English Wikipedia Top 100

The most-visited English Wikipedia articles, updated daily. Learn more...

  1. 1

    ಭಾರತದ ಸ್ವಾತಂತ್ರ್ಯ ದಿನಾಚರಣೆ

    ಭಾರತದ ಸ್ವಾತಂತ್ರ್ಯ ದಿನಾಚರಣೆ

    ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ದೇಶದಲ್ಲಿ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ.

    834 views (↑109 from yesterday)168,210,271,377,332,410,471,440,725, 834

    9+ day streak

    🔍 🗞️
  2. 2

    ಭಾರತದ ಸಂವಿಧಾನ

    ಭಾರತದ ಸಂವಿಧಾನ

    ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಈ ಸಂವಿಧಾನವು ೯ ಡಿಸೆಂಬರ್ ೧೯೪೭ ರಿಂದ ೨೬ ನವೆಂಬರ್ ೧೯೪೯ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ೨೬ ಜನವರಿ ೧೯೫೦ ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ.

    546 views (↑314 from yesterday)193,245,236,219,235,239,301,227,232, 546

    9+ day streak

    🔍 🗞️
  3. 3

    ಭಾರತೀಯ ಜನತಾ ಪಕ್ಷ

    ಭಾರತೀಯ ಜನತಾ ಪಕ್ಷ

    ಭಾರತೀಯ ಜನತಾ ಪಕ್ಷ ಅಥವಾ ಭಾರತೀಯ ಜನತಾ ಪಾರ್ಟಿ ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ಮತ್ತು ಈಗ ಭಾರತದಲ್ಲಿ ಅಧಿಕಾರದಲ್ಲಿ ಇರುವ ಪಕ್ಷ. ೧೯೮೦ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥೀಯ ಪಕ್ಷ ಎಂದು ಪರಿಗಣಿಸಲಾಗುತ್ತದೆ.

    506 views (↑506 from yesterday)0,0,0,0,0,54,0,0,0, 506

    1 day streak

    🔍 🗞️
  4. 4

    ಕುವೆಂಪು

    ಕುವೆಂಪು

    ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು.

    359 views (↑58 from yesterday)363,322,252,246,238,251,209,302,301, 359

    9+ day streak

    🔍 🗞️
  5. 5

    ಬೆಳವಡಿ ಮಲ್ಲಮ್ಮ

    ಬೆಳವಡಿ ಮಲ್ಲಮ್ಮ

    ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೀರ ರಾಣಿ, ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಸಂಘಟಿಸಿದ ಮೊದಲ ಮಹಿಳೆ. ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿಯ ವೀರ ರಾಣಿ ಮಲ್ಲಮ್ಮ.

    281 views (↓54 from yesterday)62,69,75,69,61,49,45,66,335, 281

    9+ day streak

    🔍 🗞️
  6. 6

    ಝಾನ್ಸಿ ರಾಣಿ ಲಕ್ಷ್ಮೀಬಾಯಿ

    ಝಾನ್ಸಿ ರಾಣಿ ಲಕ್ಷ್ಮೀಬಾಯಿ

    ಝಾನ್ಸಿ ರಾಣಿ ಲಕ್ಷ್ಮೀಬಾಯಿ (೧೯, ನವೆಂಬರ್ ೧೮೨೯ - ೧೭, ಜೂನ್ ೧೮೫೮) ಝಾನ್ಸಿಯ ರಾಣಿಯಾಗಿದ್ದರು ಹಾಗೂ ಅವರು ಭಾರತದ ಒಬ್ಬ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು. ಇವರು ೧೮೫೭ ರ ಭಾರತೀಯ ದಂಗೆಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಮತ್ತು ಭಾರತೀಯ ರಾಷ್ಟ್ರೀಯವಾದಿಗಳಿಗೆ ಬ್ರಿಟಿಷ್ ರಾಜ್‌ಗೆ ಪ್ರತಿರೋಧದ ಸಂಕೇತವಾಯಿತು.

    217 views (↑139 from yesterday)0,38,41,49,0,0,0,53,78, 217

    3 day streak

    🔍 🗞️
  7. 7

    ಸಿಂಹಾಸನ

    ಸಿಂಹಾಸನ

    ಸಿಂಹಾಸನವು ದೊರೆ ಅಥವಾ ಗಣ್ಯವ್ಯಕ್ತಿಯ ಅಧಿಕಾರದ ಪೀಠವಾಗಿರುತ್ತದೆ, ವಿಶೇಷವಾಗಿ ರಾಜ್ಯಾಧಿಕಾರದ ಸಂದರ್ಭಗಳಲ್ಲಿ ಸಾರ್ವಭೌಮನು ಕುಳಿತುಕೊಳ್ಳುವ ಪೀಠ. ಸಾಮಾನ್ಯವಾಗಿ ಸಿಂಹಾಸನವು ಉಳಿದ ಪೀಠಗಳಿಗಿಂತ ಎತ್ತರವಾಗಿದ್ದು ವೇದಿಕೆ ಅಥವಾ ಜಗಲಿ ಮೇಲೆ ಕರೆದೊಯ್ಯಲು ಮೆಟ್ಟಿಲುಗಳಿರುತ್ತವೆ. ಹಲವುವೇಳೆ (ಆದರೆ ಯಾವಾಗಲೂ ಅಲ್ಲ), ಸಿಂಹಾಸನವು ರಾಷ್ಟ್ರ ಅಥವಾ ಅಲ್ಲಿನ ಜನರು ನಂಬಿರುವ ಒಂದು ತತ್ವಶಾಸ್ತ್ರ ಸಂಬಂಧಿ ಅಥವಾ ಧಾರ್ಮಿಕ ಸಿದ್ಧಾಂತಕ್ಕೆ ಕಟ್ಟಲ್ಪಟ್ಟಿರುತ್ತದೆ.

    204 views (↑204 from yesterday)0,0,0,0,0,0,0,0,0, 204

    1 day streak

    🔍 🗞️
  8. 8

    ಕನ್ನಡ

    ಕನ್ನಡ

    ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.

    190 views (↑26 from yesterday)285,215,245,259,247,215,216,173,164, 190

    9+ day streak

    🔍 🗞️
  9. 9

    ಮಹಾತ್ಮ ಗಾಂಧಿ

    ಮಹಾತ್ಮ ಗಾಂಧಿ

    ಮೋಹನ್‌ದಾಸ್ ಕರಮ್‌ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.

    175 views (↑10 from yesterday)98,112,103,116,122,162,81,102,165, 175

    9+ day streak

    🔍 🗞️
  10. 10

    ರಾಣಿ ಚೆನ್ನಭೈರಾದೇವಿ

    ರಾಣಿ ಚೆನ್ನಭೈರಾದೇವಿ

    ಚೆನ್ನಭೈರಾದೇವಿಯು ಸಾಳುವ ವಂಶಕ್ಕೆ ಸೇರಿದ ಒಬ್ಬ ರಾಣಿ. ೧೬ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಈ ರಾಣಿಯು ೫೪ ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಳು. ಪ್ರಸ್ತುತ ಭಟ್ಕಳ ತಾಲೂಕಿನಲ್ಲಿರುವ ಹಾಡವಳ್ಳಿ (ಸಂಗೀತಪುರ) ಮತ್ತು ಗೇರುಸೊಪ್ಪ ಪ್ರಾಂತ್ಯವನ್ನು ಆಳುತ್ತಿದ್ದ ಈಕೆಯನ್ನು ಗೇರುಸೊಪ್ಪೆಯ ರಾಣಿ ಎಂದು ವರ್ಣಿಸಲಾಗಿದೆ.

    164 views (↓93 from yesterday)55,51,74,58,83,81,141,132,257, 164

    9+ day streak

    🔍 🗞️
  11. 11

    ಬಸವೇಶ್ವರ

    ಬಸವೇಶ್ವರ

    ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.

    160 views (↑17 from yesterday)141,140,160,167,119,149,110,135,143, 160

    9+ day streak

    🔍 🗞️
  12. 12

    ದ.ರಾ.ಬೇಂದ್ರೆ

    ದ.ರಾ.ಬೇಂದ್ರೆ

    ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು. ಬೇಂದ್ರೆಯವರು ಕರ್ನಾಟಕದಲ್ಲಿ ವರಕವಿ ಎಂದು ಪ್ರಸಿದ್ಧರಾಗಿದ್ದಾರೆ. ೧೯೭೩ರಲ್ಲಿ, ಬೇಂದ್ರೆಯವರ ಕವನ ಸಂಕಲನವಾದ ನಾಕುತಂತಿಗಾಗಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ನೀಡಲಾಯಿತು ಹಾಗೂ ಬೇಂದ್ರೆಯವರು ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    149 views (↑9 from yesterday)136,152,121,126,118,88,90,142,140, 149

    9+ day streak

    🔍 🗞️
  13. 13

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

    ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.

    144 views (↑2 from yesterday)229,163,166,145,160,112,103,174,142, 144

    9+ day streak

    🔍 🗞️
  14. 14

    ಕನ್ನಡ ಗುಣಿತಾಕ್ಷರಗಳು

    ಕನ್ನಡ ಗುಣಿತಾಕ್ಷರಗಳು

    ವ್ಯಂಜನಗಳಿಗೆ ಸ್ವರ (ಅರ್ಥಾತ್ ಸ್ವರ ಚಿಹ್ನೆ) ಸೇರಿದರೆ ಅದು ಗುಣಿತಾಕ್ಷರವಾಗುತ್ತದೆ. ಕನ್ನಡ ವರ್ಣಮಾಲೆಯಲ್ಲಿ ೩೪ ವ್ಯಂಜನಗಳಿವೆ. ೧೪ ಸ್ವರಗಳಿವೆ.

    143 views (↑15 from yesterday)109,116,151,131,137,99,108,82,128, 143

    9+ day streak

    🔍 🗞️
  15. 15

    ನಾಲ್ವಡಿ ಕೃಷ್ಣರಾಜ ಒಡೆಯರು

    ನಾಲ್ವಡಿ ಕೃಷ್ಣರಾಜ ಒಡೆಯರು

    ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.

    137 views (↓36 from yesterday)91,63,53,65,82,62,51,135,173, 137

    9+ day streak

    🔍 🗞️
  16. 16

    ಹಲ್ಮಿಡಿ ಶಾಸನ

    ಹಲ್ಮಿಡಿ ಶಾಸನ

    ಹಲ್ಮಿಡಿ ಶಾಸನ ಕನ್ನಡ ಲಿಪಿಯಲ್ಲಿ ರಚಿಸಲ್ಪಟ್ಟಿರುವ ಮೊಟ್ಟ ಮೊದಲ ಶಾಸನ ಎಂದು ೨೦೧೭ವರೆಗೂ ದಾಖಲಾಗಿತ್ತು (ಭಾರತೀಯ ಸರ್ವೇಕ್ಷಣಾ ಇಲಾಖೆ ತಾಳಗುಂದದ ಶಾಸನ ಕನ್ನಡದ ಮೊಟ್ಟಮೊದಲ ಶಾಸನ ಎಂದು ಘೋಷಿಸಿತು). ಇದು ಹಾಸನ ಜಿಲ್ಲೆಯ ಬಳಿಯಲ್ಲಿರುವ ಹಲ್ಮಿಡಿ ಎಂಬ ಸ್ಥಳದಲ್ಲಿ ೧೯೩೬ರಲ್ಲಿ ಡಾ. ಎಂ.

    136 views (0 from yesterday)49,71,73,47,57,60,56,0,136, 136

    2 day streak

    🔍 🗞️
  17. 17

    ಬಿ. ಆರ್. ಅಂಬೇಡ್ಕರ್

    ಬಿ. ಆರ್. ಅಂಬೇಡ್ಕರ್

    ಡಾ. ಬಿ.ಆರ್. ಅಂಬೇಡ್ಕರ್ (ಏಪ್ರಿಲ್ ೧೪, ೧೮೯೧ - ಡಿಸೆಂಬರ್ ೬, ೧೯೫೬) - ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು.

