The most-visited ಕನ್ನಡ Wikipedia articles, updated daily. Learn more...
ವರ್ಣವನ್ನು ರಚಿಸುವ ಆನುವಂಶಿಕ ಸಂಗತಿಗಳು ಮಾನವ ಲಕ್ಷಣಗಳ ಮತ್ತು ಸಾಮರ್ಥ್ಯಗಳ ಪ್ರಾಥಮಿಕ ನಿರ್ಧಾರಕಗಳಾಗಿವೆ ಮತ್ತು ಆ ವರ್ಣಭೇದ ಭಿನ್ನತೆಗಳು ಒಂದು ನಿರ್ದಿಷ್ಟವಾದ ವರ್ಣದ (ಜಾತಿಯ) ಒಂದು ಆನುವಂಶಿಕ ಉತ್ಕೃಷ್ಟತೆಯನ್ನು ಉತ್ಪತ್ತಿ ಮಾಡುತ್ತವೆ ಎಂಬುದು ವರ್ಣಭೇದ ನೀತಿಯ ನಂಬಿಕೆಯಾಗಿದೆ. ವರ್ಣಭೇದ ನೀತಿಯ ಪರಿಣಾಮಗಳು "ವರ್ಣಭೇದ ನೀತಿಯ ಭೇದಭಾವಗಳು (ತಾರತಮ್ಯಗಳು)" ಎಂದು ಕರೆಯಲ್ಪಡುತ್ತವೆ. ಸಾಂಸ್ಥಿಕ ವರ್ಣಭೇದ ನೀತಿಯ ಸಂದರ್ಭದಲ್ಲಿ, ನಿರ್ದಿಷ್ಟವಾದ ವರ್ಣದ ಗುಂಪುಗಳು ಅವರ ಹಕ್ಕುಗಳಿಂದ ಅಥವಾ ಸೌಲಭ್ಯಗಳಿಂದ ವಂಚಿತರಾಗಲ್ಪಡಬಹುದು, ಅಥವಾ ಆದ್ಯತಾತ್ಮಕ ಉಪಚಾರವನ್ನು ಪಡೆದುಕೊಳ್ಳಬಹುದು.
ಫಾರೆಸ್ಟ್ ಗಂಪ್ ಎಂಬುದು ವಿನ್ಸ್ ಟನ್ ಗ್ರೂಮ್ ಎಂಬ ಲೇಖಕರಿಂದ ರಚಿಸಲ್ಪಟ್ಟ ಅದೇ ಹೆಸರಿನ 1986 ಕಾದಂಬರಿ ಯನ್ನು ಆಧಾರಿಸಿ ತೆಗೆದ ಒಂದು 1994 ರ ಅಮೇರಿಕನ್ ಚಲನಚಿತ್ರವಾಗಿದೆ. ಈ ಚಲನಚಿತ್ರವು ರಾಬರ್ಟ್ ಝೆಮೆಕಿಸ್ ನಿಂದ ನಿರ್ದೇಶಿಸಲ್ಪಟ್ಟು, ಟಾಮ್ ಹ್ಯಾಂಕ್ಸ್, ರಾಬಿನ್ ರೈಟ್ ಪೆನ್ನ್, ಮತ್ತು ಗ್ಯಾರಿ ಸಿನಿಸೆಯವರ ತಾರ ಬಳಗವನ್ನು ಹೊಂದಿದೆ. ಇದು ಫಾರೆಸ್ಟ್ ಗಂಫ್ ನ ಚಿತ್ರಕಥೆಯಾಗಿದ್ದು, ಅದರಲ್ಲಿ ಅಲಬಮಾ ದಿಂದ ಬಂದಂಥ ಒಬ್ಬ ಸರಳ ವ್ಯಕ್ತಿ ಮತ್ತು ಅವನ ಜೀವನದುದ್ದಕ್ಕೂ ಮಾಡಿದ ಪ್ರಯಾಣಗಳಲ್ಲಿ ಐತಿಹಾಸಿಕ ನೆಲೆಗಳನ್ನು ಭೇಟಿಮಾಡುವುದು, ಜನಪ್ರಿಯ ಸಂಸ್ಕೃತಿಯ ಪ್ರಭಾವ ಬೀರುವುದು, ಮತ್ತು ಕಳೆದ 20ನೇ ಶತಮಾನದ ಐತಿಹಾಸಿಕ ಘಟನೆಗಳನ್ನು ಖುದ್ದಾಗಿ ಅರಿಯುವುದು ಇವೇ ಆಗಿದ್ದವು.
ವಾರೆನ್ ಎಡ್ವರ್ಡ್ ಬಫೆಟ್ ರು (ಜನನ ಆಗಸ್ಟ್ 30, 1930) ಓರ್ವ ಅಮೇರಿಕನ್ ಹೂಡಿಕೆದಾರ, ಉದ್ಯಮಿ, ಹಾಗೂ ಲೋಕೋಪಕಾರಿಯಾಗಿದ್ದಾರೆ. ಅವರು ಇದುವರೆಗಿನ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಹೂಡಿಕೆದಾರರಾಗಿದ್ದು, ಬರ್ಕ್ಷೈರ್ ಹಾಥ್ವೇನ ಅಗ್ರ ಷೇರುದಾರರು ಮತ್ತು CEO ಆಗಿದ್ದಾರಲ್ಲದೇ 2008ರಲ್ಲಿ ಫೋರ್ಬ್ಸ್ ನಿಂದ ಸರಿಸುಮಾರು $62 ಶತಕೋಟಿಯಷ್ಟು ಅಂದಾಜು ನಿವ್ವಳ ಆದಾಯವನ್ನು ಹೊಂದಿರುವ ವಿಶ್ವದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. 2009ರಲ್ಲಿ, ಅನೇಕ ಶತಕೋಟಿ ಡಾಲರ್ಗಳನ್ನು ದತ್ತಿಗಳಿಗೆ ದಾನ ಮಾಡಿದ ನಂತರ, ಬಫೆಟ್ ನಿವ್ವಳ $40 ಶತಕೋಟಿಗಳಷ್ಟು ಆದಾಯದೊಂದಿಗೆ ಯುನೈಟೆಡ್ ಸ್ಟೇಟ್ಸ್ನ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಬಂಡವಾಳಶಾಹಿ ಯು ಕೇವಲ"ಮಾರುಕಟ್ಟೆಗಳೊಂದಿಗೆ ಸಂಬಂಧಿಸಿದ ಆರ್ಥಿಕ ಪದ್ಧತಿಯಾಗಿರದೆ, ಮಾರುಕಟ್ಟೆಯ ಆಗುಹೋಗುಗಳನ್ನು ನೋಡಿಕೊಳ್ಳುವ ಆಡಳಿತ ವ್ಯವಸ್ಥೆಯೂ ಆಗಿದೆ." ಬಂಡವಾಳಶಾಹಿಯು ಮೂರು ಶ್ರೇಣಿಯ ಅಡಳಿತ ವ್ಯವಸ್ಥೆಗೆ ಪರೋಕ್ಷವಾಗಿ ನೆರವಾಗುತ್ತದೆ. ಆರ್ಥಿಕ ವಲಯದ ಸುಧಾರಣೆಗಾಗಿ ಬಂಡವಾಳದ ಅಗತ್ಯ ಪೂರೈಸುವುದು ಹಾಗೂ ಮೂಲಭೂತ ಸೌಲಭ್ಯಗಳನ್ನು ಸ್ಫರ್ಧಾತ್ಮಕವಾಗಿ ಬಳಸಿಕೊಂಡು ಉದ್ಯೋಗವಕಾಶ ಮತ್ತು ಇತರೆ ಅನುಕೂಲಗಳನ್ನು ಕಾನೂನಿನ ಚೌಕಟ್ಟಿನಲ್ಲಿ ನಡೆಸಿಕೊಂಡು ಹೋಗುವುದೇ ಬಂಡವಾಳಶಾಹಿಯ ವ್ಯಾಖ್ಯಾನವಾಗಿದೆ.ಇದನ್ನು ರಾಜ್ಯ ಕಾನೂನು ಅಧಿಕಾರಗಳು ಹಾಗೂ ನಿಯಂತ್ರಕ ಏಜೆನ್ಸಿಗಳು ಜಾರಿಗೊಳಿಸುತ್ತವೆ. ಇದು ಆರ್ಥಿಕ ಮತ್ತು ಸಾಮಾಜಿಕ ಪದ್ದತಿಗಳ ಆಚರಣೆಯಾಗಿದೆ.
