The most-visited ಕನ್ನಡ Wikipedia articles, updated daily. Learn more...
ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.
ವೆಸ್ಟ್ಮಿನಿಸ್ಟರ್ ಅರಮನೆ ಯನ್ನು ಸಂಸತ್ತು ಭವನಗಳು ಅಥವಾ ವೆಸ್ಟ್ಮಿನಿಸ್ಟರ್ ಅರಮನೆ ಎಂದೂ ಸಹ ಕರೆಯಲಾಗುತ್ತದೆ. ಇದು ಯುನೈಟೆಡ್ ಕಿಂಗ್ಡಮ್ ಸಂಸತ್ತಿನ ಎರಡೂ ಸದನಗಳು ಸಭೆ ಸೇರುವ ಕೇಂದ್ರ ಸ್ಥಳವಾಗಿದೆ— ಹೌಸ್ ಆಫ್ ಲಾರ್ಡ್ಸ್ ಹಾಗು ಹೌಸ್ ಆಫ್ ಕಾಮನ್ಸ್. ಇದು ವೆಸ್ಟ್ಮಿನಿಸ್ಟರ್ ನಗರದಲ್ಲಿರುವ ಲಂಡನ್ ಬರೋನ ಪೌರಾಡಳಿತ ಪ್ರದೇಶದ ಹೃದಯಭಾಗದಲ್ಲಿದ್ದು ಥೇಮ್ಸ್ ನದಿಯ ಉತ್ತರ ದಂಡೆಯಲ್ಲಿ ಸ್ಥಿತವಾಗಿದೆ.
ನರಭಕ್ಷಕತನ (ಸ್ಥಳೀಯ ಜನಗಳಿಗೆ ಸ್ಪಾನಿಶ್ ಹೆಸರು ಕ್ಯಾನಿಬೇಲಿಸ್, ವೆಸ್ಟ್ ಇಂಡೀಸ್ನ ಬುಡಕಟ್ಟು ಜನಾಂಗದವರು ನರಭಕ್ಷಕತನದ ಆಚರೆಣೆಗೆ ಹೆಸರುವಾಸಿ), ಆಚರಣೆಯ ಕಾರ್ಯವೇನೆಂದರೆ ಮನುಷ್ಯರು ಬೇರೆ ಮನುಷ್ಯರ ಮಾಂಸವನ್ನು ತಿನ್ನುವುದು. ಇದನ್ನು ಆಂತ್ರೊಪೊಫೆಜಿ ಎಂದೂ ಕರೆಯುತ್ತಾರೆ. "ನರಭಕ್ಷಕತನ" ಎಂಬ ಆವಿರ್ಭಾವದ ಮೂಲ ಮನುಷ್ಯರು ಮನುಷ್ಯರನ್ನು ತಿನ್ನುವ ಆಚರಣೆಯಲ್ಲಿದೆಯಾದರೂ, ಯಾವುದೇ ಪ್ರಾಣಿ ತನ್ನದೇ ವರ್ಗದ ಅಥವಾ ರೀತಿಯ ಸದಸ್ಯನನ್ನು ಕಬಳಿಸುವ ಆಚರಣೆಯಿಂದ ಇದು ಪ್ರಾಣಿಶಾಸ್ತ್ರಕ್ಕೂ ವಿಸ್ತರಿಸಿದೆ, ಇದರಲ್ಲಿ ತನ್ನ ಸಂಗಾತಿಯನ್ನು ಕಬಳಿಸುವುದೂ ಕೂಡ ಸೇರಿಕೊಂಡಿದೆ.
ಸಿಡ್ನಿ ಲ್ಯೂಮೆಟ್ (/[unsupported input]luːˈmɛt/ loo-met; ಜೂನ್ ೨೫, ೧೯೨೪– ಏಪ್ರಿಲ್ ೯, ೨೦೧೧) ಎಂಬಾತ ಓರ್ವ ಅಮೇರಿಕಾದ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರರಾಗಿದ್ದು ೫೦ಕ್ಕೂ ಹೆಚ್ಚಿನ ಸಂಖ್ಯೆಯ ಚಲನಚಿತ್ರಗಳು ಅವರ ಹೆಸರಿನೊಂದಿಗೆ ತಳಕು ಹಾಕಿಕೊಂಡಿವೆ. ೧೨ ಆಂಗ್ರಿ ಮೆನ್ (೧೯೫೭), ಡಾಗ್ ಡೇ ಆಫ್ಟರ್ನೂನ್ (೧೯೭೫), ನೆಟ್ವರ್ಕ್ (೧೯೭೬) ಮತ್ತು ದ ವರ್ಡಿಕ್ಟ್ (೧೯೮೨) ಚಲನಚಿತ್ರಗಳ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಅಕಾಡೆಮಿ ಪ್ರಶಸ್ತಿಗಳಿಗೆ ನಾಮಾಂಕಿತಗೊಂಡಿದ್ದರು. ಅವರು ಯಾವುದೇ ವೈಯಕ್ತಿಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿರಲಿಲ್ಲವಾದರೂ ಒಂದು ಅಕಾಡೆಮಿ ಗೌರವಾರ್ಥ ಪ್ರಶಸ್ತಿಯನ್ನು ಪಡೆದಿದ್ದು ೧೦ ಕ್ಷೇತ್ರಗಳಲ್ಲಿ ನಾಮಾಂಕಿತಗೊಂಡು, ೪ ಪ್ರಶಸ್ತಿಗಳನ್ನು ಗೆದ್ದ ನೆಟ್ವರ್ಕ್ ನಂತಹಾ ತಮ್ಮ ಚಲನಚಿತ್ರಗಳಲ್ಲಿ ೧೪ ಚಿತ್ರಗಳಲ್ಲಿ ಹಲವು ಆಸ್ಕರ್ ಪ್ರಶಸ್ತಿಗಳಿಗಾಗಿ ನಾಮಾಂಕಿತಗೊಂಡಿದ್ದಾರೆ.
