The most-visited English Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಭಾರತದ ಚುನಾವಣಾ ಆಯೋಗವು ಭಾರತದಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದೆ. ದೇಶದ ಸ್ಥಳೀಯ ಸಂಸ್ಥೆ ಸೇರಿದಂತೆ ಲೋಕಸಭೆ, ರಾಜ್ಯಸಭೆಗೆ, ರಾಜ್ಯದಲ್ಲಿ ರಾಜ್ಯ ವಿಧಾನಸಭೆಗಳಿಗೆ ಮತ್ತು ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರ ಕಚೇರಿಗಳಿಗೆ ಚುನಾವಣಾ ಪ್ರಕ್ರಿಯೆ ನಡೆಸುತ್ತದೆ.ಚುನಾವಣಾ ಆಯೋಗವು ಆರ್ಟಿಕಲ್ 324 ರ ಪ್ರಕಾರ ಸಂವಿಧಾನದ ಅಧಿಕಾರದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ತರುವಾಯ ಪೀಪಲ್ಸ್ ಕಾಯ್ದೆಯ ಪ್ರಾತಿನಿಧ್ಯವನ್ನು ಜಾರಿಗೊಳಿಸಿತು. ಆಯೋಗವು ಸಂವಿಧಾನದ ಅಡಿಯಲ್ಲಿ ಸನ್ನಿವೇಶವನ್ನು ನಿಭಾಯಿಸಲು ಕೆಲವು ಅಧಿಕಾರವನ್ನು ಹೊಂದಿದೆ.
೨೦೨೬ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ
ಪಶ್ಚಿಮ ಬಂಗಾಳ ವಿಧಾನಸಭೆಯ ಎಲ್ಲಾ 294 ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆಗಳು ನಡೆದವು. ಒಟ್ಟು ಎರಡು ಹಂತಗಳಲ್ಲಿ- ಅಂದರೆ ಏಪ್ರಿಲ್ 23 ಮತ್ತು 29, 2026 ರಂದು ಮತದಾನ ನಡೆಯಿತು. ಇವುಗಳಲ್ಲಿ 293 ಸ್ಥಾನಗಳ ಮತ ಎಣಿಕೆ ನಡೆದು ಫಲಿತಾಂಶವನ್ನು ಮೇ 4, 2026 ರಂದು ಬಿಡುಗಡೆ ಮಾಡಲಾಯಿತು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಮತ್ತು ಹೇಮಾವತಿ ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು.
ರಾ.ಹ.ದೇಶಪಾಂಡೆ ಯವರಿಂದ ಸ್ಥಾಪಿತವಾದ ಕರ್ನಾಟಕ ವಿದ್ಯಾವರ್ಧಕ ಸಂಘ ನಾಡು ನುಡಿಗಳ ಸೇವೆಯನ್ನೇ ಉದ್ದೇಶವಾಗಿಟ್ಟುಕೊಂಡು ಧಾರವಾಡದಲ್ಲಿ ೧೮೯೦ರ ಜುಲೈ ೨೦ರಂದು ಪ್ರಾರಂಭವಾದ ಒಂದು ಮುಖ್ಯ ಸಂಸ್ಥೆ. ಅಖಿಲ ಕರ್ನಾಟಕದ ವ್ಯಾಪ್ತಿಯನ್ನುಳ್ಳ ಸಂಸ್ಥೆಗಳಲ್ಲಿ ಮೊಟ್ಟ ಮೊದಲಿನದೆನಿಸಿದ ಈ ಸಾಂಸ್ಕೃತಿಕ ಸಂಸ್ಥೆಯ ಪ್ರಥಮ ಅಧ್ಯಕ್ಷ ಶಾಮರಾವ್ ಕೈಕಿಣಿ, ಪ್ರಥಮ ಕಾರ್ಯದರ್ಶಿ ರಾ.