ವಾಲ್ಟರ್ ಎಲಿಯಾಸ್ "ವಾಲ್ಟ್ " ಡಿಸ್ನಿ ; (೫ ಡಿಸೆಂಬರ್ ೧೯೦೧ – ೧೯ ಡಿಸೆಂಬರ್ ೧೯೬೬) ಇವರು ಅಮೆರಿಕಾದ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕಥಾ ಲೇಖಕ, ಕಂಠದಾನ ನಟ-ಕಲಾವಿದ , ಆನಿಮೇಟರ್, ವಾಣಿಜ್ಯೋದ್ಯಮಿ, ಮನೋರಂಜನೆಗಾರ , ವಿದೂಷಕ, ಅಂತಾರಾಷ್ಟ್ರೀಯ ಖ್ಯಾತಿಯ ಗಣ್ಯವ್ಯಕ್ತಿ ಹಾಗೂ ಲೋಕೋಪಕಾರಿ ಯಾಗಿದ್ದರು. ಇಪ್ಪತ್ತನೆಯ ಶತಮಾನದಲ್ಲಿ ಮನೋರಂಜನಾ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡಿ ವಾಲ್ಟ್ ಡಿಸ್ನಿ ಖ್ಯಾತರಾಗಿದ್ದಾರೆ. ತಮ್ಮ ಸಹೋದರರ ರಾಯ್ ಒ.
ಫೆಡೋರಾ (ಲೈನಕ್ಸ್ ಡಿಸ್ಟ್ರೀಬ್ಯುಶನ್)
ಫೆಡೋರಾ ,pronounced /fəˈdɔrə/ ಇದು ಒಂದು ಆರ್ಪಿಎಂ-ಆಧಾರಿತ, ಸಮುದಾಯ- ಬೆಂಬಲಿತ ಫೆಡೋರಾ ಯೋಜನೆ ಮತ್ತು ರೆಡ್ ಹ್ಯಾಟ್ ಪ್ರಾಯೋಜಿಸಿದ ಲೈನಕ್ಸ್ ಕರ್ನಲ್ ಮೇಲೆ ಸಾಮಾನ್ಯ ಉದ್ದೇಶದೊಂದಿಗೆ ಕಾರ್ಯಾಚರಣೆ ಮಾಡುವ ವ್ಯವಸ್ಥೆಯಾಗಿದೆ. ಫೆಡೋರಾ ಯೋಜನೆಯ ಪ್ರಮುಖ ಧ್ಯೇಯ ಸಹಕಾರಯುತ ಸಮುದಾಯದಂತ ವಿಷಯ ಒಳಗೊಂಡ ಮತ್ತು ಉಚಿತ ಮತ್ತು ಮುಕ್ತ ಮೂಲ ಸಾಫ್ಟವೇರ್ ಅಭಿವೃದ್ಧಿಪಡಿಸುವುದು. ಫೆಡೋರಾದ ಒಂದು ಮುಖ್ಯ ಉದ್ದೇಶ ಎಂದರೆ, ಬರೀ ಉಚಿತ ಮತ್ತು ಮುಕ್ತ ಮೂಲ ಪರವಾನಿಗೆ ಒಳಗಡೆ ಸಾಫ್ಟವೇರ್ ವಿತರಣೆ ಮಾಡುವುದಲ್ಲ, ಜತೆಗೆ ಅಂಥ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿ ಇರುವುದೂ ಆಗಿದೆ.
ಫೆಂಗ್ ಶೂಯಿ (/[unsupported input]ˌfʌŋˈʃweɪ/ fung-shway,ಎನ್ನುವುದು ಪ್ರಾಚೀನಕಾಲದಿಂದಲೂ /ˈfʌŋʃuː.i/ FUNG-shoo-ee; Chinese: 風水, pronounced [fə́ŋʂwèi])ಒಂದು ಪುರಾತನ ಚೀನಿಯರ ಕಲಾರಾಧಾನಾ ಪದ್ದತಿಯಾಗಿದೆ.ಅಲ್ಲಿನ ಆಸ್ತಿಕತೆ ಅಥವಾ ಸೌಂದರ್ಯೋಪಾಸನೆಯನ್ನು ಸ್ವರ್ಗದ ನಿಯಮಗಳನ್ನು ನಂಬುವ ಒಂದು ಸಂಸ್ಕೃತಿಯಾಗಿದೆ. (ಖಗೋಳಶಾಸ್ತ್ರ ) ಮತ್ತು ಭೂಮಿಯ (ಭೂಗೋಲ ಶಾಸ್ತ್ರ)ವನ್ನು ಒಳಗೊಂಡಿದ್ದು ಇವುಗಳ ಸಮರ್ಪಕ ಕಲೋಪಾಸನೆಯಿಂದ ಬದುಕಿನ ಸುಧಾರಣೆಗೆ ನೆರವಾಗುವ ಧನಾತ್ಮಕ ಪ್ರಕ್ರಿಯೆ ಪಡೆಯಬಹುದಾಗಿದೆ. qi.
ಫ್ರಾಂಕ್ ಲಾಯ್ಡ್ ರೈಟ್ (ಜನ್ಮನಾಮ: ಫ್ರಾಂಕ್ ಲಿಂಕನ್ ರೈಟ್ , ಜೂನ್ 8, 1867 – ಏಪ್ರಿಲ್ 9, 1959) ಅಮೆರಿಕಾದ ಓರ್ವ ವಾಸ್ತುಶಿಲ್ಪಿ, ಒಳಾಂಗಣ ವಿನ್ಯಾಸಕಾರ, ಬರಹಗಾರ ಮತ್ತು ಶಿಕ್ಷಣತಜ್ಞನಾಗಿದ್ದ. 1,000ಕ್ಕೂ ಹೆಚ್ಚಿನ ಯೋಜನೆಗಳನ್ನು ಇವನು ವಿನ್ಯಾಸಗೊಳಿಸಿದ್ದು, ಅವುಗಳ ಪೈಕಿ 500ಕ್ಕೂ ಹೆಚ್ಚಿನ ಯೋಜನೆಗಳು ಸಂಪೂರ್ಣಗೊಂಡ ಕೆಲಸಗಳಲ್ಲಿ ಹೊರಹೊಮ್ಮಿದವು. ರೈಟ್ನಿಂದ ಪ್ರವರ್ತಿಸಲ್ಪಟ್ಟ ಸುಸಂಘಟಿತ ವಾಸ್ತುಶೈಲಿಯು (ಫಾಲಿಂಗ್ವಾಟರ್ನ ನಿದರ್ಶನದ ಮೂಲಕ ಇದು ನಿರೂಪಿಸಲ್ಪಟ್ಟಿದೆ), ಪ್ರೈರೀ ಪಂಥದ ವಾಸ್ತುಶೈಲಿಯ ಆಂದೋಲನದ (ರೋಬೀ ಹೌಸ್, ವೆಸ್ಕಾಟ್ ಹೌಸ್, ಮತ್ತು ಡಾರ್ವಿನ್ D. ಮಾರ್ಟಿನ್ ಹೌಸ್ ಇವೇ ಮೊದಲಾದ ನಿದರ್ಶನಗಳ ಇದು ಮೂಲಕ ನಿರೂಪಿಸಲ್ಪಟ್ಟಿದೆ) ಒಂದು ಅಗ್ರಗಣ್ಯನಾಗಿತ್ತು, ಮತ್ತು ಉಸೋನಿಯಾ ಶೈಲಿಯ ಮನೆಯ ಪರಿಕಲ್ಪನೆಯನ್ನು (ರೋಸೆನ್ಬೌಮ್ ಹೌಸ್ ನಿದರ್ಶನದ ಮೂಲಕ ಇದು ನಿರೂಪಿಸಲ್ಪಟ್ಟಿದೆ) ಇದು ಅಭಿವೃದ್ಧಿಪಡಿಸಿತು.
ಫೀನಿಕ್ಸ್ (pronounced /ˈfiːnɪks/ FEE-niks, ಒ'ಒಧಾಮ್ ಸ್ಕಿಕಿಕ್ ,ಯಾವ್ ಪೈವಾಸಿಂಕಾ ,ವೆಸ್ಟರ್ನ್ ಅಪಾಚೆ ಫಿನಿಗಿಸ್ ,ನವಜೊ ಹೂಜ್ದೊ ,ಮೊಜಾವೆ ಹಚ್ಪಾ'ಅನ್ಯಾ ನ್ಯಾವಾ )ಇದು ಅದರ ರಾಜಧಾನಿಯಾಗಿರುವುದಲ್ಲದೇ ಅತಿ ದೊಡ್ಡ U.S. ಸ್ಟೇಟ್ ನ ವಿಶಾಲ ನಗರವಾಗಿದೆ.ಅರಿಜೊನವು ಯುನೈಟೆಡ್ ಸ್ಟೇಟ್ಸ್ ನಲ್ಲಿನ ಅಧಿಕ ಜನಸಂಖ್ಯೆಯುಳ್ಳ ಐದನೆಯ ದೊಡ್ಡ ನಗರ ಎನಿಸಿದೆ.ಅಲ್ಲದೇ ಅತ್ಯಧಿಕ ಜನಸಂಖ್ಯೆಯುಳ್ಳ ರಾಜಧಾನಿಯಾಗಿದೆ. ಫೀನೀಕ್ಸ್ ಸುಮಾರು 1,601,587 ಜನರಿಗೆ ಆಶ್ರಯ ನೀಡಿದ ನೆಲೆವಾಸವಾಗಿದೆ ಎಂದು U.S.ನ ಜನಗಣತಿ ಬ್ಯುರೊ 2009 ರಲ್ಲಿ ದಾಖಲಿಸಿದೆ.ಇದು ಫೀನಿಕ್ಸ್ ಮೆಟ್ರೊಪಾಲಿಟಿನ್ ಏರಿಯಾದ ಪ್ರಮುಖ ಪ್ರದೇಶವೆನಿಸಿದೆ.(ಇದನ್ನು ವ್ಯಾಲ್ಲಿ ಆಫ್ ದಿ ಸನ್ ಎಂದೂ ಹೇಳಲಾಗುತ್ತದೆ.)ಯುನೈಟೆಡ್ ಸ್ಟೇಟ್ಸ್ ನಲ್ಲಿ 12 ನೆಯ ಅತಿದೊಡ್ಡ ಮೆಟ್ರೊಪಾಲಿಟಿನ್ ಪ್ರದೇಶವಾಗಿದೆಯಲ್ಲದೇ ಒಟ್ಟು ಸುಮಾರು 4.3 ದಶಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇದೆ.
ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಮುದ್ರಣಾಲಯ(ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್)
ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ (OUP ) ವಿಶ್ವದಲ್ಲೇ ಅತೀ ದೊಡ್ಡ ವಿಶ್ವವಿದ್ಯಾನಿಲಯ ಮುದ್ರಣಾಲಯವಾಗಿದೆ. ಇದು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ವಿಭಾಗವಾಗಿದ್ದು, ೧೫ ಮಂದಿ ಶಿಕ್ಷಣತಜ್ಞರ ಗುಂಪು ಇದನ್ನು ನಿರ್ವಹಿಸುತ್ತದೆ. ಈ ಶಿಕ್ಷಣತಜ್ಞರನ್ನು ಉಪಕುಲಪತಿಗಳು ನೇಮಕ ಮಾಡುತ್ತಾರೆ ಮತ್ತು ಅವರು ಡೆಲಿಗೇಟ್ಸ್ ಆಫ್ ದಿ ಪ್ರೆಸ್ ಎಂದು ಪರಿಚಿತರಾಗಿದ್ದಾರೆ.
ಲೂಯಿಸ್ ಮೌಂಟ್ಬ್ಯಾಟನ್, ಬರ್ಮಾದ 1ನೆಯ ಅರ್ಲ್ ಮೌಂಟ್ಬ್ಯಾಟನ್
ನೌಕಾದಳಾಧಿಪತಿ ಲೂಯಿಸ್ ಫ್ರಾನ್ಸಿಸ್ ಆಲ್ಬರ್ಟ್ ವಿಕ್ಟರ್ ನಿಕೋಲಸ್ ಜಾರ್ಜ್ ಮೌಂಟ್ಬ್ಯಾಟನ್ ಎಂಬಾತನು ಬರ್ಮಾದ ೧ನೆಯ ಅರ್ಲ್ ಅಂತಸ್ತಿನ ಮೌಂಟ್ಬ್ಯಾಟನ್ ಆಗಿದ್ದು KG, GCB, OM, GCSI, GCIE, GCVO, DSO, PC, FRS (ಪೂರ್ವನಾಮ ಬ್ಯಾಟೆನ್ಬರ್ಗ್ನ ರಾಜಕುಮಾರ ಲೂಯಿಸ್ ; ೨೫ ಜೂನ್ ೧೯೦೦ – ೨೭ ಆಗಸ್ಟ್ ೧೯೭೯) ಬಿರುದಾಂಕಿತಗಳನ್ನು ಹೊಂದಿದ್ದ ಈತನು ಓರ್ವ ಬ್ರಿಟಿಷ್ ರಾಜನೀತಿಜ್ಞ ಮತ್ತು ನೌಕಾಪಡೆಯ ಅಧಿಕಾರಿಯಾಗಿದ್ದನಲ್ಲದೇ ಎಡಿನ್ಬರ್ಗ್ನ ಡ್ಯೂಕ್ ಪ್ರಭು ಫಿಲಿಪ್ನ (ಎಲಿಜಬೆತ್ IIಳ ಪತಿ) ಹಿರಿಯ ಸೋದರ ಸಂಬಂಧಿ ಆಗಿದ್ದರು. ಈತನು ಕೊನೆಯ ಭಾರತದ ವೈಸ್ರಾಯ್ (೧೯೪೭)ಆಗಿದ್ದು ೧೯೫೦ರಲ್ಲಿ ಆಧುನಿಕ ಭಾರತೀಯ ಗಣರಾಜ್ಯವು ರೂಪುಗೊಳ್ಳಲು ಕಾರಣವಾದ ಸ್ವತಂತ್ರ ಭಾರತೀಯ ಒಕ್ಕೂಟದ (೧೯೪೭–೪೮) ಪ್ರಥಮ ಮಹಾಮಂಡಲಾಧಿಪತಿ ಕೂಡಾ ಆಗಿದ್ದನು. ೧೯೫೪ರಿಂದ ೧೯೫೯ರವರೆಗೆ ಸುಮಾರು ನಲವತ್ತು ವರ್ಷಗಳ ಹಿಂದೆ ಆತನ ತಂದೆ ಬ್ಯಾಟೆನ್ಬರ್ಗ್ನ ಪ್ರಭು ಲೂಯಿಸ್ನ ಹುದ್ದೆಯಾಗಿದ್ದ ಪ್ರಥಮ ದರ್ಜೆಯ ಸೀ ಲಾರ್ಡ್ ಅಧಿಕಾರಿಯಾಗಿದ್ದನು.
ಸುಮಾರು 3,000 ವರ್ಷಗಳ ಹಿಂದೆ ಸಿಯೆರಾ ಮಿವೊಕ್,ಮೊನೊ ಪಯುಟೆ ಮತ್ತು ಇನ್ನಿತರ ಸ್ಥಳೀಯ ಅಮೆರಿಕನ್ ಗುಂಪುಗಳು ಕ್ಯಾಲಿಫೊರ್ನಿಯಾದ ಕೇಂದ್ರ ಸಿಯೆರಾ ನೆವದಾ ಪ್ರದೇಶದಲ್ಲಿ ವಾಸವಾಗಿದ್ದವು. ಯಾವಾಗ ಯುರೊಪಿಯನ್ ಅಮೆರಿಕನ್ಗಳು ಈ ಪ್ರದೇಶಕ್ಕೆ ಭೇಟಿ ನೀಡಿದರೋ ಆಗ ಇದನ್ನು ಯೊಸೆಮೈಟ್ ನ್ಯಾಶನಲ್ ಪಾರ್ಕ್ ಎಂದು ಇದಕ್ಕೆ ಹೆಸರು ಬಂತು.ಮಿವೊಕ್-ಭಾಷಿಕ ಸ್ಥಳೀಯ ಅಮೆರಿಕನ್ಗಳು ಅಂದರೆ ಅಹ್ವಾನೆಚೀ ಜನಸಮೂಹ ಯೊಸೆಮೈಟ್ ಕೊಳ್ಳದಲ್ಲಿ ವಾಸವಾಗಿತ್ತು. ಆಗಿನ ಕ್ಯಾಲಿಫೊರ್ನಿಯಾ ಗೊಲ್ಡ್ ರಶ್ ಪ್ರಕರಣವು 19ನೆಯ ಶತಮಾನದ ಮಧ್ಯ ಭಾಗದಲ್ಲಿ ಹೊರಭಾಗದವರ ಸಂಖ್ಯೆ ಹೆಚ್ಚಳಕ್ಕ್ಕೆ ಕಾರಣವಾಯಿತು, ಸ್ಥಳೀಯ ನೇಟಿವ್ ಅಮೆರಿಕನ್ರುಗಳು ಮತ್ತು ಶ್ವೇತವರ್ಣದ ನೆಲೆವಾಸಿಗಳ ನಡುವೆ ಉದ್ವಿಗ್ನತೆ ಉಂಟಾಗಿ ಮಾರಿಪೊಸಾ ಸಮರಕ್ಕೆ ಕಾರಣವಾಯಿತು.
ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು (Chemicals), ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ. ವಾಯು ಮಾಲಿನ್ಯದ ಕಾರಣದಿಂದ ಉಂಟಾಗುವ ವಾಯುಮಂಡಲ ಓಝೋನ್ ಬರಿದಾಗುವಿಕೆಯು, ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ.