    132 views (↓35 from yesterday)113,117,90,103,172,100,78,112,167, 132

    9+ day streak

    🔍 🗞️
  18. 18

    ಕನ್ನಡ ಅಕ್ಷರಮಾಲೆ

    ಕನ್ನಡ ಅಕ್ಷರಮಾಲೆ

    ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.

    131 views (0 from yesterday)114,190,158,110,117,89,113,97,131, 131

    9+ day streak

    🔍 🗞️
  19. 19

    ಮಾಸ್ತಿ ವೆಂಕಟೇಶ ಅಯ್ಯಂಗಾರ್

    ಮಾಸ್ತಿ ವೆಂಕಟೇಶ ಅಯ್ಯಂಗಾರ್

    ಮಾಸ್ತಿ ವೆಂಕಟೇಶ ಅಯ್ಯಂಗಾರರು (ಜೂನ್ ೬ ೧೮೯೧ - ಜೂನ್ ೬ ೧೯೮೬)-ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವರು. ಭಾರತದಲ್ಲಿ ನೀಡಲಾಗುವ ಅತ್ಯುನ್ನತ ಸಾಹಿತ್ಯಿಕ ಗೌರವವಾದ ಜ್ಞಾನಪೀಠ ಪ್ರಶಸ್ತಿ ಯನ್ನು ನೀಡಿ ಗೌರವಿಸಲ್ಪಟ್ಟ ಕನ್ನಡ ಲೇಖಕರಲ್ಲಿ ಇವರು ನಾಲ್ಕನೆಯವರಾಗಿದ್ದರು.

    129 views (↑47 from yesterday)127,118,108,103,91,58,60,116,82, 129

    9+ day streak

    🔍 🗞️
  20. 20

    ರಾಧಿಕಾ ಪಂಡಿತ್

    ರಾಧಿಕಾ ಪಂಡಿತ್

    ರಾಧಿಕಾ ಪಂಡಿತ್ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಟಿ. ಕನ್ನಡ ಸಿನಿಮಾದಲ್ಲಿ ಅವರು ಪ್ರಮುಖ ನಟಿಯಾಗಿದ್ದಾರೆ. ನಂದಗೋಕುಲ ಮತ್ತು ಸುಮಂಗಲಿ ಮುಂತಾದ ಟೆಲಿವಿಷನ್ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದರು.

    128 views (↑128 from yesterday)0,0,0,0,0,0,0,0,0, 128

    1 day streak

    🔍 🗞️
  21. 21

    ಗೌತಮ ಬುದ್ಧ

    ಗೌತಮ ಬುದ್ಧ

    ಗೌತಮ ಬುದ್ಧನು (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ. ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ.

    125 views (↓4 from yesterday)101,68,73,91,62,60,75,71,129, 125

    9+ day streak

    🔍 🗞️
  22. 22

    ಸಂಭೋಗ

    ಸಂಭೋಗ

    ಲೈಂಗಿಕ ಸಂಭೋಗ ಎಂಬುದು ಗಂಡಿನ ಶಿಶ್ನವನ್ನು ಹೆಣ್ಣಿನ ಯೋನಿಯೊಳಕ್ಕೆ ತುರುಕಿಸುವ ಮತ್ತು ಹಿಂತೆಗೆದುಕೊಳ್ಳುವ ದೈಹಿಕ ಕ್ರಿಯೆ. ಹೆಣ್ಣಿನ ದೇಹಕ್ಕೆ ಗಂಡು ತನ್ನ ಶಿಶ್ನವನ್ನು ತುರುಕಿಸುವುದುದನ್ನು ವೇಧನ ಎಂದೂ ಕರೆಯಬಹುದು. ಸಾಮಾನ್ಯವಾಗಿ ಲೈಂಗಿಕ ಆನಂದಕ್ಕಾಗಿ ಸಂಭೋಗ ನಡೆಸುವುದಿದೆ ಮತ್ತು ಸಂತಾನೋತ್ಪತ್ತಿಗಾಗಿಯೂ ಸಂಭೋಗ ನಡೆಸಲಾಗುತ್ತದೆ.

    124 views (↑9 from yesterday)132,92,101,109,175,116,103,121,115, 124

    9+ day streak

    🔍 🗞️
  23. 23

    ವಿಶ್ವ ಸ್ತನ್ಯಪಾನ ಸಪ್ತಾಹ

    ವಿಶ್ವ ಸ್ತನ್ಯಪಾನ ಸಪ್ತಾಹ

    ವಿಶ್ವ ಸ್ತನ್ಯಪಾನ ವಾರ (ಡಬ್ಲ್ಯೂಬಿಡಬ್ಲ್ಯೂ) ವಾರ್ಷಿಕ ಆಚರಣೆಯಾಗಿದ್ದು , ಇದನ್ನು ಪ್ರತಿವರ್ಷ ಆಗಸ್ಟ್ 1 ರಿಂದ ಆಗಸ್ಟ್ 7 ರವರೆಗೆ 120 ಕ್ಕೂ ಹೆಚ್ಚು ದೇಶಗಳಲ್ಲಿ ನಡೆಸಲಾಗುತ್ತದೆ.WBW ವೆಬ್ಸೈಟ್ನ ಅಂಕಿಅಂಶಗಳ ಪ್ರಕಾರ, ಪ್ರಪಂಚದ ಸ್ತನ್ಯಪಾನ ಸಪ್ತಾಹ 2010 ರ ವರೆಗೆ 488 ಸಂಘಟನೆಗಳು ಮತ್ತು 406,620 ಜನ ಭಾಗವಹಿಸುವವರೊಂದಿಗೆ 79 ದೇಶಗಳಲ್ಲಿ 540 ಕಾರ್ಯಕ್ರಮಗಳು ನಡೆದಿವೆ.ಸ್ತನ್ಯಪಾನ ಕ್ರಿಯೆಗಾಗಿ ವಿಶ್ವ ಅಲೈಯನ್ಸ್ , WHO ಮತ್ತು UNICEF, WBW ಯ ಸಂಘಟಿತವಾಗಿದ್ದು, ಮಗು ಜನಿಸಿದ ಮೊದಲ ಆರು ತಿಂಗಳ ಕಾಲ ವಿಶೇಷ ಎದೆ ಹಾಲುಣಿಸುವಿಕೆಯನ್ನು ಉತ್ತೇಜಿಸುವ ಗುರಿಯೊಂದಿಗೆ 1991ರಲ್ಲಿ ಆರಂಭಿಸಲಾಯಿತು ಸ್ತನ್ಯಪಾನ ,ಮಹತ್ವದ ಪೋಷಕಾಂಶಗಳನ್ನು ಒದಗಿಸುತ್ತದೆ, ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ನ್ಯುಮೋನಿಯಾ ,ಪ್ರಾಣಾಂತಿಕ ರೋಗಗಳಿಂದ ರಕ್ಷಣೆ ಮತ್ತು ಬೆಳವಣಿಗೆಯನ್ನು ಅಭಿವೃದ್ಧಿಪಡಿಸುತ್ತದೆ.

    121 views (↓17 from yesterday)0,0,0,0,0,0,65,0,138, 121

    2 day streak

    🔍 🗞️
  24. 24

    ಭಗತ್ ಸಿಂಗ್

    ಭಗತ್ ಸಿಂಗ್

    ಭಗತ್ ಸಿಂಗ್1907 ರಿಂದ 1931 ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ. ಪಂಜಾಬಿನ ಜರನವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ ಜನಿಸಿದರು. ಜನನ ಜರನವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ.

    116 views (↓27 from yesterday)50,70,85,42,87,74,58,94,143, 116

    9+ day streak

    🔍 🗞️
  25. 25

    ಕಿತ್ತೂರು ಚೆನ್ನಮ್ಮ

    ಕಿತ್ತೂರು ಚೆನ್ನಮ್ಮ

    ಕಿತ್ತೂರು ರಾಣಿ ಚೆನ್ನಮ್ಮ (೧೭೭೮-೧೮೨೯) ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಹೋರಾಡಿದ್ದಳು. ಚೆನ್ನಮ್ಮ ನಿಂದ ಕಿತ್ತೂರು ಪ್ರಸಿದ್ಧವಾಗಿದೆ.

    109 views (↑3 from yesterday)54,0,64,60,65,48,55,65,106, 109

    8 day streak

    🔍 🗞️
  26. 26

    ಸಲಹೆ

    ಸಲಹೆ

    ಸಲಹೆಯು (ಸೂಚನೆ, ಬುದ್ಧಿವಾದ) ಯಾವುದೋ ಸಂದರ್ಭದಲ್ಲಿ ಪ್ರಸಾರಮಾಡಿದ ನಿರ್ದಿಷ್ಟ ಪರಿಸ್ಥಿತಿಗಳ ಬಗ್ಗೆ ವೈಯಕ್ತಿಕ ಅಥವಾ ಸಾಂಸ್ಥಿಕ ಅಭಿಪ್ರಾಯಗಳು, ನಂಬಿಕೆ ವ್ಯವಸ್ಥೆಗಳು, ಮೌಲ್ಯಗಳು, ಶಿಫಾರಸುಗಳು ಅಥವಾ ಮಾರ್ಗದರ್ಶನವನ್ನು ಮತ್ತೊಬ್ಬ ವ್ಯಕ್ತಿ, ಗುಂಪು ಅಥವಾ ಪಕ್ಷಕ್ಕೆ ಸಂಬಂಧಿಸುವ ಒಂದು ರೂಪ. ಹಲವುವೇಳೆ ಇದನ್ನು ಕಾರ್ಯ ಮತ್ತು/ಅಥವಾ ನಡತೆಯ ಮಾರ್ಗದರ್ಶಿಯಾಗಿ ನೀಡಲಾಗುತ್ತದೆ. ಸ್ವಲ್ಪ ಹೆಚ್ಚು ಸರಳವಾಗಿ ಹೇಳಿದರೆ, ಸಲಹಾ ಸಂದೇಶವು ಒಂದು ಸಮಸ್ಯೆಯನ್ನು ನಿಭಾಯಿಸಲು, ನಿರ್ಧಾರವನ್ನು ಮಾಡಲು, ಅಥವಾ ಒಂದು ಪರಿಸ್ಥಿತಿಯನ್ನು ನಿರ್ವಹಿಸುವ ಬಗ್ಗೆ ಯೋಚಿಸಿರಬಹುದಾದ, ಹೇಳಿರಬಹುದಾದ ಅಥವಾ ಮಾಡಬಹುದಾದ ಶಿಫಾರಸು.

    106 views (↑106 from yesterday)86,120,50,126,209,94,92,61,0, 106

    1 day streak

    🔍 🗞️
  27. 27

    ಎ.ಪಿ.ಜೆ.ಅಬ್ದುಲ್ ಕಲಾಂ

    ಎ.ಪಿ.ಜೆ.ಅಬ್ದುಲ್ ಕಲಾಂ

    ಅಬ್ದುಲ್ ಕಲಾಂರವರು ಒಬ್ಬ ಭಾರತೀಯ ವಿಜ್ಞಾನಿ ಹಾಗೂ ಭಾರತದ ೧೧ನೆಯ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಇವರು ಹುಟ್ಟಿ ಬೆಳೆದದ್ದು ತಮಿಳುನಾಡಿನ ರಾಮೇಶ್ವರಂನಲ್ಲಿ. ಇವರು ಭೌತಶಾಸ್ತ್ರ ಮತ್ತು ಅಂತರಿಕ್ಷಯಾನ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದರು.