ಹ.ದೇಶಪಾಂಡೆ ಮುಂಬಯಿ, ಮದ್ರಾಸ್, ಪೂನಾ, ಅಹಮ್ಮದನಗರ, ಹೈದ್ರಾಬಾದ್, ಕಾರವಾರ, ಮಂಗಳೂರು, ಮೈಸೂರು,ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಮಡಿಕೇರಿ ಇತ್ಯಾದಿ ಕರ್ನಾಟಕದ ಒಳ ಹೊರಗಿನ ಪಟ್ಟಣಗಳ ಕನ್ನಡಿಗರು. ಕನ್ನಡಾಭಿಮಾನಿಗಳು ಇದರ ಆಜೀವ ಸದಸ್ಯರಾಗಿ ಅಂದಿಗೆ ಈ ಸಂಸ್ಥೆಯನ್ನು ಇಡೀ ಕರ್ನಾಟಕದ ಪ್ರಾತಿನಿಧಿಕ ಸಂಸ್ಥೆಯನ್ನಾಗಿ ಮಾಡಿದರು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ನುಡಿಗಟ್ಟು ಒಂದು ಭಾಷೆಯನ್ನಾಡುವ ಜನ ತಮ್ಮ ನಿತ್ಯೋಪಯೋಗದಲ್ಲಿ ಹಿಂದೆ ತಾವು ಹೇಳಿರದ, ಇನ್ನೊಬ್ಬ ಹೇಳಿದುದನ್ನು ಕೇಳಿರದ ಎಷ್ಟೋ ಹೊಸ ಮಾತುಗಳನ್ನು ಪ್ರಯೋಗಿಸಲು ಶಕ್ತರು. ಆದರೂ, ಆ ಮಾತುಗಳು ಕೇಳುವವನಿಗೆ ಅರ್ಥವಾಗುತ್ತದೆ. ಆ ಮಾತಿನ ಸಂದರ್ಭ ಮತ್ತು ಆ ಭಾಷೆಯ ಮೂಲಭೂತವಾದ ಕೆಲವು ಸಾಮಾನ್ಯ ನಿಯಮ, ಇದರ ಮೂಲಕ ಮಾತಾಡುವವನಿಗೂ ಕೇಳುವವನಿಗೂ ಇರುವ ಅನುಭವ ಸಾಮ್ಯದಿಂದ-ಹಿಂದೆ ಹೇಳದ, ಕೇಳದ ಮಾತುಗಳ ಅರ್ಥ ವೇದ್ಯವಾಗುತ್ತದೆ.
ಅಪ್ಪನ್ ಸಮಾಚಾರ (ಹಿಂದಿಃ ಅಪ್ಪನ್ ಸಮಾಚಾರ) ಒಂದು ಸಂಪೂರ್ಣ ಮಹಿಳಾ ಗ್ರಾಮ ಸುದ್ದಿ ಜಾಲವಾಗಿದೆ. ಇದು ಬಿಹಾರ ಮುಜಾಫರ್ಪುರ ಜಿಲ್ಲೆಯ ಅಂಚಿನಲ್ಲಿರುವ ದಲಿತರು, ಇತರ ಹಿಂದುಳಿದ ವರ್ಗಗಳು, ಮುಶಹರ್ (ಇಲಿಗಳನ್ನು ತಿನ್ನುವ ಸಮುದಾಯ) ಮತ್ತು ಮುಸ್ಲಿಂ ಸಮುದಾಯಗಳ ಮಹಿಳೆಯರ ಗುಂಪು ನಡೆಸುತ್ತಿರುವ ಗ್ರಾಮೀಣ ಸುದ್ದಿ ವಾಹಿನಿಯಾಗಿದೆ. ಇದನ್ನು ೨೦೦೭ರ ಡಿಸೆಂಬರ್ ೬ದು ಮುಜಾಫರ್ಪುರದಲ್ಲಿ ಪ್ರಾರಂಭಿಸಲಾಯಿತು.
ಆಲಿ ಬಾಬಾ ೪೦ ಡೊಂಗಲು (ತೆಲುಗು ಚಲನಚಿತ್ರ)
ಅಲಿ ಬಾಬಾ 40 ಡೊಂಗಲು ( ಅನುವಾದ. "Ali Baba and the 40 Thieves" ) ೧೯೭೦ ರ ತೆಲುಗು ಭಾಷೆಯ ಕಾಲ್ಪನಿಕ ಪ್ರಣಯ ಸಾಹಸಮಯ ಚಲನಚಿತ್ರವಾಗಿದ್ದು, ಇದನ್ನು ಬಿ. ವಿಟ್ಟಲಾಚಾರ್ಯ ನಿರ್ದೇಶಿಸಿದ್ದಾರೆ. ಇದರಲ್ಲಿ ಎನ್ಟಿ ರಾಮರಾವ್ ಮತ್ತು ಜಯಲಲಿತಾ ನಟಿಸಿದ್ದು, ಘಂಟಸಾಲ ಸಂಗೀತ ಸಂಯೋಜಿಸಿದ್ದಾರೆ.
