The most-visited English Wikipedia articles, updated daily. Learn more...
ಶಿವ (ಮಂಗಳಕರನು) ಹಾಗೂ ಮಹಾದೇವ (ದೇವರುಗಳಿಗೆ ದೇವರು) ಶಿವನು ಹಿಂದೂ ಧರ್ಮದ ಪ್ರಮುಖ ದೇವರು.. ಶಿವನು ತ್ರಿಮೂರ್ತಿಗಳಲ್ಲಿ ಒಬ್ಬನ್ನು, ಇತರರು ಬ್ರಹ್ಮ ಮತ್ತು ವಿಷ್ಣು, ಶೈವ ಸಂಪ್ರದಾಯಲ್ಲಿ ಶಿವನೂ ಸರ್ವೋಚ್ಚನಾಗಿದ್ದಾನೆ, ಈತನು ಜಗತ್ತಿನ ಸೃಷ್ಟಿ, ರಕ್ಷಣೆ, ಮತ್ತು ಪರಿವರ್ತನೆಯ ದೈವ. , ಆದಿಶಕ್ತಿ ಕೇಂದ್ರಿತ ಶಕ್ತ ಸಂಪ್ರದಾಯದಲ್ಲಿ ಶಿವನು ದೇವಿಯ ಪತಿ ಮತ್ತು ಸರಿಸಮನನಾಗಿದ್ದಾನೆ., ಸ್ಮಾರ್ತ ಸಂಪ್ರದಾಯದ ಐದು ಪ್ರಮುಖ ದೇವರಲ್ಲಿ ಶಿವನು ಒಬ್ಬನು.
ಪಾಂಡವರು ಮಹಾಭಾರತದ ಮಹಾಕಾವ್ಯದ ಪ್ರಮುಖ ಪಾತ್ರಗಳಾದ ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ ಎಂಬ ಐದು ಸಹೋದರರನ್ನು ಉಲ್ಲೇಖಿಸಲಾಗಿದೆ. ಅವರನ್ನು ಕುರು ರಾಜ ಪಾಂಡುವಿನ ಪುತ್ರರೆಂದು ಪರಿಗಣಿಸಲಾಗುತ್ತಿತ್ತು, ಆದರೆ ಪಾಂಡುವಿನ ಮಕ್ಕಳನ್ನು ಹೊಂದಲು ಅಸಮರ್ಥತೆಯಿಂದಾಗಿ ಕುಂತಿ-ಮಾದ್ರಿಯರು ಬೇರೆ ಬೇರೆ ದೇವರುಗಳಿಂದ ಪಾಂಡವರನ್ನು ಪಡೆದರು. ಪಾಂಡವರು ದ್ರೌಪದಿ ಎಂಬ ಹೆಂಡತಿಯನ್ನು ಹಂಚಿಕೊಂಡರು.
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆ
"ನಾವು ಈಗಾಗಲೇ ಭೂಮಿಯ ಸಂಪನ್ಮೂಲಗಳಲ್ಲಿ ಅಗತ್ಯಕ್ಕಿಂತ 2 ರಿಂದ 3 ಪಟ್ಟು ಹೆಚ್ಚಿನ ಸಂಪನ್ಮೂಲಗಳನ್ನು ಬಳಸುತ್ತಿದ್ದೇವೆ. "ಭೂಮಿಯ ಪ್ರತಿ ವ್ಯಕ್ತಿಯ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಒದಗಿಸುತ್ತದೆ, ಆದರೆ ಪ್ರತಿ ಮಾನವನ ದುರಾಸೆಯನ್ನಲ್ಲ " - ಎಂದು ಹೇಳಲಾಗುತ್ತದೆ (ಗಾಂಧೀಜಿ). ಈಗ ಮಾನವನ ಬದುಕಿಗೆ ಪರಿಸರ ರಕ್ಷಣೆಗೆ ಅತಿ ಸೂಕ್ಷ್ಮ ಪ್ರದೇಶವಾದ ಭಾರತದ ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆ ಅತಿ ಅಗತ್ಯ ಎಂಬುದ ಪರಿಸರ ತಜ್ಞರ ಅಭಿಪ್ರಾಯ.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಒಗ್ಗರಣೆಯು ಭಾರತ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಪಾಕಶೈಲಿಗಳಲ್ಲಿ ಬಳಸಲಾಗುವ ಒಂದು ಅಡುಗೆ ತಂತ್ರವಾಗಿದೆ. ಇದರಲ್ಲಿ ಇಡೀ ಸಂಬಾರ ಪದಾರ್ಥಗಳನ್ನು (ಮತ್ತು ಕೆಲವೊಮ್ಮೆ ಒಣ ಮೆಣಸಿನಕಾಯಿ, ಸಣ್ಣದಾಗಿ ಹೆಚ್ಚಿದ ಶುಂಠಿ ಅಥವಾ ಸಕ್ಕರೆಯಂತಹ ಇತರ ಘಟಕಾಂಶಗಳು ಕೂಡ) ಎಣ್ಣೆ ಅಥವಾ ತುಪ್ಪದಲ್ಲಿ ಸ್ವಲ್ಪ ಕಾಲ ಹುರಿಯಲಾಗುತ್ತದೆ. ಇದರ ಉದ್ದೇಶ ಕೋಶಗಳಿಂದ ಸಾರತೈಲಗಳನ್ನು ಹೊರಬರುವಂತೆ ಮಾಡಿ ಅವುಗಳ ರುಚಿ/ಕಂಪನ್ನು ಹೆಚ್ಚಿಸುವುದಾಗಿರುತ್ತದೆ.