    106 views (↑39 from yesterday)108,198,106,89,86,68,52,51,67, 106

    9+ day streak

    🔍 🗞️
  28. 28

    ಚಾಮುಂಡೇಶ್ವರಿ

    ಚಾಮುಂಡೇಶ್ವರಿ

    ಚಾಮುಂಡೇಶ್ವರಿ ಹಿಂದೂಧರ್ಮದಲ್ಲಿ, ಚಾಮುಂಡಿ ಎಂದೂ ಪರಿಚಿತವಾಗಿರುವ ಹಿಂದೂ ದೇವಿಮಾತೆಯಾದ ದೇವಿಯ ಭಯಾನಕ ರೂಪ ಮತ್ತು ಸಪ್ತ ಮಾತೃಕೆಯರ ಪೈಕಿ ಒಬ್ಬಳು. ಅವಳು ಯೋಧೆ ದುರ್ಗಾ ದೇವಿಯ ಪರಿಚಾರಕಿಯರಾದ ಅರವತ್ತ ನಾಲ್ಕು ಅಥವಾ ಎಂಬತ್ತೊಂದು ತಾಂತ್ರಿಕ ದೇವತೆಗಳಾದ, ಮುಖ್ಯ ಯೋಗಿನಿಗಳ ಪೈಕಿ ಕೂಡ ಒಬ್ಬಳು. ಈ ಹೆಸರು ಚಾಮುಂಡಿಯು ಕೊಂದ ಇಬ್ಬರು ಅಸುರರಾದ ಚಂಡ ಮತ್ತು ಮುಂಡರ ಸಂಯೋಗವಾಗಿದೆ.

    99 views (↑99 from yesterday)0,0,0,0,0,0,0,0,0, 99

    1 day streak

    🔍 🗞️
  29. 29

    ಮೀನಾ

    ಮೀನಾ

    ಮೀನಾ ಇದು ಉತ್ತರ ಮತ್ತು ಪಶ್ಚಿಮ ಭಾರತ ಒಂದು ಬುಡಕಟ್ಟು ಜನಾಂಗವಾಗಿದ್ದು, ಇದನ್ನು ಕೆಲವೊಮ್ಮೆ ಭಿಲ್ ಸಮುದಾಯದ ಉಪ-ಗುಂಪು ಎಂದು ಪರಿಗಣಿಸಲಾಗುತ್ತದೆ. ಅವರು ಮೀನಾ ಭಾಷೆಯನ್ನು ಮಾತನಾಡುತ್ತಾರೆ ಎಂದು ಹೇಳಲಾಗುತ್ತಿತ್ತು, ಇದು ಅಸ್ಪಷ್ಟ ಭಾಷೆಯಾಗಿದೆ. ಇದರ ಹೆಸರನ್ನು ಮೀನಂದಾ ಅಥವಾ ಮೀನಾ ಎಂದೂ ಲಿಪ್ಯಂತರ ಮಾಡಲಾಗುತ್ತದೆ.

    99 views (↑99 from yesterday)0,0,0,0,0,0,0,0,0, 99

    1 day streak

    🔍 🗞️
  30. 30

    ಡಿ.ವಿ.ಗುಂಡಪ್ಪ

    ಡಿ.ವಿ.ಗುಂಡಪ್ಪ

    ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭, ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು.

    98 views (↑11 from yesterday)56,117,90,75,66,76,58,77,87, 98

    9+ day streak

    🔍 🗞️
  31. 31

    ಹಲಸಿನ ಹಣ್ಣು

    ಹಲಸಿನ ಹಣ್ಣು

    ಹಲಸಿನ ಹಣ‍್ಣು ಸಂಸ್ಕ್ರತದಲ್ಲಿ 'ಪನಸ' ಎಂದು ಕರೆಯುವ, ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರುಳ್ಳ ಇಂಗ್ಲಿಷ್ನಲ್ಲಿ ಜಾಕ್ ಫ‍್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ನು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ ಅಂಶಗಳನ್ನೂ ಒಳ ಗೊಂಡಿದೆ. ಹತ್ತರಂದ ಹನ್ನೆರಡು ಮೀಟರ್ ಗಳಷ್ಟು ಎತ್ತರಕ್ಕೆ ಬೆಳೆಯುವ ಹಲಸಿನ ಮರ, ಹಸಿರು ಎಲೆಗಳಿಂದ ಆವ್ರತವಾಗಿದೆ. ಹಲಸಿನ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮನ್ ಗಳು, ಸೆರೊಟಿನಿನ್, ಬೀಟಾ ಕ್ಯಾರೋಟಿನ್, ಸೋಡಿಯಮ್, ಕ್ಯಾಲ್ಶಿಯಮ್, ಪೊಟಾಶಿಯಮ್ ಅಂಶಗಳಿವೆ.

    98 views (↑16 from yesterday)0,0,0,0,0,0,0,0,82, 98

    2 day streak

    🔍 🗞️
  32. 32

    ಕನಕದಾಸರು

    ಕನಕದಾಸರು

    ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.

    98 views (↑31 from yesterday)64,64,89,76,99,57,63,59,67, 98

    9+ day streak

    🔍 🗞️
  33. 33

    ಕರ್ನಾಟಕ

    ಕರ್ನಾಟಕ

    ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.

    97 views (↑28 from yesterday)113,118,92,94,82,84,77,55,69, 97

    9+ day streak

    🔍 🗞️
  34. 34

    ಕರ್ನಾಟಕದ ಮುಖ್ಯಮಂತ್ರಿಗಳು
  35. 35

    ಶಿವರಾಮ ಕಾರಂತ

    ಶಿವರಾಮ ಕಾರಂತ

    ಕೋಟಾ ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨, ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ.

    94 views (↑15 from yesterday)136,99,94,103,99,54,59,102,79, 94

    9+ day streak

    🔍 🗞️
  36. 36

    ರಾಮಾಯಣ

    ರಾಮಾಯಣ

    ರಾಮಾಯಣ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹದ್ಕಾವ್ಯವು ವಾಲ್ಮೀಕಿ ಮಹರ್ಷಿಗಳಿಂದ ರಚಿಸಲ್ಪಟ್ಟಿದೆ.ರಾಮಾಯಣವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಅಯನ=ರಾಮಾಯಣ) ರಾಮನ ಇತಿಹಾಸ ಎಂಬ ಅರ್ಥ ಬರುತ್ತದೆ. ರಾಮಾಯಣವು ೨೪೦೦೦ ಶ್ಲೋಕಗಳಿಂದುಂಟಾದ ೭ ಕಾಂಡಗಳಿಂದ ಕೂಡಿದೆ.

    85 views (↑14 from yesterday)106,79,55,65,115,87,70,71,71, 85

    9+ day streak

    🔍 🗞️
  37. 37

    ಅಷ್ಟದಿಗ್ಗಜ

    ಅಷ್ಟದಿಗ್ಗಜ

    ಅಷ್ಟದಿಗ್ಗಜ ಪದದ ಅರ್ಥ ಎಂಟು ದಿಕ್ಕುಗಳಲ್ಲಿನ ಆನೆಗಳು. ಇದು ಎಂಟು ಆನೆಗಳು ಭೂಮಿಯನ್ನು ಎಂಟು ದಿಕ್ಕುಗಳಲ್ಲಿ ಹೊತ್ತಿವೆ ಎಂಬ ಹಳೆಯ ಹಿಂದೂ ನಂಬಿಕೆಯನ್ನು ಸೂಚಿಸುತ್ತದೆ. ಅಷ್ಟದಿಗ್ಗಜಗಳ ಹೆಸರುಗಳು ಇಂತಿವೆ: ಐರಾವತ, ಪುಂಡರೀಕ, ವಾಮನ, ಕುಮುದ, ಅಂಜನ, ಪುಷ್ಪದಂತ, ಸಾರ್ವಭೌಮ ಮತ್ತು ಸುಪ್ರತೀಕ.

    85 views (↑85 from yesterday)0,0,0,0,0,0,0,0,0, 85

    1 day streak

    🔍 🗞️
  38. 38

    ಸಂಭೋಗ ಭಂಗಿಗಳು

    ಸಂಭೋಗ ಭಂಗಿಗಳು

    ಸಂಭೋಗ ಭಂಗಿ ಎಂದರೆ ಜನರು ಲೈಂಗಿಕ ಸಂಭೋಗ ಅಥವಾ ಇತರ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಳಸುವ ದೇಹದ ಭಂಗಿ. ಲೈಂಗಿಕ ಕ್ರಿಯೆಗಳನ್ನು ಅದರಲ್ಲಿ ಭಾಗವಹಿಸುವವರು ಆ ಕ್ರಿಯೆಗಳನ್ನು ಕೈಗೊಳ್ಳಲಿಕ್ಕೆ ಅನುಸರಿಸುವ ಭಂಗಿಗಳಿಂದ ವಿವರಿಸಲಾಗುತ್ತದೆ. ಲೈಂಗಿಕ ಸಂಭೋಗ ಎಂಬುದು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹಕ್ಕೆ ಇನ್ನೊಬ್ಬರು ತಮ್ಮ ಲೈಂಗಿಕ ಅವಯವವನ್ನು ತುರುಕಿಸುವುದೇ ಆಗಿದ್ದರೂ, ಲೈಂಗಿಕ ಅವಯವವನ್ನು ತುರುಕಿಸದೆ ಮಾಡುವ ಲೈಂಗಿಕ ಭಂಗಿಳು ಸಹ ಪ್ರಚಾರದಲ್ಲಿವೆ.

    84 views (↑84 from yesterday)64,60,60,66,68,61,62,48,0, 84

    1 day streak

    🔍 🗞️
  39. 39

    ಪುತ್ತೂರು ನರಸಿಂಹ ನಾಯಕ್

    ಪುತ್ತೂರು ನರಸಿಂಹ ನಾಯಕ್

    ಪುತ್ತೂರು ನರಸಿಂಹ ನಾಯಕ್ ಕರಾವಳಿ ಕರ್ನಾಟಕದ ಪ್ರಖ್ಯಾತ ಗಾಯಕರಲ್ಲೊಬ್ಬರು. ಅವರು ಭಕ್ತಿಗೀತೆಗಳನ್ನು ಮುಖ್ಯವಾಗಿ ಹರಿದಾಸ ಸಂಯೋಜನೆಗಳನ್ನು ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಹಾಡುತ್ತಾರೆ. ಅವರು ಕನ್ನಡದಲ್ಲಿ ಮುಖ್ಯವಾಗಿ ಪುರಂದರ ದಾಸ, ಕನಕ ದಾಸರ ಭಕ್ತಿಗೀತೆಗಳು ಮತ್ತು ಕೀರ್ತನೆಗಳನ್ನು ಹಾಡಿದ್ದಾರೆ.

    83 views (↑83 from yesterday)0,0,0,0,0,0,0,0,0, 83

    1 day streak

    🔍 🗞️
  40. 40

    ಕಾರ್ಗಿಲ್ ಯುದ್ಧ

    ಕಾರ್ಗಿಲ್ ಯುದ್ಧ

    ಕಾರ್ಗಿಲ್ ಸಂಘರ್ಷ ವೆಂದೇ ಹೆಸರಾದ ಕಾರ್ಗಿಲ್ ಯುದ್ಧವು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷವಾಗಿದ್ದು, ಕಾಶ್ಮೀರದ ಕಾರ್ಗಿಲ್ ಜಿಲ್ಲೆ ಮತ್ತು ನಿಯಂತ್ರಣ ರೇಖೆ (LOC) ಇರುವ ಪ್ರದೇಶಗಳಲ್ಲಿ 1999ರ ಮೇ ಮತ್ತು ಜುಲೈ ನಡುವೆ ಸಂಭವಿಸಿತು. ಭಾರತದಲ್ಲಿ ಈ ಸಂಘರ್ಷವನ್ನು ಆಪರೇಷನ್ ವಿಜಯ್ ಎಂದೂ ಉಲ್ಲೇಖಿಸಲಾಗುತ್ತದೆ, ಇದು ಈ ಪ್ರದೇಶದಲ್ಲಿನ ಭಾರತೀಯ ಸೇನಾ ಕಾರ್ಯಾಚರಣೆಯ ಸಂಕೇತನಾಮವಾಗಿದೆ. ಭಾರತೀಯ ವಾಯುಪಡೆಯು ಭಾರತೀಯ ಸೇನೆಯೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಸೇನೆ ಮತ್ತು ಅರೆಸೇನಾ ಪಡೆಗಳನ್ನು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಖಾಲಿಯಾದ ಭಾರತೀಯ ಸ್ಥಾನಗಳಿಂದ ಹೊರಹಾಕಿತು, ಇದನ್ನು ಆಪರೇಷನ್ ಸಫೇದ್ ಸಾಗರ್ (ಬಿಳಿ ಸಾಗರ) ಎಂದು ಹೆಸರಿಸಲಾಯಿತು.