ಟಕಿಲಾ ವುSpanish pronunciation: [teˈkila] ಒಂದು ಭೂತಾಳೆ-ಮೂಲದ ಮದ್ಯ ಸಾರ, ಇದನ್ನು ಮೂಲತಃ ನಗರ ಪ್ರದೇಶದ ಸುತ್ತುವರಿದ ಭಾಗಗಳಾದ ಟಕಿಲಾ, 65 kilometres (40 mi)ಗ್ವಾದಲಾಜರ ವಾಯುವ್ಯ ಭಾಗಗಳು , ಹಾಗು ಜಾಲಿಸ್ಕೋದ ಪಶ್ಚಿಮ ಮೆಕ್ಸಿಕನ್ ರಾಜ್ಯದ ಎತ್ತರ ಪ್ರದೇಶಗಳಲ್ಲಿ ( ಲಾಸ್ ಆಲ್ಟೊಸ್ ) ತಯಾರಿಸಲಾಗುತ್ತದೆ. ಪ್ರಮುಖವಾಗಿ ಕೆಂಪು ಜ್ವಾಲಾಮುಖಿಯಮಣ್ಣಿನಿಂದ ಸುತ್ತುವರಿದ ಟಕಿಲಾ ಪ್ರದೇಶ ನೀಲಿ ಭೂತಾಳೆ ಬೆಳವಣಿಗೆಗೆ ಒಳ್ಳೆಯ ಸಹಕಾರಿಯಾಗಿದೆ , ಹಾಗು ಪ್ರತಿ ವರ್ಷ 300 ಮಿಲಿಯನ್ ಗಿ೦ತ ಹೆಚ್ಚು ಸಸ್ಯಗಳನ್ನು ಬೆಳೆಯಲಾಗುತ್ತದೆ. ಮೆಕ್ಸಿಕನ್ ಕಾನೂನಿನ ಪ್ರಕಾರ ಟಕಿಲಾ ಉತ್ಪಾದನೆಯು ಕೆಲವು ಪ್ರದೆಶಗಳಿಗೆ ಮಾತ್ರ ಸೀಮಿತವಾಗಿದೆ.
ಮಿಯಾ ಮಹಮ್ಮದ್ ನವಾಜ್ ಶರೀಫ್ , (ಪಂಜಾಬಿ, ಉರ್ದು: میاں محمد نواز شریف) (ಡಿಸೆಂಬರ್ ೨೫ ೧೯೪೯ರಂದು ಹುಟ್ಟಿದ್ದು) ಪಾಕಿಸ್ತಾನಿ ರಾಜಕಾರಣಿಯಾಗಿದ್ದು ಎರಡು ಬಾರಿ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ(ನವೆಂಬರ್೧೯೯೦-ಜುಲೈ೧೯೯೩ ಮತ್ತು ಫೆಬ್ರವರಿ ೧೯೯೭-ಅಕ್ಟೋಬರ್೧೯೯೯). ಇವರು ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಎಂಬ ರಾಜಕೀಯ ಪಕ್ಷದ ನಾಯಕರಾಗಿದ್ದರು. ೧೯೮೫ರಿಂದ ೧೯೯೦ ರವರೆಗೆ ಪಂಜಾಬ್ನ ಮುಖ್ಯಮಂತ್ರಿಯಾಗಿದ್ದರು.
ಕ್ರಿಕೆಟ್ ಎಂಬುದು ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಯು ಸಮುದ್ರದಾಚೆಗಿನ ದೇಶಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು.ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಆಟದ ನಿಯಮಾವಳಿಗಳು ಕ್ರಿಕೆಟ್ನ ಕಾನೂನುಗಳು ಎಂದು ಪರಿಚಿತವಾಗಿವೆ.
ವಿಲಿಯಂ ಷೇಕ್ಸ್ಪಿಯರ್ ಜನನ ವಿವಿಧ ದಾಖಲೆ ಮತ್ತು ಸಾಂದರ್ಭಿಕ ಪುರಾವೆಗಳ ಆಧಾರದ ಊಹೆಯಂತೆ ೨೩ ಏಪ್ರಿಲ್ ೧೫೬೪ (ಕ್ರೈಸ್ತಮತದ ಸಂಪ್ರದಾಯದಂತೆ ಹೋಲಿ ಟ್ರಿನಿಟಿ ಚರ್ಚ್ ನಲ್ಲಿ ನಾಮಕರಣ ೨೬ ಏಪ್ರಿಲ್ ೧೫೬೪ - ಮರಣ - ೨೩ ಏಪ್ರಿಲ್ ೧೬೧೬ ) [೧] ಇಂಗ್ಲಿಷ್ ಕವಿ ಮತ್ತು ನಾಟಕಕಾರ ; ಇಂಗ್ಲಿಷ್ ಭಾಷೆಯ ಅತಿ ಶ್ರೇಷ್ಠ ಕವಿ-ಬರಹಗಾರ ಎಂದೂ ಜಗತ್ತಿನ ಸರ್ವಶ್ರೇಷ್ಠ ನಾಟಕಕಾರರಲ್ಲಿ ಒಬ್ಬನು ಎಂದೂ ಸಾಮಾನ್ಯವಾಗಿ ಗೌರವಿಸಲಾಗುತ್ತದೆ. ಅವನನ್ನು ಇಂಗ್ಲೆಂಡಿನ ರಾಷ್ಟ್ರೀಯ ಕವಿ ಎಂದು ಕರೆಯುತ್ತಾರೆ.
ನಾಲಂದ ( ಹಿಂದಿ/ ಸಂಸ್ಕೃತ/ ಪಾಲಿ: ನಾಲಂದ) ಇದು ಭಾರತ ದೇಶದ ಬಿಹಾರದಲ್ಲಿದ್ದ ಪ್ರಾಚೀನ ಕಾಲದ ಉನ್ನತ ವ್ಯಾಸಂಗ ಕೇಂದ್ರದ ಪ್ರಸಿದ್ಧ ಹೆಸರು. ನಳಂದ ಪ್ರಾಂತ್ಯವು ಭಾರತದ ರಾಜ್ಯ ಬಿಹಾರದ ರಾಜಧಾನಿಯಾದ ಪಾಟ್ನಾದ ಆಗ್ನೇಯ ಭಾಗದಲ್ಲಿ ಸುಮಾರು 55 ಮೈಲು ದೂರದಲ್ಲಿದೆ ಮತ್ತು CE 427 ರಿಂದ 1197 ವರೆಗೆ ಬುದ್ಧ ಪ್ರಣೀತ ತತ್ವಜ್ಞಾನದ ವ್ಯಾಸಂಗ ಕೇಂದ್ರವಾಗಿತ್ತು. ಇದು "ಇತಿಹಾಸದಲ್ಲಿ ನಮೂದಿತವಾದ ಮೊದಲ ಅತಿ ಶ್ರೇಷ್ಠವಾದ ವಿಶ್ವವಿದ್ಯಾಲಯ" ಎಂದು ಕರೆಯಲ್ಪಟ್ಟಿದೆ.