ವಿಶ್ವ ಸ್ತನ್ಯಪಾನ ವಾರ (ಡಬ್ಲ್ಯೂಬಿಡಬ್ಲ್ಯೂ) ವಾರ್ಷಿಕ ಆಚರಣೆಯಾಗಿದ್ದು , ಇದನ್ನು ಪ್ರತಿವರ್ಷ ಆಗಸ್ಟ್ 1 ರಿಂದ ಆಗಸ್ಟ್ 7 ರವರೆಗೆ 120 ಕ್ಕೂ ಹೆಚ್ಚು ದೇಶಗಳಲ್ಲಿ ನಡೆಸಲಾಗುತ್ತದೆ.WBW ವೆಬ್ಸೈಟ್ನ ಅಂಕಿಅಂಶಗಳ ಪ್ರಕಾರ, ಪ್ರಪಂಚದ ಸ್ತನ್ಯಪಾನ ಸಪ್ತಾಹ 2010 ರ ವರೆಗೆ 488 ಸಂಘಟನೆಗಳು ಮತ್ತು 406,620 ಜನ ಭಾಗವಹಿಸುವವರೊಂದಿಗೆ 79 ದೇಶಗಳಲ್ಲಿ 540 ಕಾರ್ಯಕ್ರಮಗಳು ನಡೆದಿವೆ.ಸ್ತನ್ಯಪಾನ ಕ್ರಿಯೆಗಾಗಿ ವಿಶ್ವ ಅಲೈಯನ್ಸ್ , WHO ಮತ್ತು UNICEF, WBW ಯ ಸಂಘಟಿತವಾಗಿದ್ದು, ಮಗು ಜನಿಸಿದ ಮೊದಲ ಆರು ತಿಂಗಳ ಕಾಲ ವಿಶೇಷ ಎದೆ ಹಾಲುಣಿಸುವಿಕೆಯನ್ನು ಉತ್ತೇಜಿಸುವ ಗುರಿಯೊಂದಿಗೆ 1991ರಲ್ಲಿ ಆರಂಭಿಸಲಾಯಿತು ಸ್ತನ್ಯಪಾನ ,ಮಹತ್ವದ ಪೋಷಕಾಂಶಗಳನ್ನು ಒದಗಿಸುತ್ತದೆ, ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ನ್ಯುಮೋನಿಯಾ ,ಪ್ರಾಣಾಂತಿಕ ರೋಗಗಳಿಂದ ರಕ್ಷಣೆ ಮತ್ತು ಬೆಳವಣಿಗೆಯನ್ನು ಅಭಿವೃದ್ಧಿಪಡಿಸುತ್ತದೆ.
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.
ರುದ್ರಪ್ಪ ಮಾನಪ್ಪ ಲಮಾಣಿ (ಜನನ ೧ ಜೂನ್ ೧೯೫೯) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಇವರು ಪ್ರಸ್ತುತ ಜುಲೈ ೨೦೨೩ ರಿಂದ ಕರ್ನಾಟಕ ವಿಧಾನಸಭೆಯ ೨೫ನೇ ಉಪ ಸಭಾಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹಾವೇರಿ ಜಿಲ್ಲೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಾಗಿರುವ ಹಾವೇರಿ ವಿಧಾನಸಭಾ ಕ್ಷೇತ್ರ ಶಾಸಕರಾಗಿದ್ದಾರೆ. ಇವರು ೨೦೨೩ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಪ್ರತಿನಿಧಿಸಿ ಗೆದ್ದರು.
ಸ್ಫಟಿಕ ಶಿಲೆ ಯು ಭೂಮಿಯ ಭೂಖಂಡೀಯ ತೊಗಟೆಯಲ್ಲಿ ಫೆಲ್ಡ್ಸ್ಪರ್ನ ನಂತರ ಎರಡನೇ ವಿಪುಲ ಲಭ್ಯತೆಯ ಖನಿಜವಾಗಿದೆ. ಈ ಖನಿಜವು ಪ್ರತಿ ಆಮ್ಲಜನಕದ ಪರಮಾಣುವನ್ನು ಎರಡು ಚತುರ್ಮುಖಗಳ ನಡುವೆ ಹಂಚಿರುವ ರೀತಿಯಲ್ಲಿ, ಒಟ್ಟಾರೆಯಾಗಿ SiO2 ಸೂತ್ರದಂತೆ ರೂಪುಗೊಳ್ಳುವ ಹಾಗೆ SiO4 ಎಂಬ ಸಿಲಿಕಾನ್–ಆಮ್ಲಜನಕ ಚತುರ್ಮುಖಗಳ ಸಾತತ್ಯ ಸಂರಚನೆಯಿಂದ ಕೂಡಿದೆ. ಸ್ಫಟಿಕ ಶಿಲೆಯಲ್ಲಿ ಅನೇಕ ಬೇರೆ ಬೇರೆ ವಿಧಗಳಿದ್ದು, ಅವುಗಳಲ್ಲಿ ಅನೇಕವು ಅರೆ-ಪ್ರಶಸ್ತ ರತ್ನಮಣಿ/ಹರಳುಗಳು.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಗೇಡು ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: If you get your hands dirty in the mud, you will get food.
ಸ್ಥಳೀಯವಾಗಿ ಯೆರವ ಅಥವಾ ಆದಿಯನ್ ಎಂದು ಕರೆಯಲ್ಪಡುವ ರಾವುಲಾ, ಕರ್ನಾಟಕ ಮತ್ತು ಕೇರಳದ ಆದಿಯಾರ್ ಮಾತನಾಡುವ ದ್ರಾವಿಡ ಭಾಷೆಯಾಗಿದೆ. ಇದನ್ನು ಭಾಷಾಶಾಸ್ತ್ರ ಮತ್ತು ಭಾರತದ ಜನಗಣತಿ ಎರಡರಲ್ಲೂ ಮಲಯಾಳಂ ಭಾಷೆಗಳ ವರ್ಗದಲ್ಲಿ ವರ್ಗೀಕರಿಸಲಾಗಿದೆ. ಆದಾಗ್ಯೂ ಅವರ ಭಾಷೆಯು ಮಲಯಾಳಂ, ಕೊಡಗು ಮತ್ತು ವಯನಾಡು ಜಿಲ್ಲೆಗಳಲ್ಲಿನ ಇತರ ಬುಡಕಟ್ಟು ಮಾತುಗಳಿಂದ ಗುರುತಿಸುವ ಹಲವಾರು ವಿಶಿಷ್ಟತೆಗಳನ್ನು ಪ್ರದರ್ಶಿಸುತ್ತದೆ.