ಮಲೆಕುಡಿ ಜನಾಂಗದ ಸಾಮಜಿಕ,ಆರ್ಥಿಕ, ರಾಜಕೀಯ,ಶೈಕ್ಷಣಿಕ ಮತ್ತು ಆರೋಗ್ಯದ ಸ್ಥಿತಿಗತಿಯ ಅಧ್ಯಯನ ವರದಿ ಮಲೆಕುಡಿ ಬುಡಕಟ್ಟು ಜನಾಂಗ: ಥಳಥಳಿಸುವ ಹಸಿರು,ಸೂತ್ತಲೂ ಹಬ್ಬಿದ ನೀಲರಾಶಿ,ದೂರದಲ್ಲೆಲ್ಲೋ ಧುಮುಕುವ ನೀರು, ಅಗಾಧ ಹಸಿರಿನ ಗರ್ಭದಲ್ಲಿ ಅಲ್ಲೊಂದು ಇಲ್ಲೊಂದು ಕಡೆ ಅಡಗಿ ಕುಳಿತ ಮಲೆಕುಡಿಯರ ಸುಂದರ ಗುಡಿಸಲ ತಾಣಗಳು.ಅವುಗಳನ್ನು ಸುತ್ತುವರೆದ ತೆಂಗು,ಏಲಕ್ಕಿ,ಮೆಣಸು ಮುಂತಾದ ಬಳ್ಳಿಗಳ, ಬನದ ಸಿರಿ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ,ಸುಳ್ಯ,ಬಂಟ್ವಾಳ ಮತ್ತು ಪುತ್ತೂರು ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ದುರ್ಗಮ ಪ್ರದೇಶದ ಕಣಿವೆ ಕಂದರಗಳಲ್ಲಿ ನೆಲೆ ಕಂಡುಕೊಂಡಿರುª ಮಲೆಕುಡಿ ಜನಾಂಗದ ಕರ್ನಾಟಕದ ಅತ್ಯಂತ ಮೂಲನಿವಾಸಿಗಳಲ್ಲಿ ಒಂದು ಶಿರಾಡಿ ಮತ್ತು ಚಾರ್ಮುಡಿ ಘಟಗಳ ನಡುವಿನ ಅಭೇದಿತ ಹೆಗ್ಗಾಡಿ ನಡುವೆ ಗುರುತಿಸಿಕೊಂಡಿರುವ ಇಳಿಮಲೆ,ಬಾಂಜಾರು ಮಲೆ ಹಾಗೂ ಅಂಬಾಟಿಮಲೆ ಪರ್ವತ ಪ್ರದೇಶಗಳು ಮಲೆಕುಡಿಯರ ಪ್ರಿಯವಾದ ತಾಣ, ಧರ್ಮಸ್ಥಳ,ಉಜಿರೆ,ನೆರಿಯ,ಶಿಶಿಲ,ಮುಂಡಾಜೆ,ಕಿಳಿಂಜೆ,ಹಾಲಂಗಾಯಿ,ಇವೇ ಇವರ ಪ್ರಮುಖ ವ್ಯವಹಾರದ ಸ್ಥಳಗಳು.ಇವುಗಳಲ್ಲಿ ಧರ್ಮಸ್ಥಳ ಮತ್ತು ಉಜಿರೆ ಕೆಲವು ಮಲೆಕುಡಿಯರ ಪಾಲಿಗೆ ಮಹಾನಗರಗಳು ಅಲ್ಲಿಂದಾಚಗೆ ಪ್ರಪಂಚ ನೋಡದವರೇ ಹೆಚ್ಚು... ಮೇಲಿನಂಥ ಅರಣ್ಯ ಸಮೃದ್ಧಿಯಲ್ಲಿ ಮಲೆಕುಡಿಯರು ಬದುಕಿದ್ದರೂ ಅವರು ನಿಜವಾಗಿ ಸುಖಿಗಳಾಗಿಯೇ ಬದುಕುತಿಲ್ಲ. ಎಲ್ಲ ಬುಡಕಟ್ಟು ಜನಾಂಗಗಳಂತೆ ಇವರು ಆನೇಕ ಸೌಲಭ್ಯಗಳಿಂದ ವಂಚಿತರಾಗಿಯೇ ಬಡವರಾಗಿಯೇ ಬದುಕುತ್ತಿದ್ದಾರೆ.