    83 views (↑83 from yesterday)274,121,0,0,0,0,0,0,0, 83

    1 day streak

    🔍 🗞️
  41. 41

    ಸ್ತನ್ಯಪಾನ

    ಸ್ತನ್ಯಪಾನ

    ಸ್ತನ್ಯಪಾನ (ನರ್ಸಿಂಗ್) ಎಂದರೆ ಅಮ್ಮಂದಿರು ಸ್ತನದಿಂದ ಶಿಶುಗಳು ಮತ್ತು ಚಿಕ್ಕ ಮಕ್ಕಳಿಗೆ ಹಾಲನ್ನು ಉಣಿಸುವುದು. ಸಸ್ತನಿ ವರ್ಗದಲ್ಲಿ ಹಾಲು ತಯಾರಿ ಹಾಗೂ ಕುಡಿಸುವಿಕೆ ಅತ್ಯಂತ ವಿಶಿಷ್ಟವಾದುದು. ಸ್ತನ್ಯಪಾನವು ಮಗುವಿನ ಜೀವನದಲ್ಲಿ ಜನಿಸಿದ ಮೊದಲ ಗಂಟೆಯೊಳಗೆ ಪ್ರಾರಂಭವಾಗುತ್ತದೆ ಮತ್ತು ಹಲವುವೇಳೆ ಮಗುವು ಬಯಸಿದಷ್ಟು ಕಾಲ ಮುಂದುವರಿಯುತ್ತದೆ ಎಂದು ಆರೋಗ್ಯ ವೃತ್ತಿಪರರು ಶಿಫಾರಸು ಮಾಡುತ್ತಾರೆ.

    82 views (↑17 from yesterday)0,0,0,0,0,0,52,0,65, 82

    2 day streak

    🔍 🗞️
  42. 42

    ಸಂಗೊಳ್ಳಿ ರಾಯಣ್ಣ

    ಸಂಗೊಳ್ಳಿ ರಾಯಣ್ಣ

    ಸಂಗೊಳ್ಳಿ ರಾಯಣ್ಣ (15 ಆಗಸ್ಟ್ 1796 - 26 ಜನವರಿ 1831) ಕರ್ನಾಟಕ, ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು - ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರು. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟರಾಗಿದ್ದರು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಅವರ ಸಾವಿನವರೆಗೂ ಹೋರಾಡಿದರು.

    81 views (↑15 from yesterday)46,0,0,0,37,46,41,55,66, 81

    6 day streak

    🔍 🗞️
  43. 43

    ಮೋಕ್ಷಗುಂಡಂ ವಿಶ್ವೇಶ್ವರಯ್ಯ

    ಮೋಕ್ಷಗುಂಡಂ ವಿಶ್ವೇಶ್ವರಯ್ಯ

    ಸರ್ ಎಂ.ವಿ (ಸೆಪ್ಟೆಂಬರ್ ೧೫, ೧೮೬೧ - ಏಪ್ರಿಲ್ ೧೨, ೧೯೬೨) ಎಂದು ಜನಪ್ರಿಯರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ೧೯೧೨ ರಿಂದ ೧೯೧೮ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಇವರ ಹುಟ್ಟಿದ ದಿನವನ್ನು ಭಾರತ ದೇಶದಾದ್ಯಂತ ಅಭಿಯಂತರ ದಿನ ಎಂದು ಆಚರಿಸುತ್ತಾರೆ.

    81 views (↑81 from yesterday)0,0,42,0,0,36,51,54,0, 81

    1 day streak

    🔍 🗞️
  44. 44

    ಹಸ್ತ ಮೈಥುನ

    ಹಸ್ತ ಮೈಥುನ

    ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು. ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕ_ಕ್ರಿಯೆ ಎನ್ನಲಾಗದು.

    76 views (↓2 from yesterday)80,76,40,72,78,64,51,71,78, 76

    9+ day streak

    🔍 🗞️
  45. 45

    ಅಮ್ಮ

    ಅಮ್ಮ

    ಅಮ್ಮ ಎಂಬುದು ಕನ್ನಡದಲ್ಲಿ ತಾಯಿಗೆ ಪರ್ಯಾಯ ಪದ.ಅಮ್ಮ ಎಂಬುದು ತಾಯಿಯನ್ನು ಸಂಬೋಧಿಸುವ ಪದ ಕೂಡಾ ಹೌದು.ಅಲ್ಲದೆ ಹಿರಿಯ ಹೆಂಗಸರನ್ನು ಸಂಬೋಧಿಸುವಾಗ ಮರ್ಯಾದೆ ಸೂಚಕ ಪದವಾಗಿ ಕೂಡಾ ಬಳಕೆಯಾಗುತ್ತದೆ.ಮಾತೃಸ್ವರೂಪಿಣಿಯಾದ ದೇವತೆಗೆ ಅಮ್ಮ ಎಂದು ಕರೆಯುವ ವಾಡಿಕೆ ಇದೆ.ಮೈಮೇಲೆ ಏಳುವ ದಡಾರ ಮುಂತಾದ ಗುಳ್ಳೆಗಳಿಗೆ "ಅಮ್ಮ ಎದ್ದಿದೆ" ಎಂದು ಹೇಳುವ ರೂಢಿ ಇದೆ. ಅಮ್ಮ ಹೆಸರಿನ ಕನ್ನಡ ಚಲನಚಿತ್ರದ ಬಗ್ಗೆ ಲೇಖನ ಈ ಪುಟದಲ್ಲಿ ಇದೆ.

    76 views (↑76 from yesterday)0,0,0,0,0,0,0,0,0, 76

    1 day streak

    🔍 🗞️
  46. 46

    ಸಾಧನ

    ಸಾಧನ

    ಸಾಧನ ಶಬ್ದವು "ಏನನ್ನಾದರೂ ಸಾಧಿಸುವ ವಿಧಾನ" ಎಂದು ಅರ್ಥಕೊಡುವ ಸಾಮೂಹಿಕ ಪದವಾಗಿದೆ. ಈ ಪದವು ಯೋಗಿಕ ಸಂಪ್ರದಾಯದಿಂದ ಬಂದಿದೆ ಮತ್ತು ಈ ವಾಸ್ತವದಲ್ಲಿ ಅವನ/ಅವಳ ಜೀವನದ ಪರಮ ಅಭಿವ್ಯಕ್ತಿಯೆಡೆಗೆ ಸಾಧಕನನ್ನು ಮುನ್ನಡೆಸುವ ಗುರಿಹೊಂದಿರುವ ಯಾವುದೇ ಆಧ್ಯಾತ್ಮಿಕ ಅಭ್ಯಾಸವನ್ನು ಸೂಚಿಸುತ್ತದೆ. ಇದು ವಿವಿಧ ಆಧ್ಯಾತ್ಮಿಕ ಅಥವಾ ಆಚರಣಾ ಸಂಬಂಧಿ ಉದ್ದೇಶಗಳನ್ನು ಸಾಧಿಸಲು ಅನುಸರಿಸಲಾದ ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಸಂಪ್ರದಾಯಗಳಲ್ಲಿನ ಅನೇಕ ವಿಭಾಗಗಳನ್ನು ಒಳಗೊಂಡಿದೆ.

    75 views (↑75 from yesterday)0,0,0,0,0,0,0,0,0, 75

    1 day streak

    🔍 🗞️
  47. 47

    ಪ್ರೇಮ್ ಕುಮಾರ್ (ನಟ)

    ಪ್ರೇಮ್ ಕುಮಾರ್ (ನಟ)

    ಪ್ರೇಮ್ ಕುಮಾರ್ (ಜನನ ೧೮ ಏಪ್ರಿಲ್ ೧೯೭೬) ಇವರು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟ ಮತ್ತು ನಿರ್ಮಾಪಕ. ಪ್ರಾಣ(೨೦೦೪) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನೆನಪಿರಲಿ (೨೦೦೫) ಚಿತ್ರದ ಮೂಲಕ ಅವರು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.

    75 views (↑75 from yesterday)0,0,0,0,0,0,0,0,0, 75

    1 day streak

    🔍 🗞️
  48. 48

    ಕರ್ನಾಟಕದ ನದಿಗಳು

    ಕರ್ನಾಟಕದ ನದಿಗಳು

    75 views (↓8 from yesterday)73,73,50,94,92,64,71,68,83, 75

    9+ day streak

    🔍 🗞️
  49. 49

    ವಜ್ಜಿ

    ವಜ್ಜಿ

    ವಜ್ಜಿ ಅಥವಾ ವೃಜ್ಜಿ ಲಿಚ್ಛವಿಗಳನ್ನು ಒಳಗೊಂಡ ಒಂದು ಒಕ್ಕೂಟವಾಗಿತ್ತು ಮತ್ತು ಪ್ರಾಚೀನ ಭಾರತದ ಪ್ರಧಾನ ಮಹಾಜನಪದಗಳಲ್ಲಿ ಒಂದಾಗಿತ್ತು. ಇವರು ಆಳುತ್ತಿದ್ದ ಪ್ರದೇಶ ಉತ್ತರ ಬಿಹಾರದಲ್ಲಿನ ಮಿಥಿಲಾ ಪ್ರದೇಶವನ್ನು ರೂಪಿಸುತ್ತದೆ ಮತ್ತು ವೈಶಾಲಿ ಇವರ ರಾಜಧಾನಿಯಾಗಿತ್ತು. ಬೌದ್ಧ ಪಠ್ಯ ಅಂಗುತ್ತರ ನಿಕಾಯ ಮತ್ತು ಜೈನ ಪಠ್ಯ ಭಗವತಿ ಸೂತ್ರ ಎರಡೂ ವಜ್ಜಿಯನ್ನು ತಮ್ಮ ಹದಿನಾರು ಮಹಾಜನಪದಗಳ ಪಟ್ಟಿಗಳಲ್ಲಿ ಸೇರಿಸಿದ್ದವು.

    75 views (↑75 from yesterday)0,0,0,0,0,0,0,0,0, 75

    1 day streak

    🔍 🗞️
  50. 50

    ಭಾರತ

    ಭಾರತ

    ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.

    73 views (↑73 from yesterday)78,50,58,0,66,46,64,52,0, 73

    1 day streak

    🔍 🗞️
  51. 51

    ಭಾರತೀಯ ಮೂಲಭೂತ ಹಕ್ಕುಗಳು

    ಭಾರತೀಯ ಮೂಲಭೂತ ಹಕ್ಕುಗಳು

    ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗಿಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌದರಿ ಅವರ ಪ್ರಕಾರ ಇದನ್ನು 'ಮೂಲಭೂತ ಹಕ್ಕು'ಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ |||(3)(ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ ಸಂವಿಧಾನದಲ್ಲಿ ೬(6) ಮೂಲಭೂತ ಹಕ್ಕುಗಳಿವೆ.

    73 views (↑73 from yesterday)44,57,48,74,67,77,90,65,0, 73

    1 day streak

    🔍 🗞️
  52. 52

    ಸ್ವಾಮಿ ವಿವೇಕಾನಂದ

    ಸ್ವಾಮಿ ವಿವೇಕಾನಂದ

    ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.

    73 views (0 from yesterday)0,52,67,0,46,45,130,61,73, 73

    6 day streak

    🔍 🗞️
  53. 53

    ವಿನಾಯಕ ಕೃಷ್ಣ ಗೋಕಾಕ

    ವಿನಾಯಕ ಕೃಷ್ಣ ಗೋಕಾಕ

    ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.