ಪಾರ್ಸಿ ಅಥವಾ ಪಾರ್ಸೀ ಎಂದರೆ pronounced /ˈpɑrsiː/ಎರಡು ದೊಡ್ಡ ಜನಾಂಗದ ಜೊರೊಸ್ಟ್ರಿಯನ್ಅನುಯಾಯಿಗಳ ಸಮಾಜ ಅಥವಾ ಭಾರತದ ಉಪಖಂಡಕ್ಕೆ ಸೇರಿದ ಸಮೂದಾಯ ಎಂದು ಉಲ್ಲೇಖಿಸಲಾಗುತ್ತದೆ. ಈ ಪದವನ್ನು ಪುರಾತನ ಪರ್ಸಿಯನ್ ರು ತಮ್ಮನ್ನು ಗುರುತಿಸಿಕೊಳ್ಳಲು ಹೇಳುತ್ತಿದ್ದರು. ಸಂಪ್ರದಾಯಿಕವಾಗಿ ಸದ್ಯದ ಪಾರ್ಸಿಗಳು ಇರಾನಿನ ಝೊರೊಸ್ಟ್ರಿಯನ್ಸ್ ಗಳೆಂದು ಹೇಳಲಾಗುತ್ತದೆ.ಸುಮಾರು ೧೦ನೆಯ ಶತಮಾನದಲ್ಲಿADಯಲ್ಲಿ ಭಾರತದ ಪಶ್ಚಿಮ ಭಾಗಕ್ಕೆ ವಲಸೆ ಬಂದರು,ಇದಕ್ಕೆ ಕಾರಣವೆಂದರೆ ಇರಾನಿನಲ್ಲಿನ ಮುಸ್ಲಿಮರಕಾಟಕ್ಕೆ ಬೇಸತ್ತು ಅವರು ವಲಸೆ ಹೋದರೆಂದು ಹೇಳಲಾಗುತ್ತದೆ.
ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.
ಕಪ್ಪು ಹಿಂಗತ್ತಿನ ರಾಜಹಕ್ಕಿ ಅಥವಾ ಬ್ಲ್ಯಾಕ್-ನೇಪ್ಡ್ ಬ್ಲೂ ಫ್ಲೈಕ್ಯಾಚರ್ ( ಹೈಪೋಥೈಮಿಸ್ ಅಜುರಿಯಾ ) ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಮೊನಾರ್ಕ್ ಫ್ಲೈಕ್ಯಾಚರ್ಗಳ ( ಮೊನರ್ಚಿನೆ, ರಾಜಹಕ್ಕಿಗಳು ) ಕುಟುಂಬಕ್ಕೆ ಸೇರಿದ ಸಪೂರ ಮತ್ತು ಅಧಿಕ ಲವಲವಿಕೆಯ ಪ್ಯಾಸರೀನ್ ಹಕ್ಕಿ. ಇವು ಲೈಂಗಿಕ ದ್ವಿರೂಪಿ, ಗಂಡು ಹೆಣ್ಣುಗಳ ಹೊರರೂಪದಲ್ಲಿ ಸಾಮ್ಯತೆ ಇರುವುದಿಲ್ಲ. ಗಂಡಿನ ತಲೆಯ ಹಿಂಭಾಗದಲ್ಲಿ ಕಪ್ಪು ತೇಪೆ ಇದ್ದು, ಕಂಠದ ಮುಂಭಾಗದಲ್ಲಿ ಕಂಠಾಭರಣದಂತೆ ಕಿರಿದಾದ ಕಪ್ಪನೆಯ ಗೆರೆ ಇರುತ್ತದೆ.
ನೈಸರ್ಗಿಕ ಸಂಪನ್ಮೂಲಗಳು ಭೂಮಿ ಅಥವಾ ಕಚ್ಛಾ ವಸ್ತುಗಳನ್ನು ) ಆರ್ಥಿಕಮಾನದಂಡ ಎಂದು ಉಲ್ಲೇಖಿಸಲಾಗಿದೆ) ಪರಿಸರದಲ್ಲಿ ಮಾನವರಿಂದ ಸ್ಥಾನಪಲ್ಲಟಕ್ಕೆ ಈಡಾಗದೇ ಇರುವಾಗ ಅವುಪ್ರಾಕೃತಿಕ ರೂಪದಲ್ಲಿ ಇರುತ್ತವೆ. ನೈಸರ್ಗಿಕ ಸಂಪನ್ಮೂಲವನ್ನು ವಿವಿಧ ಪರಿಸರ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಜೀವವೈವಿಧ್ಯತೆಯ ಆಧಾರದ ಮೇಲೆ ವಿಂಗಡಿಸಲಾಗಿದೆ. ನೈಸರ್ಗಿಕ ಸಂಪನ್ಮೂಲಗಳೆಲ್ಲವೂಪರಿಸರ ಜನ್ಯ.