ಈತನನ್ನು ನೃತ್ಯ ಸಂಗೀತಗಾರ ಕೆನ್ನಿ "ಡೋಪ್" ಗಾನ್ಜಲೆಜ್, ಅಲಿಯಾಸ್ "ಬಕೆಟ್ಹೆಡ್ಸ್" ಆಗಿ ತಪ್ಪಾಗಿ ತಿಳಿಯಬಾರದು. ಬ್ರಿಯಾನ್ ಕ್ಯಾರಲ್ (1969ರ ಮೇ 13ರಂದು ಜನಿಸಿದನು) ಹಲವು ಪ್ರಕಾರದ ಸಂಗೀತವನ್ನು ನುಡಿಸುವ ಗಿಟಾರ್-ವಾದಕನಾಗಿದ್ದಾನೆ, ಈತನು ಬಕೆಟ್ಹೆಡ್ ಎಂಬ ರಂಗನಾಮದಿಂದ ಹೆಸರುವಾಸಿಯಾಗಿದ್ದಾನೆ. ಆತನು 2010ರವರೆಗೆ ಸುಮಾರು 28 ಸ್ಟುಡಿಯೊ ಆಲ್ಬಂಗಳು, 4 ವಿಶೇಷ ಬಿಡುಗಡೆಗಳು, 1 EPಅನ್ನು ಬಿಡುಗಡೆಗೊಳಿಸಿದ್ದಾನೆ.
ಒಬ್ಬ ವ್ಯಕ್ತಿ ಸ್ವಯಿಚ್ಛೆಯಿಂದ ರಕ್ತ ನೀಡಲು ಬಂದಾಗ ರಕ್ತದಾನ ಪ್ರಕ್ರಿಯೆ ನಡೆಯುವುದು. ಅಂತಹ ರಕ್ತವನ್ನು ರಕ್ತವರ್ಗಾವಣೆಗಳಿಗೆ ಬಳಸಲಾಗುತ್ತದೆ ಅಥವಾ ವಿಭಾಗೀಕರಣ ಎನ್ನುವ ಪ್ರಕ್ರಿಯೆಯ ಮೂಲಕ ಔಷಧಿ ತಯಾರಿಕೆಗಾಗಿ ಬಳಸಲಾಗುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಹುತೇಕ ರಕ್ತದಾನಿಗಳು ಹಣವನ್ನು ತೆಗೆದುಕೊಳ್ಳದೆ ಸ್ವ ಇಚ್ಛೆಯಿಂದ ಸಮೂಹ ಪೂರೈಕೆಗೆಂದು ರಕ್ತದಾನ ಮಾಡುತ್ತಾರೆ.
ಫ್ರ್ಯಾನ್ಝ್ ಕಾಫ್ಕ (German pronunciation: [ˈfʁants ˈkafka]; 3 ಜುಲೈ 1883 – 3 ಜೂನ್ 1924) 20ನೆಯ ಶತಮಾನ ಕಂಡ ಬಹಳ ಪ್ರಭಾವಿ ಕಲ್ಪಿತಕಥೆಗಳ ಬರಹಗಾರರಲ್ಲಿ ಒಬ್ಬರಾಗಿದ್ದರು; ಕಾದಂಬರಿಕಾರ ಮತ್ತು ಸಣ್ಣ ಕಥೆಗಳ ಬರಹಗಾರರಾಗಿದ್ದ ಇವರ ಕೃತಿಗಳು, 20ನೆಯ ಶತಮಾನದ ಸಾಹಿತ್ಯಕ್ಷೇತ್ರದ ಪ್ರಮುಖ ಸಾಧನೆಗಳಲ್ಲಿ ಒಂದು ಎಂಬುದನ್ನು ಇವರ ನಿಧನದ ನಂತರವೇ ಗಮನಿಸಲಾಯಿತು. ಅವರು ಅಂದಿನ ಆಸ್ಟ್ರೋ-ಹಂಗೇರಿಯನ್ ರಾಜ್ಯಕ್ಕೆ ಸೇರಿದ್ದ, ಈಗಿನ ಝೆಕ್ ರಿಪಬ್ಲಿಕ್ ಗೆ ಸೇರಿದ, ಬೊಹೇಮಿಯಾದ ಪ್ರೇಗ್ ನಲ್ಲಿ ಜರ್ಮನ್ ಭಾಷೆ ಮಾತನಾಡುವ ಮಧ್ಯಮ ವರ್ಗದ ಯಹೂದಿ ದಂಪತಿಗಳಿಗೆ ಜನಿಸಿದರು. ಓಲ್ಡ್ ಟೌನ್ ಸ್ಕ್ವೇರ್ ನಲ್ಲಿರುವ ಪ್ರೇಗ್ ನ ಚರ್ಚ್ ಆಫ್ ಸೇಂಟ್ ನಿಕೋಲಸ್ ಪಕ್ಕದಲ್ಲಿರುವ ಕಾಫ್ಕ ಜನಿಸಿದ ಮನೆಯು ಈಗ ಈ ಬರಹಗಾರರ ಕೃತಿ ಮತ್ತು ಜೀವನದ ವಿಷಯಗಳ ಕುರಿತು ಪ್ರದರ್ಶನವನ್ನೂ ಸರ್ವಕಾಲದಲ್ಲೂ ಹೊಂದಿರುತ್ತದೆ.
ಜೀವಿಗಳು ಶವವಾಗಿದ್ದರೂ ಅಥವಾ ಬದುಕಿದ್ದರೂ ವ್ಯತ್ಯಾಸವೇ ಇಲ್ಲದಂತೆ ಅವುಗಳ ಜೀವಾಳ(ಸಾಮಾನ್ಯವಾಗಿ ರಕ್ತದ ರೂಪದಲ್ಲಿ)ವನ್ನು ಕುಡಿದು ಜೀವಿಸುವ ಪೌರಾಣಿಕ ಇಲ್ಲವೇ ದಂತಕಥೆಯ ಕಲ್ಪನೆಗಳೇ ರಕ್ತಪಿಶಾಚಿಗ ಳಾಗಿವೆ. ದಂತಕಥೆಗಳ ಪ್ರಕಾರ, ರಕ್ತಪಿಶಾಚಿಗಳು ಆಗ್ಗಾಗ್ಗೆ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತವಲ್ಲದೇ ತಾವು ಬದುಕಿದ್ದಾಗ ಇದ್ದ ಸ್ಥಳದ ನೆರೆಹೊರೆಯಲ್ಲಿ ಉಪದ್ರವ ಕೊಡುವುದು ಇಲ್ಲವೇ ಸಾವುನೋವು ಉಂಟುಮಾಡುತ್ತಿರುತ್ತವೆ. ಶವಹೊದಿಕೆಗಳನ್ನು ಹೊದೆಯುವ ಅವು ಊದಿಕೊಂಡಿರುತ್ತವೆ ಹಾಗೂ ಕೆಂಪು ಕಳೆಯ ಅಥವಾ ಗಾಢ ಮುಖಚರ್ಯೆಯನ್ನು ಹೊಂದಿರುತ್ತವೆ ಎಂದು ಹೇಳಲಾಗುತ್ತದೆ.
ಫ್ಲಿಕರ್ ಲೂಡಿ ಕಾರ್ಪ್ ರಿಂದ ಸೃಷ್ಟಿಸಲ್ಪಟ್ಟ ಆನ್ ಲೈನ್ ಸಾಮೂಹಿಕ ಒಡೆತನದ ಮತ್ತು ಮುಂದೆಯಾಹೂ ಅವರಿಂದ ಪಡೆದುಕೊಳ್ಳಲ್ಪಟ್ಟ ಹಾಗೂ ಒಂದು ಛಾಯಾಚಿತ್ರಗಳನ್ನು ಹಾಕಿಕೊಡುವ ಹಾಗೂ ವಿಡಿಯೊ ನಡೆಸುವ ಜಾಲತಾಣ, ಜಾಲ ಸೇವಾಸೌಲಭ್ಯಗಳ ಜೋಡಿಯಾಗಿದೆ. ಉಪಯೋಗದಾರರಿಗೆ ಹಂಚಿಕೊಳ್ಳಲು ಮತ್ತು ವೈಯಕ್ತಿಕವಾಗಿ ಛಾಯಾಚಿತ್ರಗಳನ್ನು ಹುದುಗಿಸಲು ಒಂದು ಜನಪ್ರಿಯ ಜಾಲತಾಣವಾಗುವುದು ಅಲ್ಲದೆ ಈ ಸೇವೆಯು ತಾವು ಬ್ಲಾಗರ್ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹುದುಗಿಸುವ ಕಲ್ಪನೆಗಳನ್ನು ನಡೆಸಿಕೊಡಲು ಬ್ಲಾಗರ್ಗಳಿಂದ ವ್ಯಾಪಕವವಾಗಿ ಉಪಯೋಗಿಸಲ್ಪಡುತ್ತದೆ. ಅದು ೫ ಬಿಲಿಯನ್ಗಿಂತಲೂ ಹೆಚ್ಚಿನ ಚಾಯಾಛಾಯಾಚಿತ್ರಗಳನ್ನು ನಡೆಸಿಕೊಡುತ್ತಿದೆಯೆಂದು, ಸೆಪ್ಟೆಂಬರ್ ೨೦೧೦ ರಲ್ಲಿ ಅದು ವರದಿ ಮಾಡಿತು.