ಅಮೆಡೆಯೋ ಕ್ಲೆಮೆನ್ಟೆ ಮೊಡಿಗ್ಲಿಯನಿ (ಜುಲೈ ೧೨, ೧೮೮೪ - ಜನವರಿ ೨೪, ೧೯೨೦), ಪ್ರಮುಖವಾಗಿ ಫ್ರಾನ್ಸ್ ದೇಶದಲ್ಲಿ ಕೆಲಸ ಮಾಡಿದ ಇಟಾಲಿಯನ್ ಕಲಾವಿದ. ಪ್ರಾಥಮಿಕವಾಗಿ ಒಬ್ಬ ಮೂರ್ತ ಕಲಾವಿದರಾಗಿದ್ದರೂ, ಮುಖವಾಡ-ಮಾದರಿಯ ಬಹುರೂಪಿ ಚಹರೆಗಳು ಹಾಗು ಕೃತಿ ರೂಪದ ದೀರ್ಘೀಕರಣದಿಂದ ನಿರೂಪಿತವಾದ ಆಧುನಿಕ ಶೈಲಿಯ ವರ್ಣಚಿತ್ರಗಳು ಹಾಗು ಶಿಲ್ಪಕಲಾಕೃತಿಗಳಿಗೆ ಪ್ರಸಿದ್ಧರಾಗಿದ್ದರು. ಇವರು ಟ್ಯೂಬರ್ಕ್ಯುಲರ್ ಮೆನಿಂಜೈಟಿಸ್(ಕ್ಷಯರೋಗದ ಮಿದುಳ್ಪೊರೆಯುರಿತ) ಕಾಯಿಲೆ, ಹೆಚ್ಚಿದ ಬಡತನ, ಅತಿಯಾದ ಕೆಲಸ, ಹಾಗು ಆಲ್ಕೋಹಾಲ್ ಹಾಗು ಮಾದಕದ್ರವ್ಯದ ವ್ಯಸನದಿಂದಾಗಿ ಪ್ಯಾರಿಸ್ ನಲ್ಲಿ ನಿಧನರಾದರು.
ತೈ ಚಿ ಚುಆನ್' (simplified Chinese: 太极拳; traditional Chinese: 太極拳; pinyin: tàijíquán; Wade–Giles: t'ai4 chi2 ch'üan2) (ಪದವನ್ನು "ಪರಮ ಸರ್ವೋತ್ಕೃಷ್ಟ ಮುಷ್ಟಿ" ಎಂದು ಅಕ್ಷರಶಃ ಭಾಷಾಂತರಿಸಬಹುದು) ಎಂಬುದು ಒಂದು ಆಂತರಿಕ ಚೈನೀಸ್ ಕದನ ಕಲೆ. ಇದನ್ನು ರಕ್ಷಣಾ ತರಬೇತಿ ಹಾಗು ಆರೋಗ್ಯದ ಅನುಕೂಲಗಳು ಎರಡೂ ಕಾರಣಕ್ಕೆ ಅಭ್ಯಾಸ ಮಾಡಲಾಗುತ್ತದೆ. ಇದನ್ನು ವಿಶೇಷವಾಗಿ ಹಲವು ವಿಧದ ಇತರ ವೈಯಕ್ತಿಕ ಕಾರಣಗಳಿಗಾಗಿಯೂ ಸಹ ಅಭ್ಯಾಸ ಮಾಡಲಾಗುತ್ತದೆ: ಇದು ಕ್ಲಿಷ್ಟ ಹಾಗು ಮೃದು ಕದನ ಕಲಾ ತಂತ್ರ, ಪ್ರದರ್ಶನ ಸ್ಪರ್ಧೆಗಳು, ಹಾಗು ದೀರ್ಘಾಯುಷ್ಯ.
'ಧೀರೂಭಾಯಿ 'ಹಿಂದಿ:धीरूभाई ಎಂದೂ ಹೆಸರಾದ ಧೀರಜ್ಲಾಲ್ ಹೀರಾಚಂದ್ ಅಂಬಾನಿ (ಹಿಂದಿ:धीरजलाल हीराचंद अंबानी), (ಜನನ: 28 ಡಿಸೆಂಬರ್, 1932; ಮರಣ: 6 ಜುಲೈ 2002) ತನ್ನ ಸೋದರ ಸಂಬಂಧಿಯೊಂದಿಗೆ ಮುಂಬಯಿಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ನ್ನು ಸ್ಥಾಪಿಸಿದ, ಒಬ್ಬ ಭಾರತೀಯ ವಾಣಿಜ್ಯ ಸಾಮ್ರಾಟ. ಬಡತನದಿಂದ ಸಿರಿತನಕ್ಕೆ ಇವರು ನಡೆದು ಬಂದ ಹಾದಿಯು ವಿಶ್ವಾದ್ಯಂತ ದಂತಕಥೆಯಾಗಿದೆ.
ಅಂಕಗಣಿತ(Aritmetic)ವು ಸಂಖ್ಯೆಗಳ ಕೆಲವು ಪರಿಕ್ರಿಯೆ(Operations)ಗಳ ಲಕ್ಷಣಗಳನ್ನು ತಿಳಿಸುವ ಗಣಿತದ ಒಂದು ವಿಭಾಗ.ಇದು ನಮಗೆ 'ಎಷ್ಟು?', 'ಎಷ್ಟು ದೂರ?', 'ಎಷ್ಟು ಉದ್ದ?' ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತದೆ.ಅಂಕಗಣಿತವನ್ನು ಕೆಲವೊಮ್ಮೆ ಸಂಖ್ಯೆಗಳ ವಿಜ್ಞಾನ ಎಂದೂ ಕರೆಯುತ್ತಾರೆ. ನಾಗರಿಕತೆಯ ಬೆಳೆವಣಿಗೆಗೆ ಅನಾದಿಕಾಲದಿಂದಲೂ ಅಂಕಗಣಿತ ಅತ್ಯಾವಶ್ಯಕವಾಗಿದ್ದಿತೆಂಬುದು ¸ಸ್ಪಷ್ಟವಾಗಿಯೇ ಇದೆ. ಎಲ್ಲಾ ಜನಾಂಗಗಳ ಪೂವಿರ್ಕರು ಇದಕ್ಕಾಗಿ ಬಹಳ ಶ್ರಮಿಸಿರಬೇಕು.