ಫೀನಿಕ್ಸ್ (pronounced /ˈfiːnɪks/ FEE-niks, ಒ'ಒಧಾಮ್ ಸ್ಕಿಕಿಕ್ ,ಯಾವ್ ಪೈವಾಸಿಂಕಾ ,ವೆಸ್ಟರ್ನ್ ಅಪಾಚೆ ಫಿನಿಗಿಸ್ ,ನವಜೊ ಹೂಜ್ದೊ ,ಮೊಜಾವೆ ಹಚ್ಪಾ'ಅನ್ಯಾ ನ್ಯಾವಾ )ಇದು ಅದರ ರಾಜಧಾನಿಯಾಗಿರುವುದಲ್ಲದೇ ಅತಿ ದೊಡ್ಡ U.S. ಸ್ಟೇಟ್ ನ ವಿಶಾಲ ನಗರವಾಗಿದೆ.ಅರಿಜೊನವು ಯುನೈಟೆಡ್ ಸ್ಟೇಟ್ಸ್ ನಲ್ಲಿನ ಅಧಿಕ ಜನಸಂಖ್ಯೆಯುಳ್ಳ ಐದನೆಯ ದೊಡ್ಡ ನಗರ ಎನಿಸಿದೆ.ಅಲ್ಲದೇ ಅತ್ಯಧಿಕ ಜನಸಂಖ್ಯೆಯುಳ್ಳ ರಾಜಧಾನಿಯಾಗಿದೆ. ಫೀನೀಕ್ಸ್ ಸುಮಾರು 1,601,587 ಜನರಿಗೆ ಆಶ್ರಯ ನೀಡಿದ ನೆಲೆವಾಸವಾಗಿದೆ ಎಂದು U.S.ನ ಜನಗಣತಿ ಬ್ಯುರೊ 2009 ರಲ್ಲಿ ದಾಖಲಿಸಿದೆ.ಇದು ಫೀನಿಕ್ಸ್ ಮೆಟ್ರೊಪಾಲಿಟಿನ್ ಏರಿಯಾದ ಪ್ರಮುಖ ಪ್ರದೇಶವೆನಿಸಿದೆ.(ಇದನ್ನು ವ್ಯಾಲ್ಲಿ ಆಫ್ ದಿ ಸನ್ ಎಂದೂ ಹೇಳಲಾಗುತ್ತದೆ.)ಯುನೈಟೆಡ್ ಸ್ಟೇಟ್ಸ್ ನಲ್ಲಿ 12 ನೆಯ ಅತಿದೊಡ್ಡ ಮೆಟ್ರೊಪಾಲಿಟಿನ್ ಪ್ರದೇಶವಾಗಿದೆಯಲ್ಲದೇ ಒಟ್ಟು ಸುಮಾರು 4.3 ದಶಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇದೆ. ಇದಲ್ಲದೇ ಫೀನಿಕ್ಸ್ ಮಾರಿಕೊಪಾ ಕೌಂಟಿಯ ಒಂದು ಕೌಂಟಿ ಪ್ರದೇಶವಾಗಿದೆ.ಅಷ್ಟೇ ಅಲ್ಲದೇ ಯುನೈಟೆಡ್ ಸ್ಟೇಟ್ಸ್ ನಲ್ಲಿನ ಅತಿ ದೊಡ್ಡ ಪ್ರಮಾಣದ ಪ್ರಾದೇಶಿಕ ಗಾತ್ರದ ವಿಶಾಲತೆ ಪಡೆದಿದೆ.GR6 ಫೀನಿಕ್ಸ್ ನಗರವು 1861 ರಲ್ಲಿ ಪ್ರತಿಷ್ಟಾಪಿತಗೊಂಡ ನಂತರ 1881 ರಲ್ಲಿ ಒಂದು ನಗರವಾಗಿ ಸಮಗ್ರತೆ ಪಡೆಯಿತು.ಇದು ಮೊದಲು ಸಾಲ್ಟ್ ರಿವರ್ (ಉಪ್ಪು ನದಿ)ಮತ್ತು ಗಿಲಾ ರಿವರ್ ಗಳ ಸಂಗಮ ಪ್ರದೇಶದಲ್ಲಿ ತಲೆ ಎತ್ತಿದೆ.
ಮಂಗಳೂರು ನಗರ ಪಾಲಿಕೆ ಭಾರತೀಯ ನಗರವಾದ ಮಂಗಳೂರು ಮತ್ತು ಅದರ ಉಪನಗರಗಳ ಸ್ಥಳೀಯ ಆಡಳಿತವನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿರುವ ಮುನ್ಸಿಪಲ್ ಕಾರ್ಪೊರೇಶನ್ ಆಗಿದೆ, ಇದು ಪ್ರಮುಖ ನಗರ ಪ್ರದೇಶ ಮತ್ತು ಕರ್ನಾಟಕ ರಾಜ್ಯದ ಪ್ರಮುಖ ಬಂದರು ನಗರವಾಗಿದೆ. 1688 ರಲ್ಲಿ ಮದ್ರಾಸ್ (ಚೆನ್ನೈ) ನಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ರಚನೆಯೊಂದಿಗೆ ಬ್ರಿಟೀಷ್ ಭಾರತದಲ್ಲಿ ಮುನ್ಸಿಪಲ್ ಕಾರ್ಪೊರೇಶನ್ನ ಕಾರ್ಯವಿಧಾನವನ್ನು ಪರಿಚಯಿಸಲಾಯಿತು, ನಂತರ 1762 ರಲ್ಲಿ ಬಾಂಬೆ (ಮುಂಬೈ) ಮತ್ತು ಕಲ್ಕತ್ತಾ (ಕೋಲ್ಕತ್ತಾ) ನಲ್ಲಿ ಮುನ್ಸಿಪಲ್ ಕಾರ್ಪೊರೇಶನ್ಗಳು ಇದು ಶಾಸಕಾಂಗ ಮತ್ತು ಕಾರ್ಯನಿರ್ವಾಹಕ ಸಂಸ್ಥೆಯನ್ನು ಒಳಗೊಂಡಿದೆ. ಶಾಸಕಾಂಗ ಮಂಡಳಿಯು ಮೇಯರ್ ನೇತೃತ್ವದಲ್ಲಿರುತ್ತದೆ, ಆದರೆ ಕಾರ್ಯಕಾರಿ ಮಂಡಳಿಯು ಮುಖ್ಯ ಆಯುಕ್ತರ ನೇತೃತ್ವದಲ್ಲಿದೆ.