ಫ್ರಾಂಕ್ಫರ್ಟ್ ಆಮ್ ಮೇನ್ German pronunciation: [ˈfʁaŋkfʊɐt am ˈmaɪn] ( )English: /ˈfræŋkfərt/ ಸಾಮಾನ್ಯವಾಗಿ ಫ್ರಾಂಕ್ಫರ್ಟ್ ಎಂದು ಸರಳವಾಗಿ ಹೆಸರಾಗಿದೆ. ಜರ್ಮನಿಯ ರಾಜ್ಯ ಹೆಸ್ನ ಅತೀ ದೊಡ್ಡ ನಗರವಾಗಿದ್ದು, ಜರ್ಮನಿಯ ಐದನೇ ಅತೀ ದೊಡ್ಡ ನಗರವಾಗಿದ್ದು, 2009ರಲ್ಲಿ 667 ,330 ಜನಸಂಖ್ಯೆ ಹೊಂದಿತ್ತು. ನಗರ ಪ್ರದೇಶವು 2010ರಲ್ಲಿ 2,295,000ಅಂದಾಜು ಜನಸಂಖ್ಯೆಯನ್ನು ಹೊಂದಿದೆ.
ಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)
ಓಝೋನ್ ಸವಕಳಿ ಯು ಎರಡು ಪ್ರತ್ಯೇಕ ಆದರೆ ಪರಸ್ಪರ ಸಂಬಂಧವಿರುವ ಹೇಳಿಕೆಗಳನ್ನು ವಿವರಿಸುತ್ತದೆ: ಓಝೋನ್ ಈ ಪೃಥ್ವಿಯ ಸಂರಕ್ಷಣಾ ಕವಚ. ವಿಷಾದದ ಸಂಗತಿಯೆಂದ್ರೆ ಇದು ಸದ್ಯ ಮಾನವ ನಿರ್ಮಿತ ತಪ್ಪುಗಳಿಂದಾಗಿ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ. ವಾಯು ಮಾಲಿನ್ಯ ಮತ್ತು ಪರಿಸರ ನಾಶದಿಂದಾಗಿ ರಕ್ಷಣಾ ಕವಚ ಕಳೆಗುಂದುತ್ತಿದೆ.
ರಂಗ್ ದೇ ಬಸಂತಿ ಯು ([1] [2], [3]; ಇಂಗ್ಲಿಷ್ ಭಾಷಾಂತರ: ಪೇಂಟ್ ಇಟ್ ಸ್ಯಾಫ್ರನ್ [5]) 2006ರಲ್ಲಿ ಬಂದ ಒಂದು ಭಾರತೀಯ ನಾಟಕೀಯ ಚಲನಚಿತ್ರವಾಗಿದ್ದು, ರಾಕೇಶ್ ಓಂಪ್ರಕಾಶ್ ಮೆಹ್ರಾ ಇದರ ಕಥೆಯನ್ನು ಬರೆದು, ನಿರ್ದೇಶಿಸಿದ್ದಾರೆ. ತಾರೆಯರ ಒಂದು ದೊಡ್ಡ ದಂಡೇ ಈ ಚಿತ್ರದಲ್ಲಿದ್ದು, ಅಮೀರ್ ಖಾನ್, ಸೋಹಾ ಆಲಿ ಖಾನ್, ಮಾಧವನ್, ಕುನಾಲ್ ಕಪೂರ್, ಸಿದ್ಧಾರ್ಥ್ ನಾರಾಯಣ್, ಶರ್ಮನ್ ಜೋಷಿ, ಅತುಲ್ ಕುಲಕರ್ಣಿ ಮತ್ತು ಬ್ರಿಟಿಷ್ ನಟಿ ಅಲೈಸ್ ಪ್ಯಾಟನ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ೨೫೦ ದಶಲಕ್ಷ ರೂ.ಗಳ (೫.೫ ದಶಲಕ್ಷ US$) ವೆಚ್ಚದಲ್ಲಿ ನಿರ್ಮಿಸಲಾದ ಈ ಚಿತ್ರದ ಚಿತ್ರೀಕರಣವನ್ನು ನವದೆಹಲಿ ಹಾಗೂ ಅದರ ಸುತ್ತಮುತ್ತ ನಡೆಸಲಾಯಿತು.
ವರ್ಣಕೋಶಗಳು ಉಭಯಚರಗಳು, ಮೀನುಗಳು, ಸರೀಸೃಪಗಳು, ವಲ್ಕವಂತಪ್ರಾಣಿಗಳು ಮತ್ತು ಶೀರ್ಷಪಾದಿಗಳಲ್ಲಿ ಕಂಡುಬರುವ ವರ್ಣದ್ರವ್ಯವನ್ನು ಹೊಂದಿರುವ ಮತ್ತು ಬೆಳಕನ್ನು-ಪ್ರತಿಫಲಿಸುವ ಜೀವಕೋಶಗಳಾಗಿವೆ. ಅವು ಶೀತ-ರಕ್ತದ ಪ್ರಾಣಿಗಳಲ್ಲಿ ಚರ್ಮ ಮತ್ತು ಕಣ್ಣಿನ ಬಣ್ಣವನ್ನು ಉಂಟುಮಾಡಲು ಕಾರಣವಾಗಿರುತ್ತವೆ ಹಾಗೂ ಅವು ಭ್ರೂಣದ ಬೆಳವಣಿಗೆಯ ಸಂದರ್ಭದಲ್ಲಿ ನರದ ತುದಿಯಲ್ಲಿ ಹುಟ್ಟುತ್ತವೆ. ಬಲಿತ ವರ್ಣಕೋಶಗಳನ್ನು ಬಿಳಿ ಬೆಳಕಿನಡಿಯಲ್ಲಿ ಅವುಗಳ ಬಣ್ಣದ (ಹೆಚ್ಚು ಕರಾರುವಾಕ್ಕಾಗಿ "ವರ್ಣ(ಹ್ಯೂ)") ಆಧಾರದಲ್ಲಿ ಉಪವರ್ಗಗಳಾಗಿ ವಿಂಗಡಿಸಲಾಗುತ್ತದೆ: ಕ್ಸಾಂತೊಫೋರ್ಗಳು (ಹಳದಿ), ಎರಿತ್ರೊಫೋರ್ಗಳು (ಕೆಂಪು), ಇರಿಡೊಫೋರ್ಗಳು (ಪ್ರತಿಫಲಿಸುವ / ವರ್ಣವೈವಿಧ್ಯದ), ಲ್ಯೂಕೊಫೋರ್ಗಳು (ಬಿಳಿ), ಮೆಲನೊಫೋರ್ಗಳು (ಕಪ್ಪು/ಕಂದು) ಮತ್ತು ಸೈಯನೊಫೋರ್ಗಳು (ನೀಲಿ).
ತಾತ್ವಿಕ ಚಳುವಳಿಯಾಗಿರುವ ವಾಸ್ತವಿಕವಾದ ವು ಆದರ್ಶ ಅಥವಾ ಅದರ ಒಂದು ಪ್ರತಿಪಾದನೆ ಸತ್ಯವಾಗಿದ್ದು, ಒಂದು ವೇಳೆ ತೃಪ್ತಿಕರವಾಗಿ ಕೆಲಸ ಮಾಡುತ್ತಿದ್ದಲ್ಲಿ ಅದರ ಪ್ರತಿಪಾದನೆಯ ಅರ್ಥವನ್ನು ಪ್ರಾಯೋಗಿಕ ಪರಿಣಾಮದಲ್ಲಿ ಕಂಡು ಅದನ್ನು ಸ್ವೀಕರಿಸುವಲ್ಲಿ ಕಾಣಬೇಕಾಗುತ್ತದೆ. ಮತ್ತು ಅವಾಸ್ತವಿಕ ಉಪಾಯಗಳನ್ನು ತಿರಸ್ಕರಿಸಬೇಕಾಗುತ್ತದೆ. ವಿಲಿಯಂ ಜೇಮ್ಸ್ ದೃಷ್ಟಿಯಲ್ಲಿ ವಾಸ್ತವಿಕತೆ ಎನ್ನುವುದು ಕಲ್ಪನೆಯೊಂದರ ಸತ್ಯಾಸತ್ಯತೆಯನ್ನು ಅದರ ಮಾನ್ಯತೆಗಾಗಿ ಪರೀಕ್ಷಿಸುವುದು ಆಗಿದೆ.