ಕಂಬ-ನೃತ್ಯ(ಪೋಲ್ ಡ್ಯಾನ್ಸ್) ವು ಒಂದು ರೀತಿಯ ಪ್ರದರ್ಶನ ಕಲೆಯಾಗಿದ್ದು, ಇದರಲ್ಲಿ ನೃತ್ಯ ಮತ್ತು ಕಸರತ್ತುಗಳನ್ನು ಒಂದುಗೂಡಿಸಲಾಗುತ್ತದೆ. ಇದು ಲಂಬ ಕಂಬದೊಂದಿಗೆ ಕಾಮಪ್ರಚೋದಕವಾಗಿ ನೃತ್ಯ ಮಾಡುವುದನ್ನು ಒಳಗೊಳ್ಳುತ್ತದೆ ಹಾಗೂ ಇದನ್ನು ಹೆಚ್ಚಾಗಿ ನಗ್ನ ಕ್ಲಬ್ಗಳಲ್ಲಿ ಮತ್ತು ಶ್ರೀಮಂತರ ಕ್ಲಬ್ಗಳಲ್ಲಿ ನಿರ್ವಹಿಸಲಾಗುತ್ತದೆ. ಇದೇ ರೀತಿಯ ಕಂಬವನ್ನು (ಚೈನೀಸ್ ಕಂಬಗಳು) ಪಾನಗೃಹ/ಸರ್ಕಸ್ನಲ್ಲಿ ಮತ್ತು ರಂಗ ಪ್ರದರ್ಶನದಲ್ಲಿ ಕಾಮಪ್ರಚೋದಕವಲ್ಲದ ಪರಿಸರದಲ್ಲಿ ಬಳಸಲಾಗುತ್ತದೆ, ಈ ಸಂದರ್ಭದಲ್ಲಿ ಶೈಲಿ ಮತ್ತು ಚಲನೆಗಳು ತುಂಬಾ ಭಿನ್ನವಾಗಿರುತ್ತವೆ.
ಒಂದು ಮುದ್ರೆ ಯು [muːˈdrɑː] (ಸಂಸ್ಕೃತ: मुद्रा, ("ಮೊಹರು," "ಗುರುತು," ಅಥವಾ "ಅಭಿನಯ),) ಹಿಂದೂಧರ್ಮ ಅಥವಾ ಬುದ್ಧಧರ್ಮದಲ್ಲಿ ಸಾಂಕೇತಿಕ ಅಥವಾ ಧಾರ್ಮಿಕ ಅನುಷ್ಠಾನಗಳ ಒಂದು ಅಭಿನಯವಾಗಿದೆ ಅಥವಾ ಸಂಕೇತವಾಗಿದೆ. ಹಲವು ಮುದ್ರೆಗಳು ಪೂರ್ತಿ ದೇಹದ ಉಪಯೋಗವನ್ನು ಒಳಗೊಂಡಿರುತ್ತವೆ, ಹೆಚ್ಚಿನ ಮುದ್ರೆಗಳು ಕೈಗಳು ಮತ್ತು ಬೆರಳುಗಳ ಜೊತೆಗೆ ನಿರ್ವಹಿಸಲ್ಪಡುತ್ತವೆ. ಮುದ್ರೆಯು ಒಂದು ಆಧ್ಯಾತ್ಮಿಕ ಅಭಿನಯವಾಗಿದೆ ಮತ್ತು ಧರ್ಮ ಮತ್ತು ಟಾವೋ ತತ್ವಗಳ ಭಾರತಿಯ ಧರ್ಮಗಳು ಮತ್ತು ಸಂಪ್ರದಾಯಗಳ ಪ್ರತಿಮಾಶಾಸ್ತ್ರ ಮತ್ತು ಆಧಾತ್ಮಿಕ ಆಚರಣೆಗಳಲ್ಲಿ ಪ್ರಮಾಣಿತವಾಗಿ ಆಚರಿಸಲ್ಪಡುವ ಒಂದು ಶಕ್ತಿಯುತ ಸಂಕೇತವಾಗಿದೆ.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದೂ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟೃವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ,ನೈರುತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ನಂದಿತಾ ದಾಸ್ (ಜನನ ೭ ನವೆಂಬರ್ ೧೯೬೯), ಪ್ರಶಸ್ತಿ ವಿಜೇತೆ ಭಾರತೀಯ ಚಲನಚಿತ್ರ ನಟಿ ಹಾಗು ನಿರ್ದೇಶಕಿ ಎಂದು ಹೆಸರಾಗಿದ್ದಾರೆ. ನಟಿಯಾಗಿ, ಈಕೆ ಫೈರ್ (೧೯೯೬), ಅರ್ಥ್ (೧೯೯೮), ಬವನ್ಡರ್ (೨೦೦೦) ಹಾಗು ಆಮಾರ್ ಭುವನ್ (೨೦೦೨) ಚಿತ್ರದಲ್ಲಿನ ನಟನೆಯಿಂದಾಗಿ ಗಮನ ಸೆಳೆದಿದ್ದಾರೆ. ನಿರ್ದೇಶಕಿಯಾಗಿ, ಫಿರಾಕ್ (೨೦೦೮) ಎಂಬ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶಿಸಿದ್ದಾರೆ; ಚಿತ್ರವು ಹಲವು ರಾಷ್ಟ್ರೀಯ ಹಾಗು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
International Standard Book Number
The International Standard Book Number, or ISBN, is a unique, numeric commercial book identifier based upon the 9-digit Standard Book Numbering (SBN) code created by Gordon Foster, now Emeritus Professor of Statistics at Trinity College, Dublin, for the booksellers and stationers W.H. Smith and others in 1966. The 10-digit ISBN format was developed by the International Organization for Standardization and was published in 1970 as international standard ISO 2108. (However, the 9-digit SBN code was used in the United Kingdom until 1974.) Currently, the ISO’s TC 46/SC 9 is responsible for the ISBN. Since 1 January 2007, ISBNs have contained 13 digits, a format that is compatible with Bookland EAN-13s.