ಹಲಸಿನ ಹಣ್ಣು ಸಂಸ್ಕ್ರತದಲ್ಲಿ 'ಪನಸ' ಎಂದು ಕರೆಯುವ, ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರುಳ್ಳ ಇಂಗ್ಲಿಷ್ನಲ್ಲಿ ಜಾಕ್ ಫ್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ನು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ ಅಂಶಗಳನ್ನೂ ಒಳ ಗೊಂಡಿದೆ. ಹತ್ತರಂದ ಹನ್ನೆರಡು ಮೀಟರ್ ಗಳಷ್ಟು ಎತ್ತರಕ್ಕೆ ಬೆಳೆಯುವ ಹಲಸಿನ ಮರ, ಹಸಿರು ಎಲೆಗಳಿಂದ ಆವ್ರತವಾಗಿದೆ. ಹಲಸಿನ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮನ್ ಗಳು, ಸೆರೊಟಿನಿನ್, ಬೀಟಾ ಕ್ಯಾರೋಟಿನ್, ಸೋಡಿಯಮ್, ಕ್ಯಾಲ್ಶಿಯಮ್, ಪೊಟಾಶಿಯಮ್ ಅಂಶಗಳಿವೆ.
ಅರಮನೆಯ ಒಂದು ಭವ್ಯ ನಿವಾಸ, ವಿಶೇಷವಾಗಿ ರಾಜಮನೆತನದವರು ಅಥವಾ ಉನ್ನತ ಶ್ರೇಣಿಯ ಪ್ರತಿಷ್ಠಿತ ಸಂಸ್ಥಾನದ ಮುಖ್ಯಸ್ಥರು ನಿವಾಸಿಸುವ ಭವ್ಯ ನಿವಾಸ.ಈ ಪದವು ಲ್ಯಾಟಿನ್ ಪದ palatium ದಿಂದ ಬಂದಿದೆ (ರೋಮ್ನಲ್ಲಿ ಬೆಟ್ಟದ ಇಂಪೀರಿಯಲ್ ನಿವಾಸಗಳು ವಾಸಿಸುವ ಮನೆ).ಯುರೋಪಿನ ಬಹುತೇಕ ಭಾಗಗಳಲ್ಲಿ ಶ್ರೀಮಂತ ಮಹತ್ವಾಕಾಂಕ್ಷೆಯ ಖಾಸಗಿ ಮಹಲುಗಳನ್ನು ಅರಮನೆ ಎಂದು ಕರೆಯಲಾಗುತ್ತದೆ. ಈಗ ಅನೇಕ ಐತಿಹಾಸಿಕ ಅರಮನೆಗಳು ಸಂಸತ್, ವಸ್ತುಸಂಗ್ರಹಾಲಯಗಳು,ಕಚೇರಿ ಕಟ್ಟಡಗಳು,ಹೋಟೆಲ್ಗಳಾಗಿವೆ.ಕೆಲವೊಮ್ಮೆ ಸಾರ್ವಜನಿಕ ಮನರಂಜನಾ ಅಥವಾ ಪ್ರದರ್ಶನಗಳು ನಡೆಸುವ ಕಟ್ಟಡಗಳನ್ನು ಅರಮನೆ ಎನ್ನಲಾಗುತ್ತದೆ.
ಅಟ್ಲಾಂಟಾ (pronounced /ətˈlæntə/ ಅಥವಾ /ætˈlæntə/) ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಜ್ಯ ಜಾರ್ಜಿಯಾ ರಾಜ್ಯದ ರಾಜಧಾನಿ ಹಾಗೂ ಅತಿಹೆಚ್ಚು ಜನನಿಬಿಡ ರಾಜ್ಯವಾಗಿದೆ. ಇಸವಿ ೨೦೦೮ರಲ್ಲಿ, ೫೪೦,೯೨೧ರಷ್ಟು ಜನಸಂಖ್ಯೆ ಹೊಂದಿದ್ದ ಅಟ್ಲಾಂಟಾ ಅಮೆರಿಕಾ ಸಂಯುಕ್ತ ಸಂಸ್ಥಾನದ ಮುವತ್ತಮೂರನೆಯ ಅತಿ ದೊಡ್ಡ ನಗರ ಎನ್ನಲಾಗಿತ್ತು. ಅಟ್ಲಾಂಟಾದ ಮಹಾನಗರ ಕ್ಷೇತ್ರವನ್ನು ಅಧಿಕೃತವಾಗಿ ಅಟ್ಲಾಂಟಾ-ಸ್ಯಾಂಡಿ ಸ್ಪ್ರಿಂಗ್ಸ್-ಮ್ಯಾರಿಯೆಟಾ, GA MSA ಎನ್ನಲಾಗಿದೆ.