ಹರ್ಷದ್ ಶಾಂತಿಲಾಲ್ ಮೆಹ್ತಾ (೨೯ ಜುಲೈ ೧೯೫೪ - ೩೧ ಡಿಸೆಂಬರ್ ೨೦೦೧) ಒಬ್ಬ ಭಾರತೀಯ ಸ್ಟಾಕ್ ಬ್ರೋಕರ್ ಮತ್ತು ಶಿಕ್ಷೆಗೊಳಗಾದ ವಂಚಕ. ೧೯೯೨ ರ ಭಾರತೀಯ ಭದ್ರತಾ ಹಗರಣದಲ್ಲಿ (ಸುಮಾರು ₹೩೦,೦೦೦ ಕೋಟಿಗಳು) ಮೆಹ್ತಾ ಭಾಗಿಯಾಗಿರುವುದು ಅವರನ್ನು ಮಾರುಕಟ್ಟೆಯ ಮ್ಯಾನಿಪ್ಯುಲೇಟರ್ ಎಂದು ಕುಖ್ಯಾತಗೊಳಿಸಿತು. ಮೆಹ್ತಾ ವಿರುದ್ಧದ ೨೭ ಕ್ರಿಮಿನಲ್ ಆರೋಪಗಳಲ್ಲಿ ಅವರು ೨೦೦೧ ರಲ್ಲಿ ೪೭ ನೇ ವಯಸ್ಸಿನಲ್ಲಿ ಸಾಯುವ ಮೊದಲು (ಹಠಾತ್ ಹೃದಯಾಘಾತದಿಂದ) ಕೇವಲ ನಾಲ್ಕು ಬಾರಿ ಅಪರಾಧಿಗಳಾಗಿದ್ದರು.
ಎರಡನೇ ವಿಕ್ರಮಾದಿತ್ಯ (ಆಳ್ವಿಕೆ 733 - 744)ನು ರಾಜ ವಿಜಯದಿತ್ಯನ ಮಗ ಮತ್ತು ಅವನ ತಂದೆಯ ಮರಣದ ನಂತರ ಬಾದಾಮಿ ಚಾಲುಕ್ಯ ರ ಸಿಂಹಾಸನವನ್ನು ಏರಿದನು.ಈ ಮಾಹಿತಿಯು ಕ್ರಿ.ಶ 735, 13 ಜನವರಿಯ ಕನ್ನಡದ ಲಕ್ಷ್ಮೇಶ್ವರ ಶಾಸನಗಳಿಂದ ತಿಳಿದು ಬಂದಿದೆ. ಶಾಸನಗಳ ಪ್ರಕಾರ ಎರಡನೇ ವಿಕ್ರಮಾದಿತ್ಯ ತನ್ನ ಪಟ್ಟಾಭಿಷೇಕದ ಪೂರ್ವದಲ್ಲಿ ಅಂದರೆ ಯುವರಾಜನಾಗಿದ್ದಾಗಲೇ ತಮ್ಮ ಶತ್ರುವಾದ ಕಾಂಚೀಪುರಂದ ಪಲ್ಲವರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದ ಎಂದು ತಿಳಿದು ಬಂದಿದೆ.ಮೂರು ಬಾರಿ ಕಾಂಚೀಪುರಂ ಅನ್ನು ವಶಪಡಿಸಿಕೊಂಡಿರುವುದು ಎರಡನೇ ವಿಕ್ರಮಾದಿತ್ಯನ ಪ್ರಮುಖ ಸಾಧನೆಗಳು.ಮೊದಲನೇ ಬಾರಿ ಯುವರಾಜನಾಗಿದ್ದಾಗ, ಎರಡನೆಯದು ಬಾರಿ ಚಕ್ರವರ್ತಿಯಾಗಿದ್ದಾಗ, ಮೂರನೇ ಬಾರಿ ತನ್ನ ಮಗ ಮತ್ತು ಯುವರಾಜ ಎರಡನೇ ಕೀರ್ತಿವರ್ಮನ್ ನ ನೇತೃತ್ವದಲ್ಲಿ ವಶಪಡಿಸಿಕೊಂಡಿರುವುದು ಸಾಧನೆ.ಇದನ್ನು ಕನ್ನಡದ ಮತ್ತೊಂದು ಶಾಸನವಾದ ವಿರೂಪಾಕ್ಷ ದೇವಾಲಯದ ಶಾಸನವು ದೃಢಪಡಿಸಿದೆ.ಮತ್ತೊಂದು ಗಮನಾರ್ಹ ಸಾಧನೆಯೆಂದರೆ ಪ್ರಸಿದ್ಧ ವಿರೂಪಾಕ್ಷ ದೇವಾಲಯ (ಲೋಕೇಶ್ವರ ದೇವಸ್ಥಾನ) ಮತ್ತು ಮಲ್ಲಿಕಾರ್ಜುನ ದೇವಸ್ಥಾನ (ತ್ರಿಲೋಕೇಶ್ವರ ದೇವಸ್ಥಾನ) ಅವರ ರಾಣಿಗಳಾದ ಲೋಕದೇವಿ ಮತ್ತು ತ್ರಿಲೋಕದೇವಿ ಅವರು ಪಟ್ಟದಕಲ್ಲುನು ಪವಿತ್ರ ಸ್ಥಾನವಾಗಿ ಮಾಡಿದರು.ಈ ಎರಡು ಸ್ಮಾರಕಗಳು ಪಟ್ಟಡಕಲ್ನಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ಸ್ಮಾರಕಗಳ ಕೇಂದ್ರ ಭಾಗವಾಗಿದೆ.ಪ್ರಬಲ ಆಡಳಿತಗಾರನಾದ ಎರಡನೇ ವಿಕ್ರಮಾದಿತ್ಯ 40 ವರ್ಷಗಳ ಕಾಲ ಅಧಿಕಾರ ನಡೆಸಿದನು.ಶಾಂತಿಯನ್ನು ಕಾಪಾಡಿಕೊಳ್ಳಲು ಅವರು ರಾಷ್ಟ್ರಕೂಟರೊಂದಿಗೆ ವಿವಾಹ ಮೈತ್ರಿ ಮಾಡಿಕೊಂಡರು.