ಡಾ.ಧರಣಿದೇವಿ ಮಾಲಗತ್ತಿ ಅವರು ಕವಿಯಾಗಿ, ಮಹಿಳಾಪರ ಸಾಹಿತಿಯಾಗಿ, ಪೊಲೀಸ್ ಇಲಾಖೆಯಲ್ಲಿ ಡಿ.ವೈ.ಎಸ್.ಪಿಯಾಗಿ ಕರ್ತವ್ಯ ನಿರ್ವಹಿಸುತ್ತಾ, ಅದರೊಂದಿಗೆ ಸಾಹಿತ್ಯಿಕ ಸೃಜನಶೀಲತೆಯನ್ನು ಮೈಗೂಡಿಸಿಕೊಂಡು, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಒಳ್ಳೆಯ ವಿಚಾರ ಪೂರ್ಣ ಕೃತಿಗಳನ್ನು ನೀಡಿ ಸಾಹಿತ್ಯ ವಲಯವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಇವರು ಹಲವಾರು ಕಥಾಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ.
ಧುಮುಕುಕೊಡೆ ಜಿಗಿತ ವು ಆಕಾಶ ನೆಗೆತ ಎಂಬ ಹೆಸರಿನಿಂದಲೂ ಸುಪರಿಚಿತವಾಗಿದ್ದು, ಇದು ವಿಮಾನ ಅಥವಾ ವಾಯುನೌಕೆಯೊಂದರಿಂದ ನಿರ್ಗಮಿಸಿ ಧುಮುಕುಕೊಡೆಯೊಂದರ (ಪ್ಯಾರಾಷೂಟ್ ಒಂದರ) ನೆರವಿನಿಂದ ಭೂಮಿಗೆ ಹಿಂದಿರುಗುವ ಒಂದು ಸಾಹಸಕಾರ್ಯವಾಗಿದೆ. ಧುಮುಕುಕೊಡೆಯು ಇನ್ನೂ ಸಜ್ಜುಗೊಳಿಸಲ್ಪಡದಿರುವಿಕೆಯ ಅವಧಿಯಾದ, ಒಂದು ನಿಶ್ಚಿತ ಪ್ರಮಾಣದಲ್ಲಿನ ಸ್ವತಂತ್ರ ಪತನವನ್ನು ಹಾಗೂ ದೇಹವು ಕ್ರಮೇಣವಾಗಿ ಅಂತಿಮ ವೇಗಕ್ಕೆ ಹೆಚ್ಚಿಸಿಕೊಳ್ಳುವುದನ್ನು ಇದು ಒಳಗೊಂಡಿರಬಹುದು ಅಥವಾ ಒಳಗೊಳ್ಳದಿರಬಹುದು. ಆಕಾಶ ನೆಗೆತದ ಇತಿಹಾಸವು ಆಂಡ್ರೆ-ಜಾಕ್ವೆಸ್ ಗಾರ್ನರಿನ್ ಎಂಬಾತನೊಂದಿಗೆ ಆರಂಭವಾಗುತ್ತದೆ.
ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೮ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ.
ಕತ್ತಾಳೆ ಏಕದಳ ಸಸ್ಯಗಳ ಗುಂಪಿನಲ್ಲಿನ ಅಮರಿಲ್ಲಿಡೇಸೀ ಕುಟುಂಬಕ್ಕೆ ಸೇರಿದ ಅಗೇವ್ ಎಂಬ ಶಾಸ್ತ್ರೀಯ ಹೆಸರಿನ ಒಂದು ಸಸ್ಯಜಾತಿ.ಈ ಸಂಕುಲದಲ್ಲಿ ಹಲವಾರು ಪ್ರಭೇದಗಳಿದ್ದು, ಕೆಲವು ಪ್ರಭೇದಗಳನ್ನು ದಕ್ಷಿಣ ಅಮೇರಿಕ, ಮೆಕ್ಸಿಕೋಗಳಿಂದ ಕೈಗಾರಿಕಾ ದೃಷ್ಟಿಯಿಂದ ಅಥವಾ ಅಲಂಕಾರಕ್ಕಾಗಿ ಭಾರತಕ್ಕೆ ತಂದು ಬೆಳೆಸಲಾಗಿದೆ. ಸಂಸ್ಕೃತದ ಶಬ್ದ' ಕಂತಾಳ ' ಎಂಬುದು ಇದೇ ಸಸ್ಯವನ್ನು ಕುರಿತಾದುದು ಎಂದು ಕೆಲವರ ಅಭಿಪ್ರಾಯ. ಭಾರತದಲ್ಲಿ ಸುಮಾರು ೧೬ನೇ ಶತಮಾನದಿಂದ ಇದನ್ನು ಕೃಷಿ ಮಾಡಲಾಗಿದೆ ಎಂದು ಅಂದಾಜು ಮಾಡಲಾಗಿದೆ.
ಧೂಳುಜಾಡಿನ ರೇಸಿಂಗ್(ಓಟದ ಸ್ಪರ್ಧೆ)
ಈ ಲೇಖನವು ವಾಹನಗಳ ಓಟಸ್ಪರ್ಧೆ(ರೇಸಿಂಗ್)ಗೆ ಸೀಮಿತವಾಗಿದೆ; ಮೋಟರ್ ಸೈಕಲ್ ಗಳು, ಕುದುರೆಗಳು, ಮತ್ತು ನಾಯಿಗಳ ರೇಸ್ ಗಳನ್ನೂ ಈ ಧೂಳುಜಾಡುಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ.