ಇದಿ ಅಮೀನ್ (ಸಿ.೧೯೨೫[A] – ೧೬ ಆಗಸ್ಟ್ ೨೦೦೩) ಇವರು ೧೯೭೧ ರಿಂದ ೧೯೭೯ ರವರೆಗೆ ಉಗಾಂಡಾದ ಅಧ್ಯಕ್ಷರಾಗಿದ್ದರು ಹಾಗೂ ಸೈನ್ಯದ ನಾಯಕರಾಗಿದ್ದರು. ಅಮೀನ್ ಅವರು ೧೯೪೬ರಲ್ಲಿ ಬ್ರಿಟಿಷ್ ವಸಾಹತು ಸೈನಿಕ ಪಡೆ ಕಿಂಗ್ಸ್ ಆಫ್ರಿಕನ್ ರೈಫಲ್ಸ್ ಸೇರಿದರು, ಹಾಗೂ ಮಿಲ್ಟನ್ ಒಬೋಟ್ ನಂತರ ಮಿಲಿಟರಿ ಕಾಪ್ ಆಫ್ ಜನವರಿ ೧೯೭೧ ಗೆ ಆಯ್ಕೆಗೊಂಡು ನಂತರದಲ್ಲಿ ಮೇಜರ್ ಜನರಲ್ ದರ್ಜೆಗೇರಿದರು ಹಾಗೂ ಉಗಾಂಡನ್ ಸೈನ್ಯದ ಕಮ್ಯಾಂಡರ್ ಆದರು. ಅವರು ರಾಜ್ಯದ ಮುಖ್ಯಸ್ಥರಾಗಿದ್ದಾಗ ತಮ್ಮನ್ನು ಫೀಲ್ಡ್ ಮಾರ್ಷಲ್ ಸ್ಥಾನಕ್ಕೆ ನಿಯಮಿಸಿಕೊಂಡರು.
ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು. ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕ_ಕ್ರಿಯೆ ಎನ್ನಲಾಗದು.
ಮಹಾಭಾರತ ಮತ್ತು ರಾಮಾಯಣ ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯವಾಗಿದ್ದು ಇವುಗಳನ್ನು ಹಿಂದೂ ಧರ್ಮದಲ್ಲಿ ಪೂಜಿಸುತ್ತಾರೆ. ಮಹಾಭಾರತ ಇದು ಕುರುಕ್ಷೇತ್ರ ಯುದ್ಧದ ಘಟನೆಗಳು ಮತ್ತು ನಂತರದ ಘಟನೆಗಳನ್ನು ವಿವರಿಸುತ್ತದೆ, ಇದು ರಾಜಮನೆತನದ ಸೋದರ ಸಂಬಂಧಿಗಳ ಎರಡು ಗುಂಪುಗಳಾದ ಕೌರವರು ಮತ್ತು ಪಾಂಡವರ ನಡುವಿನ ಉತ್ತರಾಧಿಕಾರದ ಯುದ್ಧವಾಗಿದೆ. ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು.
ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಇಂಗ್ಲೆಂಡ್ನ ಆಕ್ಸ್ಫರ್ಡ್ನಲ್ಲಿರುವ ಕಾಲೇಜು ಸಂಶೋಧನಾ ವಿಶ್ವವಿದ್ಯಾಲಯವಾಗಿದೆ . ೧೦೯೬ ರಲ್ಲೇ ಬೋಧನೆಗೆ ಪುರಾವೆಗಳಿವೆ, ಇದು ಇಂಗ್ಲಿಷ್ ಮಾತನಾಡುವ ಪ್ರಪಂಚದ ಅತ್ಯಂತ ಹಳೆಯ ವಿಶ್ವವಿದ್ಯಾಲಯ ಮತ್ತು ನಿರಂತರ ಕಾರ್ಯಾಚರಣೆಯಲ್ಲಿರುವ ವಿಶ್ವದ ಎರಡನೇ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾಗಿದೆ . ೧೧೬೭ ರಲ್ಲಿ ಎರಡನೆಯ ಹೆನ್ರಿ ಇಂಗ್ಲಿಷ್ ವಿದ್ಯಾರ್ಥಿಗಳು ಪ್ಯಾರಿಸ್ ವಿಶ್ವವಿದ್ಯಾಲಯಕ್ಕೆ ಹೋಗುವುದನ್ನು ನಿಷೇಧಿಸಿದಾಗಿನಿಂದ ಇದು ವೇಗವಾಗಿ ಬೆಳೆಯಿತು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಕೋಪನ್ ಹ್ಯಾಗನ್ English pronunciation: /ˈkoʊpənheɪɡən/; ಡೇನಿಷ್:Københavnpronounced [kʰøb̥ənˈhaʊ̯ˀn] ( ) ಡೆನ್ಮಾರ್ಕ್ ನ ಅತಿ ದೊಡ್ಡ ನಗರ ಹಾಗೂ ರಾಜಧಾನಿಯಾಗಿದ್ದು ನಗರದಲ್ಲಿ 1,181,239 (2010)ಜನಸಂಖ್ಯೆ ಮತ್ತು ಮೆಟ್ರೋಪಾಲಿಟನ್ ನಲ್ಲಿ 1,894,521 (2010)ಜನಸಂಖ್ಯೆಯನ್ನು ಹೊಂದಿದೆ. ಕೋಪನ್ ಹ್ಯಾಗನ್ ಝಿಯಾಲ್ಯಾಂಡ್ ಮತ್ತು ಅಮಾಜೆರ್ ದ್ವೀಪಗಳಲ್ಲಿರುವ ಸ್ಥಳವಾಗಿದೆ. 11ನೆಯ ಶತಮಾನದಲ್ಲಿ ಮೊದಲಬಾರಿಗೆ ದಾಖಲಾದ ಕೋಪನ್ ಹ್ಯಾಗನ್ 15ನೆಯ ಶತಮಾನದಲ್ಲಿ ಡೆನ್ಮಾರ್ಕ್ ನ ರಾಜಧಾನಿಯಾಯಿತು ಮತ್ತು 17ನೆಯ ಶತಮಾನದಲ್ಲಿ ಕ್ರಿಶ್ಚಿಯನ್ IV ರ ಆಳ್ವಿಕೆಯಲ್ಲಿ ಅದು ಪ್ರಾಂತ್ಯದ ಪ್ರಮುಖ ಕೇಂದ್ರವಾಯಿತು.