ಪುರಾಣದಲ್ಲಿ ಉಲ್ಲೇಖಗೊಂಡಂತೆ ರೇಣುಕಾದೇವಿಯ ಮೋಹದ ಕಾರಣದಿಂದಾಗಿ ಮಡಕೆ ಮಾಡುವುದು ಅಸಾಧ್ಯವಾಗುತ್ತದೆ. ಇದನ್ನು ತನ್ನ ದಿವ್ಯದೃಷ್ಠಿಯಿಂದ ಅರಿತ ಜಮದಗ್ನಿ ಮಹರ್ಷಿಯು ತನ್ನ ಮಕ್ಕಳನ್ನು ಕರೆದು ಆಕೆಯನ್ನು ಸಂಹರಿಸುವಂತೆ ತಿಳಿಸುತ್ತಾನೆ. ಆಗ ಮಾತೃಹತ್ಯೆ ಪಾಪ ಎಂದು ಅರಿತ ಸುತರು ತಂದೆ ನುಡಿದದ್ದನ್ನು ಅನುಸರಿಸಲು ನಿರಾಕರಿಸಿದಾಗ ಕೋಪಗೊಂಡ ಜಮದಗ್ನಿಯು ತನ್ನ ಕೊಪದ ಜ್ವಾಲೆಯಿಂದ ಮಕ್ಕಳನ್ನು ಸುಡುತ್ತಾನೆ.
ಬೆಂಗಳೂರು : ಕರ್ನಾಟಕ ರಾಜ್ಯದ ಅತಿ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ ಹಾಗೂ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರವಾಗಿದೆ, ಪ್ರಸ್ತುತ ಬೆಂಗಳೂರು ತಾಲ್ಲೂಕು 408 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ.
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ವೆಂಕಟರಮಣ್ ಕೃಷ್ಣಮೂರ್ತಿ (೧೪ ಜನವರಿ ೧೯೨೫ - ೨೬ ಜೂನ್ ೨೦೨೨) ಒಬ್ಬ ಭಾರತೀಯ ನಾಗರಿಕ ಸೇವಕ. ವಿ. ಕೃಷ್ಣಮೂರ್ತಿ ಅವರು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್), ಮಾರುತಿ ಉದ್ಯೋಗ್ ಲಿಮಿಟೆಡ್ (ಎಮ್ಯುಎಲ್), ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್ಎಐಎಲ್) ಅನ್ನು ನಡೆಸುವಲ್ಲಿ ಅವರ ನಾಯಕತ್ವ ಮತ್ತು ಯಶಸ್ವಿ ಕೊಡುಗೆಗಾಗಿ ಅವರನ್ನು " ಭಾರತದ ಸಾರ್ವಜನಿಕ ವಲಯದ ಉದ್ಯಮಗಳ ಪಿತಾಮಹ" ಎಂದು ಕರೆಯುತ್ತಾರೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ವೃತ್ತಿಪರವಾಗಿ ಕಲಾ ಮಾಸ್ಟರ್ ಎಂದು ಕರೆಯಲ್ಪಡುವ ಕಲಾ ಭಾರತೀಯ ನೃತ್ಯ ಸಂಯೋಜಕಿ. ಅವರು ಭಾರತೀಯ ರಿಯಾಲಿಟಿ ಡ್ಯಾನ್ಸ್ ಟ್ಯಾಲೆಂಟ್ ಶೋ ಮಾನದ ಮಯಿಲಾಡಾದ ನಿರ್ದೇಶಕರಾಗಿದ್ದಾರೆ - ಅಲ್ಲಿ ಅವರು ಮೂವರು ತೀರ್ಪುಗಾರರಲ್ಲಿ ಒಬ್ಬರು. ಮಲಯಾಳಂ ಚಲನಚಿತ್ರ ಕೊಚ್ಚು ಕೊಚ್ಚು ಸಂತೋಷಂಗಲ್ನಲ್ಲಿನ ಜಾನಪದ ನೃತ್ಯದ ಅನುಕ್ರಮಕ್ಕಾಗಿ ೨೦೦೦ ರಲ್ಲಿ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಇವರಿಗೆ ನೀಡಲಾಯಿತು.
ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.
ಮೀನಾ ದುರೈರಾಜ್ (ಜನನ ೧೬ ಸೆಪ್ಟೆಂಬರ್ ೧೯೭೬), ವೃತ್ತಿಪರವಾಗಿ ಮೀನಾ ಎಂದು ಕರೆಯುತ್ತಾರೆ, ಅವರು ದಕ್ಷಿಣ ಭಾರತದ ಚಲನಚಿತ್ರೋದ್ಯಮ ಮತ್ತು ಹಿಂದಿ ಚಿತ್ರರಂಗದಲ್ಲಿ ಪ್ರಧಾನವಾಗಿ ಕೆಲಸ ಮಾಡುವ ಭಾರತೀಯ ನಟಿ. ಅವರು ೧೯೮೨ ರಲ್ಲಿ ತಮಿಳು ಚಲನಚಿತ್ರ ನೆಂಜಂಗಲ್ನಲ್ಲಿ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದರು ಮತ್ತು ನಂತರ ವಿವಿಧ ಪ್ರಾದೇಶಿಕ ಉದ್ಯಮಗಳು ನಿರ್ಮಿಸಿದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರ ವೃತ್ತಿಜೀವನವು ಮೂರು ದಶಕಗಳವರೆಗೆ ವ್ಯಾಪಿಸಿದೆ.
ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರು
'ಸಾಕ್ಷಾತ್ ಪರಬ್ರಹ್ಮ ' ನು, 'ಸದಾಶಿವ' ನು, 'ಶ್ರೀಮನ್ಮಹಾವಿಷ್ಣು' ವು ಅದ 'ಸದ್ಗುರು'ಗಳು ಲೋಕವನುದ್ದರಿಸಲು ಬೋದಿಸುವ ಮಾರ್ಗವೆ 'ಗುರುಪಂಥ'. ಇಂತಹ ಅನೇಕ ಗುರು ಪರಂಪರೆಗಳಿವೆ. ದಕ್ಷಿಣ ಭಾರತದಲ್ಲಿ ಮೂರು ಪರಂಪರೆಗಳು ಪ್ರಖ್ಯಾತವಾಗಿವೆ.
ಕಲು ದೊಡೊಲ್ ( Sinhala: කලු දොදොල් , Tamil: தொதல் ) ಎಂಬುದು ಶ್ರೀಲಂಕಾದಲ್ಲಿ ಜನಪ್ರಿಯವಾಗಿರುವ ಒಂದು ರೀತಿಯ ಡೋಡೋಲ್ ಸಿಹಿ ಖಾದ್ಯ. ಈ ಕಪ್ಪು ಮತ್ತು ಜಿಗುಟಾದ ಖಾದ್ಯವು ಮುಖ್ಯವಾಗಿ ಕಿತುಲ್ ಬೆಲ್ಲ ( ಹೆಂಡದ ರಸದಿಂದ ), ಅಕ್ಕಿ ಹಿಟ್ಟು ಮತ್ತು ತೆಂಗಿನ ಹಾಲನ್ನು ಒಳಗೊಂಡಿರುತ್ತದೆ. ಇದನ್ನು ತಯಾರಿಸುವುದು ತುಂಬಾ ಕಷ್ಟಕರ ಮತ್ತು ಇದು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ.
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.