ವರ್ಣತಂತು ಎಂದರೆ ಜೀವಕೋಶಗಳಲ್ಲಿ ಕಂಡು ಬರುವ ಡಿಎನ್ಎ ಮತ್ತು ಪ್ರೊಟೀನುಗಳ ವ್ಯವಸ್ಥಿತ ರಚನೆಯಾಗಿದೆ. ಡಿಎನ್ಎ ಒಂದು ಸುರುಳಿಯಾಕಾರದ ಒಂದು ತುಂಡಾಗಿದ್ದು ಅದರಲ್ಲಿ ಬಹಳ ವಂಶವಾಹಿಗಳನ್ನು, ನಿಯಂತ್ರಕ ಅಂಶಗಳು ಮತ್ತು ನ್ಯುಕ್ಲಿಯೊಸೈಡ್ನ ಸರಣಿಗಳನ್ನು ಹೊಂದಿದೆ. ವರ್ಣತಂತುಗಳು ಡಿಎನ್ಎ-ಬಂಧದ ಪ್ರೊಟೀನುಗಳನ್ನೂ ಒಳಗೊಂಡಿರುತ್ತದೆ, ಅದು ಡಿಎನ್ಎಯನ್ನು ಒಟ್ಟಾಗಿರಿಸುತ್ತದೆ ಮತ್ತು ಅದರ ನಿಯಂತ್ರಕ ಕಾರ್ಯವಿಧಾನದಲ್ಲಿ ಕೆಲಸ ಮಾಡುತ್ತದೆ.
ಓಂ ಶಾಂತಿ ಓಂ (ಹಿಂದಿ:ओम शान्ति ओम), 2007ರಲ್ಲಿ ಬಂದ ಒಂದು ಬಾಲಿವುಡ್ ಚಲನಚಿತ್ರವಾಗಿದ್ದು, ಫರಾಹ್ ಖಾನ್ ಇದನ್ನು ನಿರ್ದೇಶಿಸಿ, ನೃತ್ಯ ಸಂಯೋಜಿಸಿದ್ದಾರೆ. ಇದರ ಮುಖ್ಯ ಪಾತ್ರಗಳಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಇದ್ದರೆ, ಶ್ರೇಯಸ್ ತಲ್ಪಾಡೆ, ಅರ್ಜುನ್ ರಾಂಪಾಲ್, ಮತ್ತು ಕಿರಣ್ ಖೇರ್ ಮೊದಲಾದವರು ಪೋಷಕ ಪಾತ್ರಗಳಲ್ಲಿದ್ದಾರೆ.ಅರ್ಜುನ್ ರಾಂಪಾಲ್ಗೆ ಈ ಚಲನಚಿತ್ರದಲ್ಲಿ ಪ್ರತಿನಾಯಕನ ಪಾತ್ರವಿದೆ.ಬಾಲಿವುಡ್ನ ನಲವತ್ತೆರಡಕ್ಕೂ ಹೆಚ್ಚಿನ ಜನಪ್ರಿಯ ತಾರೆಯರು ಈ ಚಲನಚಿತ್ರದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಅವರಲ್ಲಿ ಸುಮಾರು ಮೂವತ್ತು ಮಂದಿ (ಸದರಿ ಚಲನಚಿತ್ರದ ತಾರೆಗಳನ್ನು ಇದರಲ್ಲಿ ಸೇರಿಸಲಾಗಿಲ್ಲ) ಒಂದೇ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ.
ಟ್ರಬಲ್ಡ್ ಅಸೆಟ್ ರಿಲೀಫ್ ಪ್ರೋಗ್ರಾಮ್
ಟ್ರಬಲ್ಡ್ ಅಸೆಟ್ ರಿಲೀಫ್ ಪ್ರೋಗ್ರಾಮ್ ಎಂಬುದು ಸಾಮಾನ್ಯವಾಗಿ TARP ಎಂದು ಉಲ್ಲೇಖಿಸಲ್ಪಡುತ್ತದೆ. ಇದು ತನ್ನ ಹಣಕಾಸು ವಲಯವನ್ನು ಸದೃಢಗೊಳಿಸುವುದಕ್ಕಾಗಿ ಹಣಕಾಸು ಸಂಸ್ಥೆಗಳಿಂದ ಸ್ವತ್ತುಗಳು ಹಾಗೂ ಇಕ್ವಿಟಿಯನ್ನು ಖರೀದಿಸಲು ಇರುವ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸರ್ಕಾರದ ಒಂದು ಕಾರ್ಯಸೂಚಿವಾಗಿದೆ. ಉಪಪ್ರಧಾನ ಅಡಮಾನ ಬಿಕ್ಕಟ್ಟನ್ನು ಎದುರಿಸಲು 2008ರಲ್ಲಿ ಕೈಗೊಳ್ಳಲಾದ ಸರ್ಕಾರದ ಕ್ರಮಗಳ ಪೈಕಿ ಇದು ಅತ್ಯಂತ ದೊಡ್ಡ ಅಂಶವಾಗಿದೆ.
ಐದು ದೊಡ್ಡ ವ್ಯಕ್ತಿತ್ವದ ಸ್ವಭಾವಗಳು
ಸಮಕಾಲೀನ ಮನಶಾಸ್ತ್ರದಲ್ಲಿ ಮಾನವ ವ್ಯಕ್ತಿತ್ವವನ್ನು ವರ್ಣಿಸಲು ಬಳಸಲಾಗುವ ಐದು ದೊಡ್ಡ ಗುಣಾಂಶಗಳು ವ್ಯಕ್ತಿತ್ವದ ಐದು ಆಯಾಮಗಳಾಗಿವೆ. ಈ ಐದು ಗುಣಾಂಶಗಳೆಂದರೆ ಮುಕ್ತತೆ, ಮನಸ್ಸಾಕ್ಷಿ, ಬಹಿರ್ಮುಖತೆ, ಒಪ್ಪಿಕೊಳ್ಳುವಿಕೆ, ಮತ್ತು ನ್ಯೂರೋಟಿಸಿಸಂ (OCEAN, ಅಥವಾ ಮರುಜೋಡಣೆ ಮಾಡಿದಲ್ಲಿ CANOE). ಸಮಚಿತ್ತತೆಯ ಗುಣಾಂಶವನ್ನು ಕೆಲವು ಸಲ ಭಾವನಾತ್ಮಕ ಸಧೃಢತೆ ಎಂದು ಹೇಳಲಾಗುತ್ತದೆ.
ಕ್ರಿಕೆಟ್ ಎಂಬುದು ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಯು ಸಮುದ್ರದಾಚೆಗಿನ ದೇಶಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು.ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಆಟದ ನಿಯಮಾವಳಿಗಳು ಕ್ರಿಕೆಟ್ನ ಕಾನೂನುಗಳು ಎಂದು ಪರಿಚಿತವಾಗಿವೆ.
ವಿಂಚೆಸ್ಟರ್ (ಪ್ರಾಚೀನವಾಗಿ ವಿನ್ ಟನ್ ಮತ್ತು ವಿನ್ ಟನ್ ಸಿಯಸ್ಟ್ರೆ ಎಂದು ಕರೆಯಲಾಗುತ್ತಿತ್ತು), ಎಂಬುದು ಐತಿಹಾಸಿಕ ಪ್ರಧಾನ ಇಗರ್ಜಿಗಳ, ಕ್ಯಾಥಡ್ರಲ್ ನಗರವಾಗಿದ್ದು, ವೆಸೆಕ್ಸ್ ಮತ್ತು ಇಂಗ್ಲೆಂಡ್ ರಾಜ್ಯದ ಪ್ರಾಚೀನ ರಾಜಧಾನಿಯಾಗಿತ್ತು. ಇದು ಆಗ್ನೇಯ ಇಂಗ್ಲೆಂಡ್ ನಲ್ಲಿರುವ ಹ್ಯಾಂಪ್ಶೈರ್ ಕೌಂಟಿಯ ರಾಜಧಾನಿ ಯಾಗಿದೆ. ಈ ನಗರದ ವೈಶಾಲ್ಯತೆ ವಿಂಚೆಸ್ಟರ್ ನಗರದ ಹೃದಯ ಭಾಗದಲ್ಲಿ ನೆಲೆಸಿದೆ.
ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ
ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯು ವಾರ್ಷಿಕವಾಗಿ ರಸಾಯನಶಾಸ್ತ್ರದಲ್ಲಿ ಸಾಧನೆಗಳಿಗೆ ರಾಯಲ್ ಸ್ವೀಡಿಷ್ ಅಕ್ಯಾಡಮಿ ಆಫ್ ಸೈನ್ಸಸ್ ನೀಡುವ ಒಂದು ಪ್ರಶಸ್ತಿ. ಆಲ್ಫ್ರೆಡ್ ನೊಬೆಲ್ ಅವರು ೧೮೯೫ರಲ್ಲಿ ತಮ್ಮ ಉಯಿಲಿನ ಮೂಲಕ ಸ್ಥಾಪಿಸಿದ ೫ ನೊಬೆಲ್ ಪ್ರಶಸ್ತಿಗಳಲ್ಲಿ ಇದೂ ಒಂದು.
ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೮ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ.