ಸ್ವಾತಂತ್ರ್ಯ ಪೂರ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗು ಮಹಾತ್ಮ ಗಾಂಧಿಯವರ ನಡುವೆ ಬ್ರಿಟಿಷ್ ಸರ್ಕಾರದ ಅಸ್ಪೃಶ್ಯರಿಗೆ ಪ್ರತ್ಯೇಕ ಮೀಸಲು ಕ್ಷೇತ್ರಗಳನ್ನು ನೀಡುವ ಕುರಿತು ಉಂಟಾದ ಒಪ್ಪಂದವೇ ಪೂನಾ ಒಪ್ಪಂದ. ಅಸ್ಪೃಷ್ಯರಿಗೆ ಚುನಾವಣಾ ಕ್ಷೇತ್ರಗಳಲ್ಲಿ ಪ್ರತ್ಯೇಕ ಮೀಸಲಾತಿ ಒದಗಿಸದಂತೆ ಗಾಂಧೀಜಿ ಪುಣೆಯ ಜೈಲಿನಲ್ಲಿಯೇ ಉಪವಾಸ ನಡೆಸುತ್ತಿದ್ದರು. ಆಗಿನ ಬ್ರಿಟಿಷ್ ಪ್ರಧಾನ ಮಂತ್ರಿ ರಾಮ್ಸಯ್ ಮೆಕ್ಡೊನಾಲ್ಡ್ ಅಸ್ಪೃಶ್ಯರಿಗೆ ಪ್ರತ್ಯೇಕ ಮೀಸಲು ಚುನಾವಣಾ ಕ್ಷೇತ್ರಗಳ ಕೋರಿಕೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.
ಕುಮದ್ವತಿಯು ತುಂಗಾಭದ್ರೆಯ ಉಪನದಿ.ಇದು ಹೊಸನಗರ ತಾಲೂಕಿನ ಹುಂಚಾದ ಹತ್ತಿರ ಬಿಲೇಶ್ವರ ಬೆಟ್ಟದಲ್ಲಿ ಹುಟ್ಟಿ ಕುಂಸಿ ಮತ್ತು ಶಿಕಾರಿಪುರಗಳ ಮೂಲಕ ಉತ್ತರಕ್ಕೆ ಹರಿದು ಹಿರೇಕೇರೂರು ತಾಲ್ಲೂಕನ್ನು ಪ್ರವೇಶಿಸಿ ಹರಿಹರದಿಂದ ಸ್ವಲ್ಪ ಮೇಲೆ ಹಾವೇರಿ ಜಿಲ್ಲೆಯ, ರಾಣೇಬೆನ್ನೂರು ತಾಲ್ಲೂಕಿನ ಮುದೇನೂರು ಪೊಸ್ಟ್581123 ಗ್ರಾಮದ ಹತ್ತಿರ ತುಂಗಾಭದ್ರಾ ನದಿಯನ್ನು ಸೇರುತ್ತದೆ.ಇದಕ್ಕೆ ಚೊರಾಡಿ ನದಿ ಎಂಬ ಹೆಸರೂ ಇದೆ. ಈ ನದಿಯ ಉದ್ದ ಸುಮಾರು 96ಕಿಲೋಮೀಟರ್.ಈ ನದಿಯು ಮಾಸೂರಿನ ಮದಗ ಕೆರೆಗೆ ನೀರನ್ನು ಒದಗಿಸುತ್ತದೆ.ಇದಕ್ಕೆ ಅನೇಕ ಕಡೆ ಚಿಕ್ಕ ಪುಟ್ಟ ಬಂದರುಗಳು,ಅಣೆಕಟ್ಟುಗಳನ್ನು ನಿರ್ಮಿಸಿ ನೀರಾವರಿಗಾಗಿ ಬಳಸುತ್ತಾರೆ.ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ಚಳಿಗಾಲ ಹಾಗೆಯೇ ಬೇಸಿಗೆಯಲ್ಲಿ ಕಾಲದಲ್ಲಿ ಹರಿಯುವಿಕೆ ಸಾಧಾರಣವಾಗಿರುತ್ತದೆ.
ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಮಧ್ಯಯುಗದ ಇತಿಹಾಸಕಾರರ ಪ್ರಕಾರ ಕಿಂಗ್ ಆರ್ಥರ್ ಒಬ್ಬ ಬ್ರಿಟಿಶ್ ನೇತಾರ, ಮತ್ತು ಪೌರಾಣಿಕ ಐತಿಹ್ಯ ಹೊಂದಿದ, ರೋಮಾಂಚಕಾರಿ ವ್ಯಕ್ತಿತ್ವಯುಳ್ಳವನು.ಆರನೆಯ ಶತಮಾನದಲ್ಲಿ ಸಾಕ್ಸೊನ್ ಅವರ ಬ್ರಿಟನ್ ಮೇಲಿನ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದವನು.. ಆರ್ಥರ್ ನ ಕಥೆಯು ಪ್ರಮುಖವಾಗಿ ಜನಪದ ಮತ್ತು ಸಾಹಿತ್ಯಕ ಸಂಶೋಧನೆಗಳಲ್ಲಿ ಕಂಡು ಬರುತ್ತದೆ.