ಟಾಟಾ ಗ್ರೂಪ್ ೧೮೬೮ ರಲ್ಲಿ ಸ್ಥಾಪಿತವಾಯಿತು ಹಾಗೂ ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಗಳ ಸಮೂಹವಾಗಿದೆ. ಇದು ೧೫೦ ಕ್ಕೂ ಹೆಚ್ಚು ದೇಶಗಳಲ್ಲಿ ಉತ್ಪನ್ನಗಳು ಮತ್ತು ಸೇವೆಗಳನ್ನು ಹೊಂದಿರುವ ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಯಾಗಿದೆ. ಪ್ರಮುಖ ಅಂಗಸಂಸ್ಥೆಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಮೋಟಾರ್ಸ್, ಟಾಟಾ ಪ್ರಾಜೆಕ್ಟ್ಸ್, ಟಾಟಾ ಪವರ್, ಟೈಟಾನ್, ಟಾಟಾ ಸ್ಟೀಲ್, ಏರ್ ಇಂಡಿಯಾ, ಇಂಡಿಯನ್ ಹೋಟೆಲ್ಸ್ ಕಂಪನಿ, ಟಾಟಾ ಗ್ರಾಹಕ ಉತ್ಪನ್ನಗಳು, ವೋಲ್ಟಾಸ್, ಟ್ರೆಂಟ್, ಕ್ರೋಮಾ ಮತ್ತು ಬಿಗ್ಬಾಸ್ಕೆಟ್ ಸೇರಿವೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
== ಕರ್ನಾಟಕದಲ್ಲಿ ಕೃಷಿ ಭೂಮಿ ಸಮಸ್ಯೆ == 12-ಜುಲೈ 2014 ಮುಂಗಾರು ಹಂಗಾಮಿನಲ್ಲಿ 74 ಲಕ್ಷ ಹೆಕ್ಟೇರ್ ಬಿತ್ತನೆ ಭೂಮಿ, ( ಮಳೆ ಕೊರತೆ ಕಾರಣ ೧೨-ಜುಲೈ ೨೦೧೪ ವರೆಗೆ 18.92 ಲಕ್ಷ ಹೆಕ್ಟೇರ್ ಪ್ರದೇಶ ದಲ್ಲಿ ಮಾತ್ರ ಬಿತ್ತನೆಯಾಗಿದೆ.) ರಾಜ್ಯದಲ್ಲಿ 1.39 ಕೋಟಿ ಜಾನುವಾರುಗಳಿದ್ದು, (೧೨-೭-೨೦೧೪ ರಿಂದ.72.75 ಲಕ್ಷ ಟನ್ ಮೇವಿನ ಸಂಗ್ರಹ ಇದೆ. ಇದು 15 ವಾರಗಳಿಗೆ ಸಾಕಾಗುತ್ತದೆ.) ‘ಪ್ರಮುಖ ಜಲಾಶಯಗಳ ನೀರಿನ ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ 864 ಟಿಎಂಸಿ ಅಡಿ,(೧೨-೭-೨೦೧೪ ಮಳೆ ಕೊರತೆಯಿಂದ ಸದ್ಯ 166 ಟಿಎಂಸಿ ಅಡಿ ಮಾತ್ರ ನೀರು ಲಭ್ಯವಿದೆ. ಕಳೆದ ವರ್ಷ ಇದೇ ದಿನ 254 ಟಿಎಂಸಿ ಅಡಿ ನೀರಿನ ಸಂಗ್ರಹ ಇತ್ತು.) 3,554 ನೀರಾವರಿ ಕೆರೆಗಳಿವೆ, (೧೨-೭-೨೦೧೪ ಮಳೆ ಕೊರತೆ ಕಾರಣ ಎಂಟು ಮಾತ್ರ ತುಂಬಿವೆ.
ಹುಲಿಯೂರು ದುರ್ಗ : ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುಗಳಲ್ಲಿ ಒಂದು, ಹುಲಿಯೂರು ದುರ್ಗ ನಗರವು ತಾಲ್ಲೂಕು ಮತ್ತು ಕಸಬಾ ಹೋಬಳಿಯ ಕೇಂದ್ರ ಕೇಂದ್ರವಾಗಿದೆ. 2025ರಲ್ಲಿ ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ. ಹುಲಿಯೂರು ದುರ್ಗ ನಗರವು ಪಟ್ಟಣ ಪಂಚಾಯತಿಯನ್ನು ಹೊಂದಿರುವ ನಗರ ಪ್ರದೇಶ ಈ ಹಿಂದೆ ಕುಣಿಗಲ್ ತಾಲ್ಲೂಕಿನ ಒಂದು ಹೋಬಳಿ ಕೇಂದ್ರವಾಗಿತ್ತು.