ಚಲನೆಯ ಭ್ರಮೆ ಸೃಷ್ಟಿಗೆ ಆಕೃತಿಯೊಂದರ ಸ್ಥಾನಗಳ ಅಥವಾ 2-D(=2ನೇ ಆಯಾಮ) ಇಲ್ಲವೇ 3-D(=3ನೇ ಆಯಾಮ) ಚಿತ್ರಗಳ ದೃಶ್ಯ ಸರಣಿಯನ್ನು ಒಂದು ಅನುಕ್ರಮದ ಮಾದರಿಯಲ್ಲಿ ಕ್ಷಿಪ್ರವಾಗಿ ಪ್ರದರ್ಶನವಾಗುವಂತೆ ಮಾಡುವುದೇ ಅನಿಮೇಶನ್ . ಇದು ದೃಷ್ಟಿಯ ನಿರಂತರತೆಯಿಂದ ಉಂಟಾಗುವ ಚಲನೆಯ ದೃಶ್ಯದ ಭ್ರಮೆ ಹಾಗೂ ಇದನ್ನು ಅಂಸಂಖ್ಯಾತ ವಿಧಾನಗಳಲ್ಲಿ ಸೃಷ್ಟಿಸಬಹುದು ಮತ್ತು ಪ್ರದರ್ಶಿಸಲೂಬಹುದು. ಅನಿಮೇಶನ್ ಪ್ರದರ್ಶಿಸಲು ಹಲವು ಇತರೆ ಪದ್ಧತಿಗಳು ಅಸ್ಥಿತ್ವದಲ್ಲಿವೆ, ಅನಿಮೇಶನ್ ಪ್ರದರ್ಶಿಸುವ ಅತ್ಯಂತ ಸಾಮಾನ್ಯ ವಿಧಾನವೆಂದರೆ, ಚಲಿಸುವ ಚಿತ್ರ ಅಥವಾ ವಿಡಿಯೋ ಪ್ರೋಗ್ರಾಮ್.
ಧ್ವನಿಯಂಚೆ (ಇದು ಧ್ವನಿ-ಅಂಚೆ , VMS , ಅಥವಾ ಸಂದೇಶ ಕಣಜ ಎಂದೂ ಸಹ ಕರೆಯಲ್ಪಡುತ್ತದೆ) ಎಂಬುದು ಶೇಖರಿಸಲ್ಪಟ್ಟ ದೂರವಾಣಿ ಸಂದೇಶಗಳ ಒಂದು ಕೇಂದ್ರೀಕೃತ ವ್ಯವಸ್ಥೆಯಾಗಿದ್ದು, ಈ ಸಂದೇಶಗಳನ್ನು ನಂತರದಲ್ಲಿ ಮತ್ತೆ ಪಡೆದುಕೊಳ್ಳಬಹುದಾಗಿದೆ. ಒಂದು ಉತ್ತರಿಸುವ ಯಂತ್ರವನ್ನು ಬಳಸುವುದೂ ಸೇರಿದಂತೆ, ಶೇಖರಿಸಲ್ಪಟ್ಟಿರುವ ದೂರಸಂಪರ್ಕ ಧ್ವನಿ ಸಂದೇಶವೊಂದನ್ನು ರವಾನಿಸುವ ಯಾವುದೇ ವ್ಯವಸ್ಥೆಯನ್ನು ಸೂಚಿಸಲು ಕೂಡಾ ಈ ಪರಿಭಾಷೆಯನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ. ಬಹುತೇಕ ಸೆಲ್ ಫೋನುಗಳು ಧ್ವನಿಯಂಚೆಯನ್ನು ಒಂದು ಮೂಲಭೂತ ಲಕ್ಷಣವಾಗಿ ಹೊಂದಿವೆ, ಮತ್ತು ಅನೇಕ ಸ್ಥಿರ-ಸಂಪರ್ಕದ ದೂರವಾಣಿಗಳು ಮತ್ತು ಸಾಂಸ್ಥಿಕ PBX ವ್ಯವಸ್ಥೆಗಳು ತಮ್ಮದೇ ಆದ ಧ್ವನಿಯಂಚೆ ಆಯ್ಕೆಗಳನ್ನು ಹೊಂದಿವೆ.
ಡ್ರ್ಯಾಗನ್ ನೃತ್ಯ (simplified Chinese: 舞龙; traditional Chinese: 舞龍; pinyin: wǔ lóng) ಎಂಬುದು ಚೀನಿಯರ ಸಂಸ್ಕೃತಿಯಲ್ಲಿನ ಸಾಂಪ್ರದಾಯಿಕ ನೃತ್ಯ ಮತ್ತು ಪ್ರದರ್ಶನದ ಒಂದು ಸ್ವರೂಪವಾಗಿದೆ. ಸಿಂಹ ನೃತ್ಯದ ರೀತಿಯಲ್ಲಿಯೇ ಇದನ್ನು ಹಬ್ಬದ ಸಂಭ್ರಮಾಚರಣೆಗ ಳಲ್ಲಿ ಅನೇಕವೇಳೆ ಕಾಣಬಹುದಾಗಿದೆ. ಅನೇಕ ಚೀನಿ ಜನರು "ಡ್ರ್ಯಾಗನ್ ವಂಶಸ್ಥರು " (龍的傳人 ಅಥವಾ 龙的传人, ಲೋಂಗ್ ಡೆ ಚುವಾನ್ ರೇನ್ ) ಎಂಬ ಪರಿಭಾಷೆಯನ್ನು ಜನಾಂಗೀಯ ಗುರುತಿನ ಒಂದು ಸಂಕೇತವಾಗಿ ಬಳಸುತ್ತಾರೆ; ಇದು ೧೯೭೦ರ ದಶಕದಲ್ಲಿ ಆರಂಭವಾದ ಒಂದು ಪ್ರವೃತ್ತಿಯ ಭಾಗವಾಗಿದೆ ಎನ್ನಬಹುದು.