ಫ್ಲೆಕ್ಸಿಬಲ್ (ಬಾಗಿಸಬಲ್ಲ) ಕೀಬೋರ್ಡ್
ಕೀಬೋರ್ಡ್ ಎಂದರೆ ಗಣಕೀಕರಣದಲ್ಲಿ ಯಾಂತ್ರಿಕಪಟ್ಟಿಯಂತೆ ಅಥವಾ ವಿದ್ಯುಚ್ಚಾಲಿತ ಸ್ವಿಚ್ಚಿನಂತೆ ವರ್ತಿಸುವ ಗುಂಡಿಗಳ ಅಥವಾ ಕೀಲಿಗಳ ಜೋಡಣೆಯನ್ನು ಹೊಂದಿರುವ ಬೆರಳಚ್ಚು ಯಂತ್ರದ ಕೀಬೋರ್ಡ್ ಆಗಿದೆ. ಪೇಪರ್ ಟೇಪ್ ಮತ್ತು ಪಂಚ್ ಕಾರ್ಡ್ಗಳ ಬಳಕೆಯು ಇಳಿಮುಖವಾಗುವುದರೊಂದಿಗೆ, ಟೆಲಿಟೈಪ್ ಮಾದರಿಯ ಕೀಬೋರ್ಡ್ಗಳ ಮೂಲಕ ಗಣಕಯಂತ್ರವನ್ನು ಸಂಪರ್ಕಿಸುವ ವಿಧಾನ ಮುಂದುವರೆದು ಗಣಕಯಂತ್ರಗಳಲ್ಲಿ ಇದೊಂದು ಮುಖ್ಯ ಇನ್ಪುಟ್ ಸಾಧನವಾಗಿ ಬೆಳೆದುಬಂದಿದೆ.
ಫುಡ್ ನೆಟ್ವರ್ಕ್ ಎಂಬುದು ದೂರದರ್ಶನದ ಒಂದು ವಿಶೇಷ ವಾಹಿನಿಯಾಗಿದ್ದು, ಇದು ಆಹಾರ ಹಾಗು ಆಹಾರ ತಯಾರಿಕೆಯ ಬಗ್ಗೆ ಒಂದೇ ಬಾರಿ ಹಾಗು ಪುನರಾವರ್ತಿತವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಸ್ಕ್ರಿಪ್ಪ್ಸ್ ನೆಟ್ವರ್ಕ್ಸ್ ಇನ್ಟರಾಕ್ಟಿವ್, ನೆಟ್ವರ್ಕ್ ನ ಶೇಖಡಾ ೭೦ರಷ್ಟು ಪಾಲನ್ನು ಹೊಂದಿದೆ, ಹಾಗು ಉಳಿದ ಭಾಗವು ಟ್ರಿಬ್ಯೂನ್ ಕಂಪನಿಯ ಒಡೆತನದಲ್ಲಿದೆ. ಈ ಪ್ರಸಾರ ಕೇಂದ್ರದಿಂದ ಬಿತ್ತರವಾಗುವ ಕಾರ್ಯಕ್ರಮಗಳನ್ನು ಒಂಬತ್ತು ದಶಲಕ್ಷಕ್ಕೂ ಅಧಿಕ ಮನೆಗಳಲ್ಲಿ ವೀಕ್ಷಿಸಲಾಗುತ್ತದೆ.
ಫಿರೋಜ್ ಖಾನ್ (ಹಿಂದಿ: फ़िरोज़ ख़ान, ಉರ್ದು: فیروزخا ಸೆಪ್ಟೆಂಬರ್ ೨೫, ೧೯೩೯ – ೨೭ ಏಪ್ರಿಲ್ ೨೦೦೯) ಭಾರತೀಯ ಹಿಂದಿ ಚಿತ್ರರಂಗ ಉದ್ಯಮದ ನಟ, ಚಿತ್ರ ಸಂಕಲನಕಾರ, ನಿರ್ಮಾಪಕ ಹಾಗು ನಿರ್ದೇಶಕ.ಅವರ ಆಡಂಬರದ ಶೈಲಿ, ಕೌಬಾಯ್ ಇಮೇಜು,ತುಟಿಗಳ ನಡುವೆ ಸದಾಕಾಲ ಉರಿಯುವ ಸಿಗರೇಟು ಹೀಗೆ ಫಿರೋಜ್ ಅವರ ಸ್ಟೈಲು ಇನ್ನಿತರ ಬಾಲಿವುಡ್ ನಟರ ಸಾಂಪ್ರದಾಯಿಕ ಶೈಲಿಯನ್ನೇ ಬದಲಿಸುವಂತೆ ಮಾಡಿತ್ತು. ಇವರನ್ನು ಪೂರ್ವದ ಕ್ಲಿಂಟ್ ಈಸ್ಟ್ ವುಡ್ ಎಂದು ಕರೆಯಲಾಗುತ್ತದೆ ಜೊತೆಗೆ ಇವರು ಚಿತ್ರರಂಗ ಉದ್ಯಮದ ಮಾದರಿಗೆ ಪ್ರತಿಬಿಂಬವಾಗಿದ್ದಾರೆ. ಇವರು ೧೯೬೦, ೧೯೭೦ ಹಾಗು ೧೯೮೦ರ ದಶಕಗಳಲ್ಲಿ ೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವಾಲ್ ಸ್ಟ್ರೀಟ್ ಎಂಬುದು ನ್ಯೂಯಾರ್ಕ್, USA ನ್ಯೂಯಾರ್ಕ್ ನಗರದ ದಕ್ಷಿಣ ಮ್ಯಾನ್ ಹಟ್ಟನ್ ನಲ್ಲಿರುವ ರಸ್ತೆ(ಸ್ಟ್ರೀಟ್)ಯಾಗಿದೆ.(ಬೀದಿ) ಇದು ಪೂರ್ವಭಾಗದ ನದಿಯ ಮೇಲೆ ಪೂರ್ವದಲ್ಲಿಯೇ ಬ್ರಾಡ್ ವೇ ರಸ್ತೆಯಿಂದ ದಕ್ಷಿಣದ ರಸ್ತೆಯವರೆಗೆ ಹಾದು ಹೋಗಿದೆ.ಆರ್ಥಿಕ ಜಿಲ್ಲೆಯ ಐತಿಹಾಸಿಕ ಕೇಂದ್ರವೂ ಆಗಿದೆ. ಇದು ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ ನ ಕಾಯಂ ನಿವಾಸಗಳಲ್ಲಿ ಮೊದಲನೆಯದಾಗಿದೆ; ಅನೇಕ ವರ್ಷಗಳ ನಂತರ ವಾಲ್ ಸ್ಟ್ರೀಟ್ , ತನ್ನನ್ನು ಸುತ್ತುವರೆದಿದ್ದ ಸುತ್ತಮುತ್ತಲಿನ ಭೌಗೋಳಿಕ ತಾಣಗಳಿಗೆ ಹೆಸರು ತಂದಿತು. ನ್ಯೂಯಾರ್ಕ್ ನಗರ ಪ್ರದೇಶದಲ್ಲಿರುವಂತಹ ವಾಲ್ ಸ್ಟ್ರೀಟ್ ಅಮೇರಿಕಾದ ಹಣಕಾಸಿನ ಉದ್ದಿಮೆಗಳ "ಪ್ರಭಾವಶಾಲಿ ಹಣಕಾಸಿನ ಆಸಕ್ತಿ" ಯಿಂದಾಗಿ ಸಂಕ್ಷಿಪ್ತಗೊಳಿಸಲ್ಪಟ್ಟಿದೆ(ಅಥವಾ ಲಾಕ್ಷಣಿಕ ಶಬ್ದ).
ಫರಾನ್ ಅಖ್ತರ್ (ಹಿಂದಿ:फ़रहान अख़्तर; 1974 ರ ಜನವರಿ 9 ರಂದು ಜನನ), ಭಾರತೀಯ ಚಲನಚಿತ್ರ ತಯಾರಕರು , ಚಿತ್ರಕತೆಗಾರ, ನಟ, ಹಿನ್ನೆಲೆ ಗಾಯಕ, ಗೀತಕಾರ, ಚಲನಚಿತ್ರ ನಿರ್ಮಾಪಕ, ಮತ್ತು ದೂರದರ್ಶನದ ಆತಿಥೇಯ ನಿರೂಪಕರಾಗಿದ್ದಾರೆ. ಇವರು ಪ್ರಧಾನವಾಗಿ ಹಿಂದಿ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಇವರು ನಿರ್ದೇಶಿಸಿದ ಮೊದಲ ಚಿತ್ರ ದಿಲ್ ಚಾಹತಾ ಹೈ ಯನ್ನು ಎಲ್ಲೆಡೆ ಪ್ರಶಂಸಿಸಲಾಯಿತು.
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಸಲ್ಪಡುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ. ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ.