ಬೆಳೆ ವಿಮೆ ಗ್ರಾಮೀಣ ವಿಮೆಯಲ್ಲಿ ಮುಖ್ಯವಾದದ್ದು, ಇದರಲ್ಲಿ ಉತ್ಪನ್ನ, ಬೆಲೆ ಮತ್ತು ಆದಾಯದ ಅಪಾಯಗಳನ್ನು ಖಚಿತಪಡಿಸಲಾಗಿದೆ. ರೈತರಿಗೆ ಗುಣಮಟ್ಟ ಪ್ರಮಾಣದ ಉತ್ಪನ್ನವನ್ನು ಪಡೆಯಲು ಹೋದರೆ, ಕೃಷಿ ಭೂಮಿಗಳ ಬೆಲೆ ಮತ್ತು ಆದಾಯದ ಅಗತ್ಯವಿದ್ದರೆ ಅವರನ್ನು ಬೆಳೆ ವಿಮೆ ಅಡ್ಡಿಯಲ್ಲಿ ವಿಮೆ ಕಂಪನಿಗಳು ಪರಿಹಾರ ಮಾಡುತ್ತದೆ. ಬೆಳೆ ವಿಮೆ ರೈತರು ಸಾಕಿರುವವರು ಮತ್ತು ಇತರ ಕ್ರ್ಷಿ ಉತ್ಪಾದಕರು, ಆಲಿಕಲ್ಲು, ಬರ ಮತ್ತು ಪ್ರವಾಹ ಮುಂತ್ತಾದ ಪ್ರಾಕ್ರುತಿಕ ವಿಕೋಪಗಳ ಮೂಲಕ ತಮ್ಮ ಬೆಳೆಗಳನ್ನು ನಷ್ಟವಾದರು ಮತ್ತು ಕೃಷಿ ಪದಾರ್ಥಗಳ ಬೆಲೆಗಳು ಕುಸಿತ ಕಾರಣ ಬರುವ ಆದಾಯದ ನಷ್ಟದಿಂದ ರಕ್ಷಿಸಿಕೊಳ್ಳಲು ಕೊಂಡುಕೊಳ್ಳುತ್ತಾರೆ.
ಸಮುದ್ರವಾಸಿ ಅಥವಾ ನದೀಮುಖದಲ್ಲಿರುವ ಮೊಸಳೆ ಯು (ಕ್ರಾಕಡೈಲಸ್ ಪೋರೋಸಸ್ ) ಎಲ್ಲಾ ಜೀವಂತ ಸರೀಸೃಪಗಳ ಪೈಕಿ ಅತಿದೊಡ್ಡದು ಎನಿಸಿಕೊಂಡಿದೆ. ಆಸ್ಟ್ರೇಲಿಯಾದ ಉತ್ತರಭಾಗ, ಭಾರತದ ಪೂರ್ವಭಾಗದ ಕರಾವಳಿ ಮತ್ತು ಆಗ್ನೇಯ ಏಷ್ಯಾದ ಭಾಗಗಳಲ್ಲಿನ ತನಗೆ ಸರಿಹೊಂದುವ ಆವಾಸಸ್ಥಾನಗಳಲ್ಲಿ ಇದು ಕಂಡುಬರುತ್ತದೆ. ತಾನು ವಾಸಿಸುವಪ್ರದೇಶಗಳ ಸುತ್ತ ಮುತ್ತ ವಾಸಿಸುವ ಮನುಷ್ಯರ ಪಾಲಿಗೆ ಸಮುದ್ರವಾಸಿ ಮೊಸಳೆ ಅತ್ಯಂತ ಅಪಾಯಕಾರಿ ಎನ್ನಲಾಗಿದೆ.
ಅರ್ಷದ್ ನದೀಮ್ ಅವರು 2 ಜನವರಿ 1997ರಲ್ಲಿ ಹುಟ್ಟಿದ ಪಾಕಿಸ್ತಾನದ ಜಾವೆಲಿನ್ ಎಸೆತಗಾರ.Punjabi pronunciation: [ˈɐrʃəd nɐˈdiːm]ಅವರು ಹಾಲಿ ಒಲಿಂಪಿಕ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಆಗಿದ್ದಾರೆ. ಅವರು ಪ್ರಸ್ತುತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಆತ 2024ರ ಬೇಸಿಗೆ ಒಲಿಂಪಿಕ್ 92.97 ಮೀಟರ್ (ID2) ಅಡಿ ದೂರ ಎಸೆಯುವ ಮೂಲಕ ಒಲಿಂಪಿಕ್ ಮತ್ತು ಏಷ್ಯನ್ ದಾಖಲೆಯನ್ನು ನಿರ್ಮಿಸಿದರು.
ಮೂರನೇ ಕೃಷ್ಣಪ್ಪ ನವೀನ್ ನಾರಾಯಣಘಟ್ಟ ರಚಿಸಿ ನಿರ್ದೇಶಿಸಿದ ೨೦೨೪ ರ ಕನ್ನಡ ಭಾಷೆಯ ಹಾಸ್ಯ ಚಲನಚಿತ್ರವಾಗಿದೆ . ರೆಡ್ ಡ್ರ್ಯಾಗನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ರೆಡ್ಡಿ ಜಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಮತ್ತು ಸಂಪತ್ ಮೈತ್ರೇಯ ಪ್ರಮುಖ ಪಾತ್ರಗಳಲ್ಲಿ ನಟಿಸಿದರೆ, ಶ್ರೀಪ್ರಿಯಾ, ಉಗ್ರಂ ಮಂಜು, ತುಕಾಲಿ ಸಂತೋಷ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.