    72 views (↑72 from yesterday)79,59,0,52,59,40,41,72,0, 72

    1 day streak

    🔍 🗞️
  54. 54

    ಗಿರೀಶ್ ಕಾರ್ನಾಡ್

    ಗಿರೀಶ್ ಕಾರ್ನಾಡ್

    ಗಿರೀಶ್ ಕಾರ್ನಾಡ್ (೧೯ ಮೇ ೧೯೩೮ - ೧೦ ಜೂನ್ ೨೦೧೯) ಭಾರತದ ನಾಟಕಕಾರರು, ಲೇಖಕರು, ರಂಗಕರ್ಮಿ, ಸಿನಿಮಾನಟ,ನಿರ್ದೇಶಕ, ಚಿಂತಕ ಹಾಗೂ ಹೋರಾಟಗಾರರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ.

    72 views (↑72 from yesterday)75,55,51,57,69,0,0,0,0, 72

    1 day streak

    🔍 🗞️
  55. 55

    ಕರ್ನಾಟಕದ ಇತಿಹಾಸ

    ಕರ್ನಾಟಕದ ಇತಿಹಾಸ

    ಕರ್ನಾಟಕದ ಇತಿಹಾಸದ ದಾಖಲೆ ೨೦೦೦ ವರ್ಷಕ್ಕೂ ಹೆಚ್ಚಿನದು. ಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ.

    72 views (↓10 from yesterday)65,100,83,74,89,74,68,71,82, 72

    9+ day streak

    🔍 🗞️
  56. 56

    ರಾಜ್‌ಕುಮಾರ್

    ರಾಜ್‌ಕುಮಾರ್

    ಡಾ. ರಾಜ್‌ಕುಮಾರ್, ಅಣ್ಣಾವ್ರು ಎಂದೇ ಖ್ಯಾತರಾದ ಕನ್ನಡ ಚಲನಚಿತ್ರರಂಗ ಮತ್ತು ರಂಗಭೂಮಿಯ ಮೇರುನಟ. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು.

    71 views (↓28 from yesterday)0,0,0,0,0,0,0,0,99, 71

    2 day streak

    🔍 🗞️
  57. 57

    ಗಾದೆ

    ಗಾದೆ

    ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಗೇಡು ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: If you get your hands dirty in the mud, you will get food.

    71 views (↓22 from yesterday)45,49,40,40,0,38,42,51,93, 71

    5 day streak

    🔍 🗞️
  58. 58

    ಪ್ರೇಮಲತಾ ಅಗರ್ವಾಲ್

    ಪ್ರೇಮಲತಾ ಅಗರ್ವಾಲ್

    ಪ್ರೇಮಲತಾ ಅಗರವಾಲ್ (ಜನನ ೧೯೬೩) ವಿಶ್ವದ ಏಳು ಅತಿ ಎತ್ತರದ ಭೂ ಖಂಡದ ಶಿಖರಗಳಾದ ಸೆವೆನ್ ಸಮ್ಮಿಟ್ಸ್ ಅನ್ನು ಅಳೆದ ಮೊದಲ ಭಾರತೀಯ ಮಹಿಳೆ. ೨೦೧೩ ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಮತ್ತು ೨೦೧೭ ರಲ್ಲಿ ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯನ್ನು ಪರ್ವತಾರೋಹಣ ಕ್ಷೇತ್ರದಲ್ಲಿನ ಆಕೆಯ ಸಾಧನೆಗಳಿಗಾಗಿ ನೀಡಲಾಯಿತು. ೧೭ ಮೇ ೨೦೧೧ ರಂದು, ಅವರು ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು (೨೯,೦೩೨) ಏರಿದ ಅತ್ಯಂತ ಹಿರಿಯ ಭಾರತೀಯ ಮಹಿಳೆಯಾದರು.

    71 views (↑71 from yesterday)0,0,0,0,0,0,0,0,0, 71

    1 day streak

    🔍 🗞️
  59. 59

    ಕಾವೇರಿ ನದಿ

    ಕಾವೇರಿ ನದಿ

    ಕಾವೇರಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸ್ಥಳದಲ್ಲಿ ಉಗಮಿಸುವ ಈ ನದಿ, ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

    71 views (↑2 from yesterday)0,40,45,44,83,85,78,103,69, 71

    9 day streak

    🔍 🗞️
  60. 60

    ತತ್ಸಮ-ತದ್ಭವ

    ತತ್ಸಮ-ತದ್ಭವ

    ತತ್ಸಮ ತದ್ಭವ: ಸಂಸ್ಕೃತದ ಮೂಲ ಪದವು ತತ್ಸಮ, ಅದೇ ಪದದ ಅಪಭ್ರಂಶವಾದ ಕನ್ನಡ ಪದವು ತದ್ಭವ - ಇವುಗಳನ್ನು ತತ್ಸಮ-ತದ್ಭವಗಳೆಂದು ಕರೆಯುತ್ತಾರೆ.

    70 views (↑70 from yesterday)52,42,49,46,48,44,0,0,0, 70

    1 day streak

    🔍 🗞️
  61. 61

    ಪುರಂದರದಾಸ

    ಪುರಂದರದಾಸ

    ಪುರಂದರ ದಾಸರು ಕರ್ನಾಟಕದ ದಾಸಪರಂಪರೆಯಲ್ಲಿ ಪ್ರಮುಖರಾದ ದಾಸರು. ಇವರು ಕವಿಗಳು, ಕೀರ್ತನೆಕಾರರು, ಯಕ್ಷಗಾನ ಪ್ರಸಂಗರಚಿಸಿದವರು, ಮತ್ತು ಕರ್ನಾಟಕ ಸಂಗೀತದ ಪಿತಾಮಹ‌ ಎಂದು ಖ್ಯಾತರು. ಇವರ ಜನ್ಮನಾಮ ಶ್ರೀನಿವಾಸ ನಾಯಕ (ಅಥವಾ ಸೀನಪ್ಪ ನಾಯಕ) ಎಂದು.

    69 views (↓10 from yesterday)52,71,74,79,62,63,56,82,79, 69

    9+ day streak

    🔍 🗞️
  62. 62

    ಭಾರತದ ಸ್ವಾತಂತ್ರ್ಯ ಚಳುವಳಿ

    ಭಾರತದ ಸ್ವಾತಂತ್ರ್ಯ ಚಳುವಳಿ

    ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ರ ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು.

    69 views (↑69 from yesterday)0,66,57,62,54,45,63,53,0, 69

    1 day streak

    🔍 🗞️
  63. 63

    ಪ್ರಜಾವಾಣಿ

    ಪ್ರಜಾವಾಣಿ

    ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್‌ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.

    69 views (↓17 from yesterday)0,49,47,54,56,67,53,0,86, 69

    2 day streak

    🔍 🗞️
  64. 64

    ಮೊದಲನೆಯ ಕೆಂಪೇಗೌಡ

    ಮೊದಲನೆಯ ಕೆಂಪೇಗೌಡ

    ಹಿರಿಯ ಕೆಂಪೇಗೌಡರು (೧೫೧೦–೧೫೬೯) ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು. ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ.

    68 views (↑68 from yesterday)0,0,0,0,0,0,0,0,0, 68

    1 day streak

    🔍 🗞️
  65. 65

    ಅಕ್ಕಮಹಾದೇವಿ

    ಅಕ್ಕಮಹಾದೇವಿ

    ಅಕ್ಕಮಹಾದೇವಿ ವಚನ ಸಾಹಿತ್ಯದ ಪ್ರಮುಖರಲ್ಲೊಬ್ಬರು. ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸ ಬಹುದಾಗಿದೆ.

    68 views (↑68 from yesterday)90,89,99,74,57,57,86,56,0, 68

    1 day streak

    🔍 🗞️
  66. 66

    ಕದಂಬ ರಾಜವಂಶ

    ಕದಂಬ ರಾಜವಂಶ

    'ಕದಂಬ' ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ತುಂಬಾ ಹಳೆಯ ಕಲ್ಬರಹವಾದ ತಾಳಗುಂದ ಕಲ್ಬರಹ ವು (ಇದು ಹಲ್ಮಿಡಿ ಶಾಸನ ಕ್ಕಿಂತಲೂ ಹಳೆಯದು) ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಕದಂಬರು (ಕ್ರಿ.ಶ.೩೪೫-೫೪೦) ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ.

    67 views (↑67 from yesterday)51,65,56,58,57,50,53,0,0, 67

    1 day streak

    🔍 🗞️
  67. 67

    ಕ್ರಯೋಜೆನಿಕ್ ಎಲೆಕ್ಟ್ರಾನ್ ಟೊಮೊಗ್ರಫಿ

    ಕ್ರಯೋಜೆನಿಕ್ ಎಲೆಕ್ಟ್ರಾನ್ ಟೊಮೊಗ್ರಫಿ

    ಕ್ರಯೋಜೆನಿಕ್ ಇಟಾಕ್ಟಾನ್ ಟೊಮೊಗ್ರಫಿ (ಕ್ರಯೋಇಟಿ) ಹೆಚ್ಚಿನ ರೆಸಲ್ಯೂಶನ್ (~1–4 nm) ಮೂರು ಆಯಾಮದ ಮಾದರಿಗಳನ್ನು ಪುನರ್ನಿರ್ಮಿಸಲು ಬಳಸಲಾಗುತ್ತದೆ ಚಿತ್ರಣ ತಂತ್ರವಾಗಿದೆ, (ಆದರೆ ಇವುಗಳಿಗೆ ಸೀಮಿತವಾಗಿಲ್ಲ) ಜೈವಿಕ ಮ್ಯಾಕ್ರೋಮಾಲಿಕ್ಯೂಲ್‌ಗಳು ಮತ್ತು ಕೋಶಗಳು.[1][2] ಕ್ರಯೋಇಟಿ ಎಂಬುದು ಟ್ರಾನ್ಸ್‌ಮಿಷನ್ ಇಟಾಲಿಯನ್ ಕ್ರಯೋಮೈಕ್ರೋಸ್ಕೋಪಿ (ಕ್ರಯೋಟಿಐಎಂ) ಯ ವಿಶೇಷ ಅನ್ವಯಿಕೆ, ಇದರಲ್ಲಿನ ಮಾದರಿ ಓರೆಯಾಗಿಸಿ ಚಿತ್ರಿಸಲಾಗಿದೆ, ಇದರ ಪರಿಣಾಮವಾಗಿ ಮಾನವ ದೇಹದ CT ಸ್ಕ್ಯಾನ್‌ನಂತೆಯೇ ಪುನರ್ನಿರ್ಮಾಣವನ್ನು 3D 2D ಯನ್ನು ಬಳಸಬಹುದಾಗಿದೆ ಚಿತ್ರಗಳ ಸರಣಿ. ಇತರ ಇಟಾಲಿಯನ್ ಟೊಮೊಗ್ರಫಿ ತಂತ್ರಗಳಿಗೆ ವ್ಯತಿರಿಕ್ತವಾಗಿ, ಮಾದರಿಗಳನ್ನು ಕ್ರಯೋಜೆನಿಕ್ ಪರಿಸ್ಥಿತಿಗಳಲ್ಲಿ (< −150 °C) ಚಿತ್ರಿಸಲಾಗಿದೆ.

    65 views (↑65 from yesterday)0,0,0,0,0,0,0,0,0, 65

    1 day streak

    🔍 🗞️
  68. 68

    ಬಣಜಿಗ

    ಬಣಜಿಗ

    ಬಣಜಿಗ (Banajiga) ಪಂಗಡವು ವ್ಯಾಪಾರವನ್ನು ಮೂಲ ಕಸುಬಾಗಿಸಿಕೊಂಡ ದಕ್ಷಿಣ ಭಾರತದ ಒಂದು ಸಮುದಾಯವಾಗಿದೆ. ಇವರು ಮುಖ್ಯವಾಗಿ ಕರ್ನಾಟಕದಲ್ಲಿ ವಾಸವಾಗಿದ್ದು, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಬಲಿಜ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ತಮಿಳುನಾಡಿನಲ್ಲಿಯೂ ಇವರ ಜನಸಂಖ್ಯೆ ಕಂಡುಬರುತ್ತದೆ.

