಧಿಯನ್ನು ಹಾದು ರಷ್ಯಾವನ್ನು ಪಶ್ಚಿಮ ದಿಕ್ಕಿನಲ್ಲೂ ಹೊಂದಿದೆ.