ಕೃತಿಸ್ವಾಮ್ಯವು ಸಾಮಾನ್ಯವಾಗಿ ಸೀಮಿತ ಸಮಯದವರೆಗೆ ಒಂದು ಮೂಲ ಕೃತಿಯ ಸೃಷ್ಟಿಕರ್ತನಿಗೆ ಕೃತಿಯ ಮೇಲೆ ವಿಶಿಷ್ಟ ಹಕ್ಕುಗಳನ್ನು ನೀಡುವ, ಬಹುತೇಕ ಸರ್ಕಾರಗಳು ಜಾರಿಗೆ ತಂದ, ಒಂದು ಕಾನೂನುಬದ್ಧ ಪರಿಕಲ್ಪನೆ. ಸಾಮಾನ್ಯವಾಗಿ, ಅದು "ನಕಲುಮಾಡುವ ಹಕ್ಕು", ಆದರೆ ಕೃತಿಸ್ವಾಮ್ಯ ಮಾಲೀಕನಿಗೆ ಕೃತಿಗಾಗಿ ಮನ್ನಣೆ ನೀಡುವ, ಯಾರು ಕೃತಿಯನ್ನು ಇತರ ರೂಪಗಳಿಗೆ ಅನುಗೊಳಿಸಿಕೊಳ್ಳುವುದನ್ನು ನಿರ್ಧರಿಸುವ, ಯಾರು ಅದನ್ನು ಮಾಡುತ್ತಾರೆಂಬ, ಯಾರು ಆರ್ಥಿಕವಾಗಿ ಅದರಿಂದ ಲಾಭಪಡೆಯಬಹುದೆಂಬ ಹಕ್ಕು ಮತ್ತು ಇತರ ಸಂಬಂಧಿತ ಹಕ್ಕುಗಳನ್ನು ನೀಡುತ್ತದೆ. ಅದು (ಪೇಟಂಟ್, ಟ್ರೇಡ್ಮಾರ್ಕ್, ಮತ್ತು ವ್ಯಾಪಾರ ರಹಸ್ಯದಂತೆ) ವಾಸ್ತವಾಂಶವಿರುವ ಮತ್ತು ಪ್ರತ್ಯೇಕವಾದ ಒಂದು ಕಲ್ಪನೆ ಅಥವಾ ಮಾಹಿತಿಯ ಯಾವುದೇ ವ್ಯಕ್ತಪಡಿಸಬಲ್ಲ ರೂಪಕ್ಕೆ ಅನ್ವಯಿಸುವ ಒಂದು ಪ್ರಕಾರದ ಬೌದ್ಧಿಕ ಆಸ್ತಿ.
ಅಮೆರಿಕ ಸಂಯುಕ್ತ ಸಂಸ್ಥಾನ ವು (ಸಾಮಾನ್ಯವಾಗಿ ಸಂಯುಕ್ತ ಸಂಸ್ಥಾನ , ಯುಎಸ್ , ಯುಎಸ್ಎ ಅಥವಾ ಅಮೆರಿಕಾ ಎಂದು ಕರೆಯಲ್ಪಡುವ) ಐವತ್ತು ರಾಜ್ಯಗಳು ಮತ್ತು ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ ಡಿಸ್ಟ್ರಿಕ್ಟ್ಯನ್ನೊಳಗೊಂಡ ಒಂದು ಸ್ವಾಯತ್ತ ಸಾಂವಿಧಾನಿಕ ಗಣರಾಜ್ಯ. ಬಹುತೇಕ ಕೇಂದ್ರ ಭಾಗದ ಉತ್ತರ ಅಮೆರಿಕಾದಲ್ಲಿ ಸ್ಥಿತವಾಗಿರುವ ಈ ದೇಶದ ಒತ್ತೊತ್ತಾಗಿರುವ 48 ರಾಜ್ಯಗಳು ಹಾಗೂ ಪ್ರಧಾನ ಡಿಸ್ಟ್ರಿಕ್ಟ್ ವಾಷಿಂಗ್ಟನ್ ಡಿಸಿ, ಪೆಸಿಫಿಕ್ ಹಾಗೂ ಅಟ್ಲಾಂಟಿಕ್ ಸಮುದ್ರಗಳ ನಡುವೆ ನೆಲೆಗೊಂಡಿದ್ದು, ಉತ್ತರದಲ್ಲಿ ಕೆನಡಾ ಹಾಗೂ ದಕ್ಷಿಣದಲ್ಲಿ ಮೆಕ್ಸಿಕೋಗಳನ್ನು ಗಡಿಗಳಾಗಿ ಹೊಂದಿದೆ. ಅಲಾಸ್ಕಾ ರಾಜ್ಯವು ವಾಯುವ್ಯ ಭಾಗದಲ್ಲಿದ್ದು, ಕೆನಡಾವನ್ನು ಉತ್ತರ ದಿಕ್ಕಿನಲ್ಲೂ ಬೇರಿಂಗ್ ಜಲಸಂಧಿಯನ್ನು ಹಾದು ರಷ್ಯಾವನ್ನು ಪಶ್ಚಿಮ ದಿಕ್ಕಿನಲ್ಲೂ ಹೊಂದಿದೆ.
ರಾಷ್ಟ್ರಪತಿ ಆಡಳಿತ (ಅಥವ ಕೇಂದ್ರಾಡಳಿತ) ಭಾರತದ ಸಂವಿಧಾನದ ೩೫೬ರ ಪ್ರಕಾರ ಯಾವುದೇ ರಾಜ್ಯದಲ್ಲಿ ಸರ್ಕಾರವು ತನ್ನ ಕಾರ್ಯ ನಿರ್ವಹಿಸಲಾಗದಿದ್ದಲ್ಲಿ ಕೇಂದ್ರ ಸರ್ಕಾರವು ಅಲ್ಲಿನ ಆಡಳಿತವನ್ನು ತನ್ನ ಕೈಗೆ ತಗೆದುಕೊಳ್ಳುವಂತಹ ಅಧಿಕಾರ. ರಾಷ್ಟ್ರಪತಿ ಆಡಳಿತ ಎನ್ನುವುದು ಭಾರತೀಯ ಸಂವಿಧಾನದ "ಅನುಚ್ಛೇದ 356"ನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮೇಲೆ ವಿಧಿಸುವ ಪ್ರಕ್ರಿಯೆಯಾಗಿದೆ.