    65 views (↑65 from yesterday)0,0,0,0,0,0,0,0,0, 65

    1 day streak

    🔍 🗞️
  69. 69

    ಮಹಾಭಾರತ

    ಮಹಾಭಾರತ

    ಮಹಾಭಾರತ ಮತ್ತು ರಾಮಾಯಣ ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯವಾಗಿದ್ದು ಇವುಗಳನ್ನು ಹಿಂದೂ ಧರ್ಮದಲ್ಲಿ ಪೂಜಿಸುತ್ತಾರೆ. ಮಹಾಭಾರತ ಇದು ಕುರುಕ್ಷೇತ್ರ ಯುದ್ಧದ ಘಟನೆಗಳು ಮತ್ತು ನಂತರದ ಘಟನೆಗಳನ್ನು ವಿವರಿಸುತ್ತದೆ, ಇದು ರಾಜಮನೆತನದ ಸೋದರ ಸಂಬಂಧಿಗಳ ಎರಡು ಗುಂಪುಗಳಾದ ಕೌರವರು ಮತ್ತು ಪಾಂಡವರ ನಡುವಿನ ಉತ್ತರಾಧಿಕಾರದ ಯುದ್ಧವಾಗಿದೆ. ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು.

    65 views (↓12 from yesterday)56,60,70,61,62,65,71,0,77, 65

    2 day streak

    🔍 🗞️
  70. 70

    ನದಿ

    ನದಿ

    ಹೆಚ್ಚು ಪ್ರಮಾಣದ ಹರಿಯುವ ನೀರಿನ ಒಂದು ಸಮೂಹಕ್ಕೆ ನದಿ ಎನ್ನಬಹುದು. ನದಿಗಳು ಸರೋವರದಲ್ಲಿ, ಬಗ್ಗೆ ಅಥವಾ ಊಟೆ(spring)ಯಲ್ಲಿ ಅಥವಾ ಕೆಲವು ಚಿಕ್ಕ ಕೊಳಗಳ ಸಮ್ಮಿಲನದಲ್ಲಿ ಉದ್ಭವಿಸುತ್ತವೆ. ಉದ್ಭವದಿಂದ ಕೆಳಕ್ಕೆ ಹರಿದು ಮಹಾಸಾಗರಗಳಲ್ಲಿ ವಿಲೀನವಾಗುತ್ತವೆ.

    64 views (↑64 from yesterday)0,0,0,0,0,0,0,0,0, 64

    1 day streak

    🔍 🗞️
  71. 71

    ದೃಗ್ವಿಜ್ಞಾನ

    ದೃಗ್ವಿಜ್ಞಾನ

    ದೃಗ್ವಿಜ್ಞಾನ ಎನ್ನುವುದು ಬೆಳಕಿನ ವರ್ತನೆ ಮತ್ತು ಲಕ್ಷಣಗಳನ್ನು, ವಸ್ತುವಿನ ಜೊತೆಗೆ ಅದರ ಸಂವಹನ ಮತ್ತು ಅದನ್ನು ಬಳಸುವ ಅಥವಾ ಶೋಧಿಸುವ ಉಪಕರಣಗಳ ರಚನೆಯನ್ನು ಅಧ್ಯಯಿಸುವ ಭೌತಶಾಸ್ತ್ರದ ಒಂದು ಶಾಖೆ. ದೃಗ್ವಿಜ್ಞಾನವು ಸಾಮಾನ್ಯವಾಗಿ ದೃಷ್ಟಿಗೋಚರವಾದ, ಅತಿನೇರಳೆ, ಮತ್ತು ಅತಿಗೆಂಪು ಬೆಳಕಿನ ಬಗೆಗೆ ವಿವರಿಸುತ್ತದೆ. ಬೆಳಕು ವಿದ್ಯುದಯಸ್ಕಾಂತ ತರಂಗ ಆಗಿರುವುದರಿಂದ, ವಿದ್ಯುದಯಸ್ಕಾಂತ ವಿಕಿರಣದ ಇತರ ರೂಪಗಳು ಉದಾಹರಣೆಗೆ ಕ್ಷ-ಕಿರಣಗಳು, ಸೂಕ್ಷ್ಮತರಂಗಗಳು, ಮತ್ತು ರೇಡಿಯೋ ತರಂಗಗಳು ಇದೇ ರೀತಿಯ ಲಕ್ಷಣಗಳನ್ನು ತೋರುತ್ತದೆ.

    64 views (↑64 from yesterday)0,0,0,0,0,0,0,0,0, 64

    1 day streak

    🔍 🗞️
  72. 72

    ಟಾಯ್ಲೆಟ್: ಏಕ್ ಪ್ರೇಮ್ ಕಥಾ (ಚಲನಚಿತ್ರ)

    ಟಾಯ್ಲೆಟ್: ಏಕ್ ಪ್ರೇಮ್ ಕಥಾ (ಚಲನಚಿತ್ರ)

    ಟಾಯ್ಲೆಟ್: ಏಕ್ ಪ್ರೇಮ್ ಕಥಾ ೨೦೧೭ರ ಒಂದು ಹಿಂದಿ ಹಾಸ್ಯಭರಿತ ನಾಟಕೀಯ ಚಲನಚಿತ್ರ. ಈ ಚಿತ್ರವನ್ನು ಶ್ರೀ ನಾರಾಯಣ್ ಸಿಂಗ್ ನಿರ್ದೇಶಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ನೀರಜ್ ಪಾಂಡೆ ಸಹನಿರ್ಮಾಪಕರಾಗಿರುವ ಈ ಚಿತ್ರದಲ್ಲಿ, ಮುಖ್ಯ ಪಾತ್ರಗಳಲ್ಲಿ ಅಕ್ಷಯ್ ಕುಮಾರ್ ಮತ್ತು ಭೂಮಿ ಪೇಡ್ನೇಕರ್ ನಟಿಸಿದ್ದಾರೆ.

    63 views (↑63 from yesterday)0,0,0,0,0,0,0,0,0, 63

    1 day streak

    🔍 🗞️
  73. 73

    ಹಡಪದ ಅಪ್ಪಣ್ಣ

    ಹಡಪದ ಅಪ್ಪಣ್ಣ

    "ಹಡಪದ ಅಪ್ಪಣ್ಣ" ನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಇವರು "ಹಡಪದ" ಸಮಾಜದವರಾಗಿದ್ದು ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ "ಅನುಭವ ಮಂಟಪದಲ್ಲಿ" ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆಗೆ ಇಂದಿನವರಿಗೆ ಕನ್ನಡಿಯಾಗಿದೆಯೆಂದರೆ ತಪ್ಪಾಗಲಾರದು.

    63 views (↑63 from yesterday)376,330,887,2674,153,105,43,0,0, 63

    1 day streak

    🔍 🗞️
  74. 74

    ಕನ್ನಡ ವ್ಯಾಕರಣ

    ಕನ್ನಡ ವ್ಯಾಕರಣ

    ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.

    62 views (↑62 from yesterday)0,55,47,54,53,0,51,0,0, 62

    1 day streak

    🔍 🗞️
  75. 75

    ಪಿಡಿಎಫ್

    ಪಿಡಿಎಫ್

    ದಾಖಲೆಗಳ ವರ್ಗಾವಣೆಗೆ 1993ರಲ್ಲಿ ಅಡೋಬ್ ಸಿಸ್ಟಮ್ಸ್ ಅವರಿಂದ ಪೋರ್ಟೆಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (ಪಿಡಿಎಫ್ ) ಎಂಬ ಫೈಲ್ ಮಾದರಿ ನಿರ್ಮಾಣವಾಗಿದೆ. ಪ್ರತಿಯೊಂದು ಪಿಡಿಎಫ್ ಪೈಲ್ 2 ಆಯಾಮದ ಡಾಕ್ಯುಮೆಂಟ್‌ಗಳನ್ನು ನೋಡಲು ಬಳಸಲಾಗಿದ್ದು, ಅವು ಯಾವುದೇ ಅಪ್ಲಿಕೇಶನ್ ಸಾಫ್ಟ್‌ವೇರ್, ಹಾರ್ಡ್‌ವೇರ್ ಅಥವಾ ಆಪರೇಟಿಂಗ್ ಸಿಸ್ಟಮ್ ಆಗಿದ್ದರೂ ಕೂಡಾ ನೋಡಲು ಸಾಧ್ಯವಾಗುವಂತೆ ರೂಪಿಸಲಾಗಿದೆ. ಪ್ರತಿಯೊಂದು ಪಿಡಿಎಫ್ ಫೈಲ್, ನಿರ್ದಿಷ್ಟಪಡಿಸಿದ 2ಡಿ ಡಾಕ್ಯುಮೆಂಟ್ ಪುಟ ವಿನ್ಯಾಸವನ್ನು ಹೊಂದಿದ್ದು ಅದು ಪಠ್ಯ, ಅಕ್ಷರ ವಿನ್ಯಾಸ, ಚಿತ್ರಗಳು ಮತ್ತು ದಾಖಲೆಯನ್ನು ರಚಿಸುವ 2ಡಿ ವೆಕ್ಟರ್ ಗ್ರಾಫಿಕ್ಸ್ ಡಾಕ್ಯುಮೆಂಟ್‌ನ ಸಂಪೂರ್ಣ ವಿವರಣೆಯನ್ನು ಒಳಗೊಂಡಿರುತ್ತದೆ.

    62 views (↑62 from yesterday)0,0,0,0,0,0,0,0,0, 62

    1 day streak

    🔍 🗞️
  76. 76

    ರುದ್ರಪ್ಪ ಲಮಾಣಿ

    ರುದ್ರಪ್ಪ ಲಮಾಣಿ

    ರುದ್ರಪ್ಪ ಮಾನಪ್ಪ ಲಮಾಣಿ (ಜನನ ೧ ಜೂನ್ ೧೯೫೯) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಇವರು ಪ್ರಸ್ತುತ ಜುಲೈ ೨೦೨೩ ರಿಂದ ಕರ್ನಾಟಕ ವಿಧಾನಸಭೆಯ ೨೫ನೇ ಉಪ ಸಭಾಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹಾವೇರಿ ಜಿಲ್ಲೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಾಗಿರುವ ಹಾವೇರಿ ವಿಧಾನಸಭಾ ಕ್ಷೇತ್ರ ಶಾಸಕರಾಗಿದ್ದಾರೆ. ಇವರು ೨೦೨೩ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಪ್ರತಿನಿಧಿಸಿ ಗೆದ್ದರು.

    61 views (↓60 from yesterday)0,0,0,0,0,0,0,0,121, 61

    2 day streak

    🔍 🗞️
  77. 77

    ಕುದುರೆಮುಖ

    ಕುದುರೆಮುಖ

    'ಕುದುರೆಯ ಮುಖ'ದ ಹಾಗೆ ಕಾಣಿಸುವ ಪರ್ವತ ಶ್ರೇಣಿಯೇ 'ಕುದುರೆ ಮುಖ'. ಈ ಸುಂದರ ಗಿರಿಧಾಮ, ಚಿಕ್ಕಮಗಳೂರು ಇಂದ ೯೫ ಕಿ.ಮೀ ದೂರದಲ್ಲಿದೆ. ಇಲ್ಲಿಂದ 'ಅರಬ್ಬೀ ಸಮುದ್ರ' ಕಾಣಿಸುತ್ತದೆ.

    60 views (↑60 from yesterday)0,0,0,0,0,0,0,0,0, 60

    1 day streak

    🔍 🗞️
  78. 78

    ಅಮ್ಮನಹಳ್ಳಿ

    ಅಮ್ಮನಹಳ್ಳಿ

    ಅಮ್ಮನಹಳ್ಳಿ ತುಮಕೂರುಜಿಲ್ಲೆಯಗುಬ್ಬಿ ತಾಲೂಕಿನಲ್ಲಿ ಒಂದು ಗ್ರಾಮವಾಗಿದೆ.