ಪಾಸರ್ ಮೊಂಟಾನಸ್ ಎಂಬುದು ಒಂದು ಜಾತಿಯ ಯುರೇಶಿಯನ್ ಟ್ರೀ ಸ್ಪ್ಯಾರೋ ಮರದಲ್ಲಿ ವಾಸಿಸುವ ಗುಬ್ಬಚ್ಚಿಯಾಗಿದ್ದು, ಇದು ಗುಬ್ಬಚ್ಚಿ ಸಮೂಹ ದಲ್ಲಿ ಸೇರ್ಪಡೆಯಾಗಿದೆಯಲ್ಲದೇ, ಇದರ ತಲೆಯ ಬಣ್ಣ ಮತ್ತು ಕುತ್ತಿಗೆಯ ಹಿಂಭಾಗ ಕಡು ಕಂದು ಬಣ್ಣದಿಂದ ಕೂಡಿದೆ ಹಾಗೆಯೇ, ಅದರ ಪ್ರತಿಯಾದ ಪರಿಶುದ್ಧವಾದ ಬಿಳಿ ಕದಪುಗಳಲ್ಲಿ ಕಪ್ಪು ಬಣ್ಣದ ಮಚ್ಚೆಗಳಿವೆ. ಗಂಡು ಮತ್ತು ಹೆಣ್ಣು ಜಾತಿಯ ಎರಡೂ ಹಕ್ಕಿಗಳು ಏಕರೀತಿಯ ಗರಿಪುಕ್ಕಗಳನ್ನು ಹೊಂದಿದ್ದು, ಯುವಹಕ್ಕಿಗಳು ವಯಸ್ಕ ಹಕ್ಕಿಗಳಿಗಿಂತ ಮಂಕಾಗಿರುತ್ತವೆ. ಈ ಗುಬ್ಬಚ್ಚಿ ತಳಿಗಳು ಹೆಚ್ಚಾಗಿ ಸಮಶೀತೋಷ್ಣವಲಯದ ಯುರೇಶಿಯಾ ಮತ್ತು ಏಷ್ಯಾದ ಆಗ್ನೇಯಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತವೆ, ಹಾಗೆಯೇ ಇವುಗಳನ್ನು ಟ್ರೀ ಸ್ಪ್ಯಾರೋ ಎಂದು ಕರೆಯಲಾಗುತ್ತದೆ.
ಐರೋಪ್ಯ ಆದರ್ಶಗಳು, ವಿಶೇಷವಾಗಿ ಬ್ರಿಟಿಷ್ರದ್ದು ; ಹಾಗೂ ಸ್ಥಳೀಯ ಮೂಲಭೂತತೆಗಳ ಎರಡು ಪ್ರಬಲ ಪ್ರೇರಣೆಗಳ ನಡುವಿನ ತುಯ್ತವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಸಂಸ್ಕೃತಿ ಯ ಬೆಳವಣಿಗೆಯನ್ನು ವ್ಯಕ್ತಪಡಿಸುತ್ತದೆ. ಅಮೇರಿಕನ್ ಸಂಸ್ಕೃತಿ ಬ್ರಿಟಿಷ್ ದ್ವೀಪಗಳಿಂದಾದ ವಲಸೆಗಳು ಹಾಗೂ ವಸಾಹತೀಕರಣಗಳ ಮೂಲಕ ಆಮದಾದ ಮತ್ತು ಸ್ಥಳೀಯವಾಗಿ ಬೆಳೆದುಬಂದ ಸಂಪ್ರದಾಯಗಳು, ಆದರ್ಶಗಳು, ಪದ್ಧತಿಗಳು, ನಂಬಿಕೆಗಳು, ಮೌಲ್ಯಗಳು, ಕಲೆ ಹಾಗೂ ನವನಿರ್ಮಿತಿಗಳನ್ನು ಹೊಂದಿದೆ. ಪ್ರಮುಖ ರಾಷ್ಟ್ರೀಯ ರಜಾದಿನಗಳು, ಅಪೂರ್ವವಾದ ಅಮೇರಿಕನ್ ಕ್ರೀಡೆಗಳು, ಹೆಮ್ಮೆಯ ಸೇನಾ ಸಂಪ್ರದಾಯ, ಹಾಗೂ ಕಲೆ ಹಾಗೂ ಮನರಂಜನೆಗಳಲ್ಲಿನ ನಾವೀನ್ಯತೆಗಳಂತಹಾ ಸ್ಥಳೀಯವಾಗಿ ವಿಕಸನಗೊಂಡ ಪ್ರಚಲಿತ ಕಲ್ಪನೆಗಳು ಹಾಗೂ ಆದರ್ಶಗಳು ಒಟ್ಟಾರೆಯಾಗಿ ಜನತೆಯಲ್ಲಿ ರಾಷ್ಟ್ರೀಯ ಹೆಮ್ಮೆಯ ಪ್ರಬಲ ಪ್ರಜ್ಞೆಯನ್ನು ಮೂಡಿಸುತ್ತವೆ.
ಫ್ಯುಜಿಟಾ ಮಾಪಕ (ಎಫ್-ಸ್ಕೇಲ್ ) ಅಥವಾ ಫ್ಯುಜಿಟಾ-ಪಿಯರ್ಸನ್ ಮಾಪಕ ವು ಟೊರ್ನೆಡೋ (ಸುಂಟರಗಾಳಿ) ತೀವ್ರತೆಯನ್ನು ಅಳೆಯುವ ಒಂದು ಮಾಪಕವಾಗಿದೆ. ಇದರಲ್ಲಿ ಟೊರ್ನೆಡೋ (ಸುಂಟರಗಾಳಿ)ಗಳಿಂದ ಮಾನವ ನಿರ್ಮಿತ ರಚನೆಗಳಿಗೆ ಮತ್ತು ಸಸ್ಯಸಂಪತ್ತಿಗೆ ಎಷ್ಟು ಹಾನಿಯಾಗಿದೆ ಎಂಬುದನ್ನು ಮುಖ್ಯವಾಗಿ ಆಧರಿಸಿ, ಅಳೆಯಲಾಗುತ್ತದೆ. ಅಧಿಕೃತ ಫ್ಯುಜಿಟಾ ಮಾಪಕ ವರ್ಗೀಕರಣವನ್ನು ಹವಾಮಾನತಜ್ಞರು (ಮತ್ತು ಇಂಜಿನಿಯರ್ಗಳು) ಭೂಮಿ ಮೇಲೆ ಮತ್ತು/ಅಥವಾ ವೈಮಾನಿಕವಾಗಿ ಹಾನಿಯ ಸಮೀಕ್ಷೆಯನ್ನು ಮಾಡಿದ ನಂತರ ನಿರ್ಣಯಿಸುತ್ತಾರೆ.
ಶ್ರೀ ಕನಕದಾಸರು[ತಿಮ್ಮಪ್ಪನಾಯಕ] (1487-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಉನ್ನತ ಕಾರ್ಯಸಾಮರ್ಥ್ಯದ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ
ಉನ್ನತ ಕಾರ್ಯಸಾಮರ್ಥ್ಯದ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ ಯ ಅಥವಾ (ಹೈ ಪ್ರೆಷರ್ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ HPLC )ಯು ಲಂಬಸಾಲು ಕ್ರೊಮ್ಯಾಟೋಗ್ರಫಿಯ ರೂಪದಲ್ಲಿ ಇದ್ದು, ಇದನ್ನು ಸಾಧಾರಣವಾಗಿ ಜೀವರಸಾಯನ ಶಾಸ್ತ್ರ ಮತ್ತು ವಿಶ್ಲೇಷಣಾ ರಸಾಯನ ಶಾಸ್ತ್ರದಲ್ಲಿ ಸಂಯುಕ್ತಗಳನ್ನು ಅವುಗಳ ಇಡಿಯೊಸಿಂಕ್ರಾಟಿಕ್ ಪೊಲಾರಿಟಿಸ್ ಮತ್ತು ಪರಸ್ಪರ ಕ್ರಿಯೆಯ ಆಧಾರದ ಮೇಲೆ ಲಂಬಸಾಲುಗಳ ಸ್ಥಾಯಿ ಹಂತದೊಂದಿಗೆ ಬೇರ್ಪಡಿಸಲು, ಗುರುತಿಸಲು ಮತ್ತು ಪ್ರಮಾಣಿಕರಣಗೊಳಿಸಲು ಉಪಯೋಗಿಸಲಾಗುತ್ತದೆ. HPLC ಯು (ಹೈಡ್ರೊಫೊಬಿಕ್ ಸ್ಯಾಚುರೇಟೆಡ್ ಕಾರ್ಬನ್ ಚೈನ್ ಮಾದರಿಯಂತಹ) ವಿವಿಧ ಮಾದರಿಯ ಸ್ಥಾಯಿ ಹಂತಗಳನ್ನು ಉಪಯೋಗಿಸಿಕೊಳ್ಳುತ್ತದೆ. ಅವುಗಳಲ್ಲಿ ಲಂಬಸಾಲು ಮುಖಾಂತರ ಮೊಬೈಲ್ ಹಂತ(ಗಳ)ವನ್ನು ಮತ್ತು ಅನಲೈಟ್ ಅನ್ನು ಚಲಿಸುವಂತೆ ಮಾಡುವ ಪಂಪ್, ಮತ್ತು ಆನಲೈಟ್ಗೆ ಧಾರಣಶಕ್ತಿಯ ಸಮಯನ್ನು ಪೂರೈಸುವ ಡಿಟೆಕ್ಟರ್ ಅನ್ನು ಉಪಯೋಗಿಸುತ್ತದೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.