ಡೇವಿಡ್ ಕ್ರೇನ್ ಹಾಗೂ ಮಾರ್ಟಾ ಕಾಫ಼್ಮಾನ್ ರಿಂದ ತಯಾರಿತ ಫ಼್ರೆಂಡ್ಸ್, ಅಮೇರಿಕಾದ ಒಂದು ಧಾರಾವಾಹಿಯಾಗಿದೆ. ಸಾಂದರ್ಭಿಕ ಹಾಸ್ಯ ಧಾರಾವಾಹಿಯಾಗಿರುವ ಇದು ಎನ್.ಬಿ.ಸಿ ವಾಹಿನಿಯಲ್ಲಿ ಸೆಪ್ಟಂಬರ್ ೨೨, ೧೯೯೪ ರಿಂದ ಮೇ ೬, ೨೦೦೪ ರ ವರೆಗೆ ಪ್ರಸಾರಗೊಂಡಿತು. ಮೆನ್ಹಾಟನ್ ನ ಒಂದು ಸ್ನೇಹಿತರ ಬಳಗದ ಕಥೆಯ ಸುತ್ತ ತಿರುಗುವ ಈ ಸರಣಿಯು ವಾರ್ನರ್ಸ್ ಬ್ರದರ್ಸ್ ಟೆಲಿವಿಶನ್ ನ ಸಹಯೋಗದೊಂದಿಗೆ ಬ್ರೈಟ್/ಕಾಫ಼್ಮಾನ್/ಕ್ರೇನ್ ಪ್ರೊಡಕ್ಶನ್ಸ್ ನಿಂದ ನಿರ್ಮಿಸಲ್ಪಟ್ಟಿದೆ.
ಎಲ್ಲಾದರೂ ಇರು ಏಂತಾದರೂ ಇರು ಏಂದೆಂದಿಗೂ ನೀ ಕನ್ನಡವಾಗಿರೂ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡವೇ ಕನ್ನಡಿಗರ ಶಕ್ತಿ ಗರ್ವದಿಂದ ಘರ್ಜಿಸು ನಾ ಕನ್ನಡಿಗನೆಂದು. ಕನ್ನಡ ಚಿತ್ರರಂಗವು ಕರ್ನಾಟಕದಲ್ಲಿ ರಚಿಸಲಾಗುವ ಚಲನಚಿತ್ರಗಳನ್ನು ಒಳಗೊಂಡಿದೆ.ಕನ್ನಡ ಚಿತ್ರರಂಗವು ಮೂಲತಹ ರಂಗಭೂಮಿ ಯನ್ನು ಅವಲಂಬಿಸಿ ಆರಂಭವಾಯಿತು ಪ್ರಮುಖವಾಗಿ ಕನ್ನಡ ಚಿತ್ರಗಳು ಮತ್ತು ಕೆಲವು ತುಳು ಹಾಗು ಕೊಂಕಣಿ ಭಾಷೆಗಳ ಚಿತ್ರಗಳು ಈ ಚಿತ್ರರಂಗಕ್ಕೆ ಸೇರುತ್ತವೆ. ೧೯೩೪ರಲ್ಲಿ ತೆರೆ ಕಂಡ "ಸತಿ ಸುಲೋಚನ" ಮೊದಲ ಕನ್ನಡ ಚಿತ್ರ.ಕನ್ನಡ ಮೊದಲ ವರ್ಣಮಯ ಚಿತ್ರ [(‘ಅಮರಶಿಲ್ಪಿ ಜಕ್ಕಣಾಚಾರಿ’]).[( "ಮೂರು ದಾರಿಗಳು"]) ಇದು ಕನ್ನಡ ಚಿತ್ರರಂಗದ ಕೊನೆಯ ಕಪ್ಪುಬಿಳುಪು ಚಲನಚಿತ್ರ.೧೯೫೪ರಲ್ಲಿ ಬಿಡುಗಡೆ ಹೊಂದಿದ "ಬೇಡರ ಕಣ್ಣಪ್ಪ" ಈ ಚಿತ್ರರಂಗದ ಪ್ರಮುಖ ನಟರಾದ ರಾಜಕುಮಾರ್ ಅವರ ಮೊದಲ ಚಿತ್ರ.
ಕನ್ನಡ ಸಾಹಿತ್ಯ ಅನೇಕ ಪ್ರಕಾರಗಳಿಂದ ಶ್ರೀಮಂತವಾಗಿದೆ. ಸಾಹಿತ್ಯ ಪ್ರಕಾರದ ಸ್ವರೂಪ,ರಚನೆ(structure) ಆಧಾರದ ಮೇಲೆ ಈ ಕೆಳಕಂಡಂತೆ ವಿಂಗಡಿಸಬಹುದು.ಕನ್ನಡ ಸಾಹಿತ್ಯವೇ ಬೇರೆ -ಕನ್ನಡ ಸಾಹತ್ಯ ಪ್ರಕಾರಗಳೇ ಬೇರೆ ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಬೇರೆ ಶೀರ್ಶಿಕೆ ಕೊಡುವುದೇ ಉಚಿತ. ಸಾಹಿತ್ಯದ ವಿಷಯ ದೊಡ್ಡದು .ಅದರಲ್ಲಿ ಪ್ರಾಚೀನ ಸಾಹಿತ್ಯದಿಂದ ಅರ್ವಾಚೀನ ಸಾಹಿತ್ಯ ಎಲ್ಲಾ ವಿಷಯಗಳನ್ನು ಹಾಕಬಹುದು.
ಮಯನ್ಮಾರ್ ( ಅಧಿಕೃತವಾಗಿ ಮಯನ್ಮಾರ್ ಒಕ್ಕೂಟ -- ಉಚ್ಛಾರ:-Myanmar:(myan-mar/ Listeni/miɑːnˈmɑr/ mee-ahn-mar, /miˈɛnmɑr/ mee-en-mar or /maɪˈænmɑr/ my-an-mar (also with the stress on first syllable); Burmese pronunciation:ಮೀಯಾನ್ಮಾರ್ [mjəmà])೧,officially the Republic of the Union of Myanmar and also known as Burma) ಆಗ್ನೇಯ ಏಷ್ಯಾದ ಮುಖ್ಯಭೂಭಾಗದಲ್ಲಿನ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. ೧೯೪೮ರ ಜನವರಿ ೪ ರಂದು ಯುನೈಟೆಡ್ ಕಿಂಗ್ಡಂ ఇంದ ಸ್ವಾತಂತ್ರ್ಯ ಪಡೆದ ಈ ನಾಡು ಅಂದು ಬರ್ಮಾ ಒಕ್ಕೂಟವೆಂದು ಕರೆಯಲ್ಪಟ್ಟಿತು.