    58 views (↑58 from yesterday)0,0,0,0,0,0,0,0,0, 58

    1 day streak

    🔍 🗞️
  79. 79

    ಕಡಲುಕೋಳಿ ಆಲ್ಬಟ್ರಾಸ್

    ಕಡಲುಕೋಳಿ ಆಲ್ಬಟ್ರಾಸ್

    ಕಡಲುಕೋಳಿ ಗಳು, ಡಿಯೊಮೆಡೈಡೆ ಜೀವಶಾಸ್ತ್ರೀಯ ಕುಟುಂಬಕ್ಕೆ ಸೇರಿವೆ. ದೊಡ್ಡ, ಕಡಲುಹಕ್ಕಿಗಳಾದ ಇವು ಪ್ರೊಸೆಲ್ಲರಿಫಾರ್ಮ್‌ಸ್(ಟ್ಯೂಬ್‌ನೋಸ್‌ಸ್‌)ಗಳ ಶ್ರೇಣಿಯಲ್ಲಿರುವ ಪ್ರೊಸೆಲ್ಲರಿಡ್ಸ್, ಸ್ಟಾರ್ಮ್‌-ಪೆಟ್ರಲ್(ಬಿರುಗಾಳಿ ಹಕ್ಕಿ) ಗಳು ಮತ್ತು ಡೈವಿಂಗ್-ಪೆಟ್ರಲ್‌ ಗಳ ಗುಂಪಿಗೆ ಸೇರಿವೆ. ಅವು ದಕ್ಷಿಣ ಸಮುದ್ರ ಮತ್ತು ಉತ್ತರ ಪೆಸಿಫಿಕ್ ದಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ.

    57 views (↑57 from yesterday)0,0,0,0,0,0,0,0,0, 57

    1 day streak

    🔍 🗞️
  80. 80

    ಭಾರತ ಸಂವಿಧಾನದ ಪೀಠಿಕೆ

    ಭಾರತ ಸಂವಿಧಾನದ ಪೀಠಿಕೆ

    ಭಾರತದ ಸಂವಿಧಾನದ ಪೀಠಿಕೆಯು ಈ ಕೆಳಗಿನಂತಿದೆ:

    57 views (↑57 from yesterday)49,62,0,50,56,80,46,0,0, 57

    1 day streak

    🔍 🗞️
  81. 81

    ಯಶವಂತರಾಯಗೌಡ ಪಾಟೀಲ

    ಯಶವಂತರಾಯಗೌಡ ಪಾಟೀಲ

    ಯಶವಂತರಾಯಗೌಡ ಪಾಟೀಲರು ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜಕೀಯ ಧುರೀಣರು.

    57 views (↓90 from yesterday)0,0,0,0,0,0,0,0,147, 57

    2 day streak

    🔍 🗞️
  82. 82

    ವಂದೇ ಮಾತರಮ್

    ವಂದೇ ಮಾತರಮ್

    ವಂದೇ ಮಾತರಂ ಪಶ್ಚಿಮ ಬಂಗಾಳದ ಪ್ರಮುಖ ಲೇಖಕ ಮತ್ತು ಕವಿ ಬಂಕಿಮಚಂದ್ರ ಚಟರ್ಜಿ ರಚಿಸಿದ, ಹಾಡು. ಆದರೆ ಕನ್ನಡದ ಪ್ರಮುಖ ಕಥೆಗಾರ ಶಂಕರ ಬೈಚಬಾಳ ಅವರ ವಂದೇ ಮಾತರಂ-ಸಲೀಂ- ಕೃತಿ ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕದನ ಕೃತಿಯಾಗಿದೆ. ಚಟ್ಟೊ ಉಪಾದ್ಯಾಯರ ಹಾಡು ರಾಷ್ಟ್ರಗೀತೆಯಾಗುವ ಎಲ್ಲ ಅಂಶ, ಅರ್ಹತೆಗಳಿದ್ದರೂ, ರವೀಂದ್ರನಾಥ ಟಾಗೋರ್ ರ ಜನಗಣ ಮನ ಕೃತಿಗೆ ಆ ಪಟ್ಟ ದೊರಕಿತು.

    57 views (↑57 from yesterday)0,0,0,44,0,42,44,0,0, 57

    1 day streak

    🔍 🗞️
  83. 83

    ಇಲಿ (ನದಿ)

    ಇಲಿ (ನದಿ)

    ಸ್ಥಳದೇಶಕಝಾಕಿಸ್ತಾನ್ ಮತ್ತು ಚೀನಾಭೌತಿಕ ಲಕ್ಷಣಗಳುಉಗಮ • ಸ್ಥಳಟೆಕೆಸ್ ಮತ್ತು ಕೋನೆಸ್ ನದಿಗಳು • ಎತ್ತರಟಿಯಾನ್ ಶಾನ್ ಮುಖಭಾಗ ಬಾಲ್ಖಾಶ್ ಸರೋವರಉದ್ದ೧,೪೩೯ ಕಿಮೀ (೮೯೪ ಮೈಲಿ)೧೪೦,೦೦೦ ಕಿಮೀ೨ (೫೪,೦೦೦ ಚದರ ಮೈಲಿ) ಇಲಿ ( Uighur ' ಇಲಿ ದರ್ಯಸಿ ' ; Kazakh: Ile , ئله ; Russian: Или ; Chinese , Dungan , Xiao'erjing : اِلِ حْ; Mongolian , ಅಕ್ಷರಶಃ "ಬೇರ್ನೆಸ್"), ಇದು ವಾಯುವ್ಯ ಚೀನಾ ಮತ್ತು ಆಗ್ನೇಯ ಕಝಾಕಿಸ್ತಾನ್‌ನಲ್ಲಿರುವ ನದಿಯಾಗಿದೆ. ಇದು ಕ್ಸಿನ್‌ಜಿಯಾಂಗ್ ಉಯಿಘರ್ ಸ್ವಾಯತ್ತ ಪ್ರದೇಶದ ಇಲಿ ಕಝಕ್ ಸ್ವಾಯತ್ತ ಪ್ರಾಂತ್ಯದಿಂದ ಕಝಾಕಿಸ್ತಾನ್‌ನ ಅಲ್ಮಾಟಿ ಪ್ರದೇಶಕ್ಕೆ ಹರಿಯುತ್ತದೆ. ಇದು ೧,೪೩೯ ಕಿಲೋಮೀಟರ್ (೮೯೪ ಮೈ) ಉದ್ದ (ಅದರ ಮೂಲ ನದಿ ಟೆಕ್ಸ್ ಸೇರಿದಂತೆ), ೮೧೫ ಕಿಲೋಮೀಟರ್ (೫೦೬ ಮೈ) ಉದ್ದ ಕಝಾಕಿಸ್ತಾನ್‌‍ದಲ್ಲಿ ವಿಸ್ತಾರವಾಗಿದೆ.

    57 views (↑57 from yesterday)0,0,0,0,0,0,0,0,0, 57

    1 day streak

    🔍 🗞️
  84. 84

    ಮರ್ದಾನಿ ೨ (ಚಲನಚಿತ್ರ)

    ಮರ್ದಾನಿ ೨ (ಚಲನಚಿತ್ರ)

    ಮರ್ದಾನಿ 2 ಎಂಬುದು 2019ರ ಭಾರತೀಯ ಹಿಂದಿ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಗೋಪಿ ಪುತ್ರನ್ ಬರೆದು ನಿರ್ದೇಶಿಸಿದ್ದಾರೆ. ಇದು 2014ರ ಮರ್ದಾನಿಯ ನಂತರದ ಭಾಗವಾಗಿದೆ. ಯಶ್ ರಾಜ್ ಫಿಲ್ಮ್ಸ್ ಅಡಿಯಲ್ಲಿ ಆದಿತ್ಯ ಚೋಪ್ರಾ ನಿರ್ಮಿಸಿರುವ ಈ ಚಿತ್ರದಲ್ಲಿ ರಾಣಿ ಮುಖರ್ಜಿ ಹಿಂದಿನ ಚಿತ್ರದ ಪೊಲೀಸ್ ಅಧಿಕಾರಿ ಶಿವಾನಿ ಶಿವಾಜಿ ರಾಯ್ ಪಾತ್ರವನ್ನು ಪುನರಾವರ್ತಿಸಿದ್ದಾರೆ.

    56 views (↑56 from yesterday)0,0,0,0,0,0,0,0,0, 56

    1 day streak

    🔍 🗞️
  85. 85

    ಒನಕೆ ಓಬವ್ವ

    ಒನಕೆ ಓಬವ್ವ

    ಒನಕೆ ಓಬವ್ವ ೧೮ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ. ಇವರನ್ನು ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮ,ರಾಣಿ ಅಬ್ಬಕ್ಕ ರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ.

    56 views (↑56 from yesterday)0,0,0,0,0,0,0,0,0, 56

    1 day streak

    🔍 🗞️
  86. 86

    ಕೃತಕ ಬುದ್ಧಿಮತ್ತೆ

    ಕೃತಕ ಬುದ್ಧಿಮತ್ತೆ

    ಕೃತಕ ಬುದ್ಧಿಮತ್ತೆ ಅಥವಾ ಯಾಂತ್ರಿಕ ಬುದ್ಧಿಮತ್ತೆ (artificial intelligence) ಗಣಕ ವಿಜ್ಞಾನದ ಒಂದು ವಿಭಾಗ. ಪ್ರಮುಖ AI ಪಠ್ಯಪುಸ್ತಕಗಳು ಈ ಕ್ಷೇತ್ರವನ್ನು "ಬುದ್ಧಿಮತ್ತೆಯುಳ್ಳ ಯಂತ್ರಗಳ ವಿನ್ಯಾಸ ಮತ್ತು ಅಧ್ಯಯನ" ಎಂದು ಹೇಳುತ್ತವೆ. ಇದರಲ್ಲಿ ಒಂದು ಯಂತ್ರವು ತನ್ನ ಪರಿಸರವನ್ನು ಗ್ರಹಿಸಿ ತನಗೆ ಕೊಟ್ಟಿರುವ ಗುರಿಯತ್ತ ಹೆಚ್ಚು ಯಶಸ್ಸು ಪಡೆಯಲು ಅಗತ್ಯವಿರುವ ಕ್ರಮಗಳನ್ನು ತಾವೇ ಕೈಗೊಳ್ಳುತ್ತದೆ.

    54 views (↑54 from yesterday)62,64,65,61,59,70,0,0,0, 54

    1 day streak

    🔍 🗞️
  87. 87

    ಲಕ್ನೋ

    ಲಕ್ನೋ

    ಲಕ್ನೋ, ಭಾರತದ ಉತ್ತರ ಪ್ರದೇಶ ರಾಜ್ಯದ ರಾಜಧಾನಿ, ಭಾರತದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಒ೦ದಾಗಿದೆ, ಲಕ್ನೋ ನಾಮಸೂಚಕ ರಾಜ್ಯದ ಆಡಳಿತ ಕೇಂದ್ರದ ಮುಖ್ಯ ಕಛೇರಿಯಾಗಿದೆ ಮತ್ತು ನಾಮಸೂಚಕ ಜಿಲ್ಲಾ ಮತ್ತು ವಿಭಾಗವಾಗಿದೆ. ಭಾರತದ ೮ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ ಮತ್ತು ಉತ್ತರ ಪ್ರದೇಶದ ದೊಡ್ಡ ನಗರವಾಗಿದೆ. ಲಕ್ನೋ ಯಾವಾಗಲೂ ೧೮ ಮತ್ತು ೧೯ ನೇ ಶತಮಾನಗಳಲ್ಲಿ ನವಾಬ್ ಅಧಿಕಾರದ ಸ್ಥಾನವಾಗಿ ಉತ್ತರ ಭಾರತದ ಸಾಂಸ್ಕೃತಿಕ ಮತ್ತು ಕಲಾತ್ಮಕ ಹಬ್ ಆಗಿ ಮತ್ತು ಬಹುಸಂಸ್ಕೃತಿಯ ನಗರವಾಗಿದೆ.