ಆದರೆ ಆತನ ಇತಿಹಾಸದ ಅಸ್ತಿತ್ವದ ಬಗ್ಗೆ ಆಧುನಿಕ ಇತಿಹಾಸತಜ್ಞರಲ್ಲಿ ಚರ್ಚೆ,ವಿವಾದಕ್ಕೆ ಕಾರಣವಾಗಿದೆ. ಆರ್ಥರ್ ನ ಐತಿಹಾಸಿಕ ಹಿನ್ನಲೆಯನ್ನು ಹಲವಾರು ಮೂಲಗಳಿಂದ ಪಡೆಯಲಾಗಿದೆ;ಉದಾಹರಣೆಗೆ, ಅನ್ನಾಲೆಸ್ ಕ್ಯಾಂಬ್ರಿ, ಹಿಸ್ಟಾರಿಯಾ ಬ್ರಿಟೊನಮ್ ,ಮತ್ತು ಗಿಲ್ಡಾಸನ ಬರಹಗಳಿಂದ ಪಡೆಯಬಹುದಾಗಿದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಬಿಂಡಿಗನವಿಲ್ಲೆ (Bindiganavile), ವೀರರಾಘವ ಸುಂದರರಾಜ ಅಯ್ಯಂಗಾರ್(೧೯೦೦-೧೯೭೭) ತಮ್ಮ ಗೆಳೆಯರಿಗೆ, ಹಾಗೂ ಮುಂಬಯಿಕರ್ ಗಳಿಗೆ ಬಿ.ವಿ.ಎಸ್.ಅಯ್ಯಂಗಾರ್, ಎಂದು ಹೆಸರಾಗಿದ್ದರು. ಅವರು ಮುಂಬಯಿಗೆ ಬಂದ ಸಮಯದಲ್ಲಿ ಅವರ ಒಡನಾಟಕ್ಕೆ ಬಂದ ಹಲವು ಇಂಜಿನಿಯಗಳು, ಉದ್ಯೋಗಪತಿಗಳು, ಗಣ್ಯ ಅಧಿಕಾರಿಗಳು, ವೈದ್ಯರು, ಪ್ರತಿಷ್ಠಿತ ಪತ್ರಿಕೆಗಳ ಸಂಪಾದಕರು, ಪ್ರಾಚಾರ್ಯರು, ಸಮಾಜಸೇವಾಧುರೀಣರೆಲ್ಲಾ, ಒಟ್ಟಾಗಿ ಸೇರಿ, ಹಲವಾರು ಸಂಘ-ಸಂಸ್ಥೆಗಳನ್ನು, ಶಾಲಾ-ಕಾಲೇಜುಗಳನ್ನೂ ಹುಟ್ಟುಹಾಕಿದರು. ಅವರಲ್ಲಿ ಪ್ರಮುಖರು : ದಿವಾನ್ ಬಹದ್ದೂರ್ ರಾಮಸ್ವಾಮಿ, ಆರ್.
ಸರ್ ಐಸಾಕ್ ನ್ಯೂಟನ್ FRS (4 ಜನವರಿ 1643– 31 ಮಾರ್ಚ್ 1727 [OS: 25 ಡಿಸೆಂಬರ್ 1642– 20 March 1727]) ರವರು ಓರ್ವ ಆಂಗ್ಲ ಭೌತವಿಜ್ಞಾನಿ, ಗಣಿತಜ್ಞ, ಖಗೋಳಶಾಸ್ತ್ರಜ್ಞ, ಸ್ವಾಭಾವಿಕ ತತ್ವಜ್ಞಾನಿ, ರಸಸಿದ್ಧಾಂತಿ, ಹಾಗೂ ಬ್ರಹ್ಮಜ್ಞಾನಿಯಾಗಿದ್ದರು. ಗಮನಾರ್ಹ ಪ್ರಮಾಣದ ತಜ್ಞರು ಹಾಗೂ ಸಾರ್ವಜನಿಕರು ಅವರ ಬಗ್ಗೆ ಇತಿಹಾಸದ ಬಹುಪ್ರಭಾವಿ ವ್ಯಕ್ತಿ ಎಂದು ತಿಳಿದು ಭಾವಿಸಿಕೊಂಡಿದ್ದಾರೆ. 1687ರಲ್ಲಿ ಪ್ರಕಟಿಸಿದ ಅವರ ಫಿಲಾಸೊಫೀಸ್ ನ್ಯಾಚ್ಯುರಲಿಸ್ ಪ್ರಿನ್ಸಿಪಿಯಾ ಮ್ಯಾಥೆಮೆಟಿಕಾ (ಸಾಮಾನ್ಯವಾಗಿ ಪ್ರಿನ್ಸಿಪಿಯಾ ಎಂದು ಕರೆಯಲ್ಪಡುವ) ಪುಸ್ತಕವು ವಿಜ್ಞಾನದ ಇತಿಹಾಸದಲ್ಲೇ ಬಹು ಪ್ರಭಾವೀ ಪುಸ್ತಕಗಳಲ್ಲಿ ಒಂದಾಗಿದ್ದು ಅಭಿಜಾತ ಯಂತ್ರಶಾಸ್ತ್ರಕ್ಕೆ ಉತ್ತಮ ತಳಪಾಯ ಒದಗಿಸಿಕೊಟ್ಟ ಕೃತಿಯೆಂಬ ಹೆಗ್ಗಳಿಕೆ ಹೊಂದಿದೆ.
ಸ್ತನ್ಯಪಾನ (ನರ್ಸಿಂಗ್) ಎಂದರೆ ಅಮ್ಮಂದಿರು ಸ್ತನದಿಂದ ಶಿಶುಗಳು ಮತ್ತು ಚಿಕ್ಕ ಮಕ್ಕಳಿಗೆ ಹಾಲನ್ನು ಉಣಿಸುವುದು. ಸಸ್ತನಿ ವರ್ಗದಲ್ಲಿ ಹಾಲು ತಯಾರಿ ಹಾಗೂ ಕುಡಿಸುವಿಕೆ ಅತ್ಯಂತ ವಿಶಿಷ್ಟವಾದುದು. ಸ್ತನ್ಯಪಾನವು ಮಗುವಿನ ಜೀವನದಲ್ಲಿ ಜನಿಸಿದ ಮೊದಲ ಗಂಟೆಯೊಳಗೆ ಪ್ರಾರಂಭವಾಗುತ್ತದೆ ಮತ್ತು ಹಲವುವೇಳೆ ಮಗುವು ಬಯಸಿದಷ್ಟು ಕಾಲ ಮುಂದುವರಿಯುತ್ತದೆ ಎಂದು ಆರೋಗ್ಯ ವೃತ್ತಿಪರರು ಶಿಫಾರಸು ಮಾಡುತ್ತಾರೆ.