    54 views (↑54 from yesterday)0,0,0,0,0,0,0,0,0, 54

    1 day streak

    🔍 🗞️
  88. 88

    ದೇವನೂರು ಮಹಾದೇವ

    ದೇವನೂರು ಮಹಾದೇವ

    ` ದೇವನೂರು ಮಹಾದೇವ ಇವರು ಕನ್ನಡದ ಸಾಹಿತಿ.

    54 views (↑54 from yesterday)44,0,0,45,77,62,65,108,0, 54

    1 day streak

    🔍 🗞️
  89. 89

    ಚಂದ್ರಶೇಖರ ಕಂಬಾರ

    ಚಂದ್ರಶೇಖರ ಕಂಬಾರ

    ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

    54 views (↑54 from yesterday)114,70,119,163,82,56,0,55,0, 54

    1 day streak

    🔍 🗞️
  90. 90

    ವಿಜಯನಗರ ಸಾಮ್ರಾಜ್ಯ

    ವಿಜಯನಗರ ಸಾಮ್ರಾಜ್ಯ

    ವಿಜಯನಗರ ಸಾಮ್ರಾಜ್ಯ:(ಕ್ರಿ.ಶ.೧೩೩೬ - ೧೬೪೬) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (ಕ್ರಿ.ಶ ೧೨೯೦ - ೧೩೨೦) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ.

    53 views (↑53 from yesterday)52,38,49,47,42,52,61,49,0, 53

    1 day streak

    🔍 🗞️
  91. 91

    ಮೈಸೂರು ಅರಮನೆ

    ಮೈಸೂರು ಅರಮನೆ

    ಅಂಬಾ ವಿಲಾಸ್ ಅರಮನೆ ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ. ಮೈಸೂರು "ಅರಮನೆಗಳ ನಗರ" ಎಂದು ಕರೆಯಲ್ಪಡುತ್ತದೆ. "ಮೈಸೂರು ಅರಮನೆ" ಎನ್ನುವಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ನಿರ್ದೇಶಿಸಿ ಹೇಳಲಾಗುತ್ತದೆ.

    53 views (↓25 from yesterday)68,43,58,40,48,0,50,71,78, 53

    4 day streak

    🔍 🗞️
  92. 92

    ರಾಣಿ ಅಬ್ಬಕ್ಕ

    ರಾಣಿ ಅಬ್ಬಕ್ಕ

    ಅಬ್ಬಕ್ಕ ರಾಣಿ ಅಥವಾ ಅಬ್ಬಕ್ಕ ಮಹಾದೇವಿ ತುಳುನಾಡಿನ ರಾಣಿಯಾಗಿದ್ದಳು. ಇವಳು ೧೬ನೇ ಶತಮಾನದ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಡನೆ ಹೋರಾಡಿದಳು. ರಾಣಿಯು ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶ ವನ್ನಾಳಿದ ಚೌಟ ವಂಶಕ್ಕೆ ಸೇರಿದವಳು.

    53 views (↑53 from yesterday)0,0,0,0,0,0,0,0,0, 53

    1 day streak

    🔍 🗞️
  93. 93

    ಮೌರ್ಯ ಸಾಮ್ರಾಜ್ಯ

    ಮೌರ್ಯ ಸಾಮ್ರಾಜ್ಯ

    ಮೌರ್ಯ ಸಾಮ್ರಾಜ್ಯ (Sanskrit: मौर्य साम्राज्यम:) ಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ. ಕ್ರಿ.ಪೂ. ೩೨೪ ರಿಂದ ಕ್ರಿ.ಪೂ.

    53 views (↑53 from yesterday)0,0,0,62,0,0,0,0,0, 53

    1 day streak

    🔍 🗞️
  94. 94

    ಜ್ಞಾನಪೀಠ ಪ್ರಶಸ್ತಿ

    ಜ್ಞಾನಪೀಠ ಪ್ರಶಸ್ತಿ

    ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.

    53 views (↑53 from yesterday)47,0,44,0,47,0,0,0,0, 53

    1 day streak

    🔍 🗞️
  95. 95

    ಗೋವಿಂದ III (ರಾಷ್ಟ್ರಕೂಟ)

    ಗೋವಿಂದ III (ರಾಷ್ಟ್ರಕೂಟ)

    ಗೋವಿಂದ III (ರಾಷ್ಟ್ರಕೂಟ)ರಾಷ್ಟ್ರಕೂಟ ವಂಶದ ಪ್ರಖ್ಯಾತ ರಾಜ (ಸು.೭೯೩-೮೧೪). ಧ್ರುವನ ಮೂರನೆಯ ಮಗ. ಪ್ರಭೂತವರ್ಷ, ಜಗತ್ತುಂಗ, ಶ್ರೀ ವಲ್ಲಭ, ಕೀರ್ತಿನಾರಾಯಣ, ಜಗತ್ರುದ್ರ, ತ್ರಿಭುವನಧವಳ ಎಂಬ ಬಿರುದುಗಳನ್ನು ಹೊಂದಿದ್ದ.

    52 views (↑52 from yesterday)0,0,0,0,0,0,0,0,0, 52

    1 day streak

    🔍 🗞️
  96. 96

    ಗೆಜೆಟಿಯರ್

    ಗೆಜೆಟಿಯರ್

    ಗೆಜೆಟಿಯರ್ಎಂದರೆ ಸ್ಥಳಗಳ, ಪ್ರದೇಶಗಳ, ದೇಶಗಳ ಹೆಸರುಗಳನ್ನೂ ಅವನ್ನು ಕುರಿತ ವಿವರಗಳನ್ನೂ ಒಳಗೊಂಡ ಕೋಶ. ಗೆಜೆಟುಗಳಲ್ಲಿ ಅಥವಾ ವೃತ್ತಪತ್ರಿಕೆಗಳಲ್ಲಿ ಬರೆಯುವವನನ್ನು ಗೆಜೆಟಿಯರ್ ಎಂದು ಕರೆಯುವ ಪರಿಪಾಟಿ 18ನೆಯ ಶತಮಾನದಲ್ಲಿ ಇತ್ತು. ವೃತ್ತಪತ್ರಿಕೆಯನ್ನೂ ಈ ಹೆಸರಿನಿಂದ ಕರೆಯುತ್ತಿದ್ದದ್ದುಂಟು.

    52 views (↑52 from yesterday)0,0,0,0,0,0,0,0,0, 52

    1 day streak

    🔍 🗞️
  97. 97

    ದಖಿನಿ ಜನಾಂಗ

    ದಖಿನಿ ಜನಾಂಗ

    ದಖ್ನಿ ಅಥವಾ ದಖಿನಿ ಅಥವಾ ದಕ್ಖನಿ ಜನರು ದಖಿನಿ ಮಾತನಾಡುವ ಜನಾಂಗೀಯ ಸಮುದಾಯ, ಅವರು ಮಧ್ಯ ಮತ್ತು ದಕ್ಷಿಣ ಭಾರತದ ದಖಿನ್ ಪ್ರದೇಶದಲ್ಲಿ ವಾಸಿಸುತ್ತಾರೆ ಅಥವಾ ದಖಿನಿ ಭಾಷೆಯನ್ನು ಮಾತನಾಡುತ್ತಾರೆ. 1327 ರಲ್ಲಿ ಮುಹಮ್ಮದ್ ಬಿನ್ ತುಘಲಕ್ ಆಳ್ವಿಕೆಯಲ್ಲಿ ದೆಹಲಿ ಸುಲ್ತಾನತ್ತಿನ ರಾಜಧಾನಿ ದೆಹಲಿಯಿಂದ ದೌಲತಾಬಾದಿಗೆ ಸ್ಥಳಾಂತರಗೊಂಡಾಗ ಸಮುದಾಯವು ತನ್ನ ಮೂಲವನ್ನು ಗುರುತಿಸುತ್ತದೆ. ಮಧ್ಯ ಏಷ್ಯೆ, ಇರಾಕ಼್ ಮತ್ತು ಇರಾನಿನಿಂದ ಬಂದು ಬಹಮನಿ ಸುಲ್ತಾನರತ್ತಿನ (1347) ಅವಧಿಯಲ್ಲಿ ದಕ್ಖಿನ್ ಪ್ರದೇಶದಲ್ಲಿ ನೆಲೆಸಿದ್ದ ಆಫಾಕಿಯರೆಂದು ಕರೆಯಲ್ಪಡುವ ವಲಸಿಗ ಮುಸಲ್ಮಾನರಿಂದಲೂ ಹೆಚ್ಚಿನ ಸಂತತಿಯನ್ನು ಕಂಡುಹಿಡಿಯಬಹುದು.

    52 views (↑52 from yesterday)0,0,0,0,0,0,0,0,0, 52

    1 day streak

    🔍 🗞️
  98. 98

    ಸಂತೆ

    ಸಂತೆ

    ಸಂತೆ ಎಂದರೆ ಜನಪದರು ವಾರದ ಒಂದು ನಿರ್ದಿಷ್ಟ ದಿನ, ಒಂದು ನಿರ್ದಿಷ್ಟ ಸ್ಥಳದಲ್ಲಿ ಒಟ್ಟುಗೂಡಿ ತಮ್ಮ ಗ್ರಾಮೀಣ ಹುಟ್ಟುವಳಿಗಳನ್ನು ವಿನಿಮಯ ಮಾಡಿಕೊಳ್ಳುವ ಆರ್ಥಿಕ ವ್ಯವಸ್ಥೆ (ಸ್ಯಾಂಡಿ). ಗ್ರಾಮೀಣ ಸಂಸ್ಕೃತಿಯ ಹಂತದಲ್ಲಿ ಹುಟ್ಟಿಕೊಂಡ ಒಂದು ವ್ಯಾಪಾರ ವ್ಯವಸ್ಥೆಯಿದು. ವ್ಯಾವಹಾರಿಕ ಬೆಳೆವಣಿಗೆಯ ಇತಿಹಾಸ ಮಾನವನ ನಾಗರಿಕತೆಯ ಇತಿಹಾಸದಂತೆಯೇ ಪ್ರಾಚೀನವಾದುದು.

    51 views (↑51 from yesterday)0,0,0,0,0,0,0,0,0, 51

    1 day streak

    🔍 🗞️
  99. 99

    ಸುಭಾಷ್ ಚಂದ್ರ ಬೋಸ್

    ಸುಭಾಷ್ ಚಂದ್ರ ಬೋಸ್

    ಸುಭಾಷ್ ಚಂದ್ರ ಬೋಸ್ [ಜನನ: ಜನವರಿ ೨೩, ೧೮೯೭ — ಮರಣ (ಮಾಹಿತಿ ಇಲ್ಲ)] ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು. ಅವರು ಭಾರತದ ಮಹಾನ್ ವ್ಯಕ್ತಿಯಾಗಿದ್ದರು.

    51 views (↑51 from yesterday)0,0,0,54,0,48,55,67,0, 51

    1 day streak

    🔍 🗞️
  100. 100

    ಜೈ ಶಾ

    ಜೈ ಶಾ

    ಜೈ ಅಮಿತ್‌ಭಾಯ್ ಶಾ (ಜನನ 22 ಸೆಪ್ಟೆಂಬರ್ 1988) ಒಬ್ಬ ಭಾರತೀಯ ಕ್ರಿಕೆಟ್ ಆಡಳಿತಾಧಿಕಾರಿ ಮತ್ತು ಉದ್ಯಮಿ, ಮತ್ತು ಡಿಸೆಂಬರ್ 2024 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ( ಐಸಿಸಿ ) ಅಧ್ಯಕ್ಷರಾಗಿದ್ದಾರೆ. ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದರು, ಜಾಗತಿಕ ಕ್ರಿಕೆಟ್ ಆಡಳಿತದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಅವರು ಭಾರತದ ಗೃಹ ಸಚಿವ ಅಮಿತ್ ಶಾ ಅವರ ಮಗ.

    51 views (↑51 from yesterday)0,0,0,0,0,0,0,0,0, 51

    1 day streak

    🔍 🗞️

This data from .